ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್ ಪಕ್ಷ ಭರವಸೆಯನ್ನು ನೀಡಿತ್ತು ಹೀಗಾಗಿ ವಿದ್ಯುತ್ ಬಿಲ್ ಕಟ್ಟಲು ಬಸ್ ಟಿಕೆಟ್ ಪಡೆಯಲು ಸಾರ್ವಜನಿಕರು ನಿರಾಕರಿಸುತ್ತಿರುವ ಪ್ರಕರಣಗಳು ಕಂಡುಬರುತ್ತಿವೆ.
ಬಸ್ ಟಿಕೆಟ್ ಪಡೆಯಲು ಹಿಂದೇಟು:
ಮಹಿಳೆಯರಿಗೆ ಬಸ್ಸುಗಳಲ್ಲಿ ಉಚಿತ ಎಂಬ ಕಾಂಗ್ರೆಸ್ ಗ್ಯಾರಂಟಿ ಜಾರಿ ಆಗುವ ಮೊದಲೇ ಮಹಿಳೆಯರು ಬಸ್ ಟಿಕೆಟ್ ಹಣ ಕೊಡಲು ಹಿಂದೇಟು ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ.
ಹೊಸಪೇಟೆಯಲ್ಲಿ ಟಿಕೆಟ್ ತೆಗೆದುಕೊಳ್ಳಲು ಹೇಳಿದಕ್ಕೆ ಮಹಿಳೆ ಒಬ್ಬರು ಕಾಂಗ್ರೆಸ್ ಸರ್ಕಾರಕ್ಕೆ ಹಿಗ್ಗಾ ಮುಗ್ಗಾ ಬೈದ ಘಟನೆ ನಡೆದಿದೆ.
ಹೊಸಪೇಟೆಯ ಘಟನೆಯ ಬೆನ್ನಲ್ಲೇ ರಾಯಚೂರಿನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಬಸ್ ಟಿಕೆಟ್ ಗೆ ನಾನು ರೊಕ್ಕ ಕೊಡಂಗಿಲ್ಲ ಅಂದ್ರೆ ಕೊಡಂಗಿಲ್ಲ ಎಂದು ಅಜ್ಜಿಯೊಬ್ಬರು ಪಟ್ಟು ಹಿಡಿದಿದ್ದು, ಅವರ ಮನವೊಲಿಸುವಲ್ಲಿ ಬಸ್ ಕಂಡಕ್ಟರ್ ಹೈರಾಣಾಗಿ ಹೋಗಿದ್ದರು.
ಕರೆಂಟ್ ಬಿಲ್ ಕಟ್ಟಲು ನಿರಾಕರಣೆ:
ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿಯಾಗುವ ಮೊದಲೇ ವಿದ್ಯುತ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿರುವ ಘಟನೆಗಳು ಕಂಡುಬರುತ್ತಿವೆ.
ಕೊಪ್ಪಳದಲ್ಲಿ ಗ್ರಾಹಕರು ವಿದ್ಯುತ್ ಬಿಲ್ ಕಟ್ಟಲು ನಿರಾಕರಿಸಿದ್ದು, ಚೆಸ್ಕಾಂಗೆ ತಲೆ ನೋವು ತರಿಸಿದೆ.
ಬಿಲ್ ಕಟ್ಟಲು ಹೇಳಿದ್ದಕ್ಕೆ ಸಿಬ್ಬಂದಿಗೆ ಚಪ್ಪಲಿ ಏಟು:
ವಿದ್ಯುತ್ ಬಿಲ್ ಬಾಕಿ ವಸೂಲಿಗೆ ಹೋಗಿದ್ದ ಚೆಸ್ಕಾಂ ಸಿಬ್ಬಂದಿಗೆ ವ್ಯಕ್ತಿ ಒಬ್ಬರು ತಿಳಿಸಿರುವ ಘಟನೆ ಕೊಪ್ಪಳದ ಕೊಕ್ಕನಪಳ್ಳಿ ಗ್ರಾಮದಲ್ಲಿ ನಡೆದಿದೆ.
ಕರೆಂಟ್ ಬಿಲ್ ಕಟ್ಟಲು ನಿರಾಕರಿಸಿ ಚೆಸ್ಕಾಂ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
ಕರೆಂಟ್ ಬಿಲ್ ಕಟ್ಟಲು ಡಂಗುರ:
ಜನ ಕರೆಂಟ್ ಬಿಲ್ ಕಟ್ಟಲು ನಿರಾಕರಿಸಿದಕ್ಕೆ ಕೊಪ್ಪಳ ಚೆಸ್ಕಾಂ ಸಿಬ್ಬಂದಿ ಕರೆಂಟ್ ಬಿಲ್ ಕಟ್ಟಿ ಎಂದು ಧ್ವನಿವರ್ಧಕದ ಮೂಲಕ ಡಂಗುರ ಸಾರಿದ್ದಾರೆ.
ಚೆಸ್ಕಾಂ ಸಿಬ್ಬಂದಿ ವಾಹನಕ್ಕೆ ದ್ವನಿವರ್ಧಕ ಅಳವಡಿಸಿ ಹಳ್ಳಿಗಳನ್ನು ಸುತ್ತುತ್ತಾ ಬಿಲ್ ಪಾವತಿ ಮಾಡುವಂತೆ ಡಂಗುರ ಸಾರುತ್ತ ಜನರಿಗೆ ಮಾಹಿತಿಯನ್ನು ನೀಡುತ್ತಿದ್ದಾರೆ.