ಕರ್ನಾಟಕ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎನ್ನುವ ಚರ್ಚೆ ಜೋರಾಗಿದ್ದು ತೀವ್ರ ಕುತೂಹಲ ಮೂಡಿಸಿತ್ತು. ಹೈಕಂಮಾಡ್ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡುವ ಮೂಲಕ ಜನರ ಕಾತುರಕ್ಕೆ ತೆರೆ ಎಳೆದಿದೆ.
ಕರ್ನಾಟಕದಲ್ಲಿ ಸಿಎಂ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವೆ ತೀವ್ರ ಪೈಪೋಟಿ ಉಂಟಾಗಿತ್ತು. ಇದರಿಂದಾಗಿ ಚುನಾವಣಾ ಫಲಿತಾಂಶ ಹೊರಬಿದ್ದು ಐದು ದಿನವಾದರೂ ಕೂಡಾ ಬಹುಮತ ಪಡೆದ ಕಾಂಗ್ರೆಸ್ ಪಕ್ಷ ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ.
ಇನ್ನೂ ಸಿದ್ದರಾಮಯ್ಯಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಪ್ರಾರಂಭವಾಗಿದ್ದು, ಎರಡನೇ ಭಾರಿ ಮುಖ್ಯಮಂತ್ರಿಯಾಗಿರುವ ಖ್ಯಾತಿಗೆ ಪಾತ್ರವಾಗಲಿದ್ದಾರೆ. ಪೂರ್ಣಪ್ರಮಾಣದ 5 ವರ್ಷ ಅಧಿಕಾರ ನಡೆಸಿರುವ ಮೂರು ಜನ ಮುಖ್ಯಮಂತ್ರಿಗಳಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರಾಗಿದ್ದಾರೆ.
ಕರ್ನಾಟಕ ಇತಿಹಾಸದಲ್ಲಿ ಇಲ್ಲಿಯವರೆಗೆ 23 ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದು, 6 ಬಾರಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಒಟ್ಟು 18 ಮುಖ್ಯಮಂತ್ರಿಗಳು ಅಧಿಕಾರ ನಡೆಸಿದ್ದಾರೆ.
ಪೂರ್ಣಾವಧಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳು:
1962ರಿಂದ 1968ದ ವರೆಗೆ ಎಸ್. ನಿಜಲಿಂಗಪ್ಪ, 1972ರಿಂದ 1977ರವರೆಗೆ ಡಿ. ದೇವರಾಜ ಅರಸು ಹಾಗೂ 2013-2018 ಸಿದ್ದರಾಮಯ್ಯ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪೂರ್ಣಾವಧಿ ಆಡಳಿತ ಪೂರೈಸಿದ ಮುಖ್ಯಮಂತ್ರಿಗಳಾಗಿದ್ದಾರೆ. ಈ ಮೂವರು ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದವರೇ ಎಂಬುದು ವಿಶೇಷ.
ಇಲ್ಲಿಯವರೆಗೆ ಆಡಳಿತ ಮಾಡಿದ ಮುಖ್ಯಮಂತ್ರಿಗಳು:
ಅಕ್ಟೋಬರ್ 25, 1947 ರಿಂದ ಮಾರ್ಚ್ 30, 1952 ರವರೆಗೆ ಕಾಂಗ್ರೆಸ್ ಪಕ್ಷದಿಂದ ಕೆ. ಚೆಂಹಲರಾಯ ರೆಡ್ಡಿ ಆಡಳಿತ ನಡೆಸಿದರು ಇನ್ನೂ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಕೆಂಗಲ್ ಹನುಮಂತಯ್ಯ ಮಾರ್ಚ್ 30, 1952 ಆಗಸ್ಟ್ 19, 1956 ರವರೆಗೆ ಸರ್ಕಾರ ನಡೆಸಿದರು.
ಕಡಿದಾಳ್ ಮಂಜಪ್ಪ ಕಾಂಗ್ರೆಸ್ ಪಕ್ಷ ದಿಂದ ಆಗಸ್ಟ್ 19, 1956 ರಿಂದ ಅಕ್ಟೋಬರ್ 31, 1956 ರವರೆಗೆ ಹಾಗೂ ಎಸ್. ನಿಜಲಿಂಗಪ್ಪ ನವೆಂಬರ್ 1, 1956 ರಿಂದ ಮೇ 16, 1958 ರವರೆಗೆ ಕಾಂಗ್ರೆಸ್ ಪಕ್ಷದಿಂದ ಆಡಳಿತ ನಡೆಸಿದರು.
ಕಾಂಗ್ರೆಸ್ ಪಕ್ಷದಿಂದ ಮೇ 16, 1958 ರಿಂದ ಮಾರ್ಚ್ 09, 1962 ರವರೆಗೆ ಬಿ.ಡಿ. ಜತ್ತಿ ಹಾಗೂ ಎಸ್.ಆರ್. ಕಂಟಿ ಮಾರ್ಚ್ 14, 1962 ರಿಂದ ಜೂನ್ 20, 1962 ರವರೆಗೆ ಸರ್ಕಾರ ನಡೆಸಿದರು.
ಎರಡನೇ ಬಾರಿಗೆ ಎಸ್. ನಿಜಲಿಂಗಪ್ಪ ಜೂನ್ 21, 1962 ರಿಂದ ಮೇ 28, 1968 ರವರೆಗೆ ಮುಖ್ಯಮಂತ್ರಿಯಾಗಿ ಸರ್ಕಾರ ಸಾರಥ್ಯವನ್ನು ವಹಿಸಿದರು. ವೀರೆಂದ್ರ ಪಾಟೀಲ್ ಕಾಂಗ್ರೆಸ್ ಪಕ್ಷದಿಂದ ಮೇ 29, 1968 ರಿಂದ ಮಾರ್ಚ್ 18, 1971 ರವರೆಗೆ ಆಡಳಿತ ನಡೆಸಿದರು.
ಡಿ. ದೇವರಾಜ ಅರಸ್ ಕಾಂಗ್ರೆಸ್ ಪಕ್ಷ ದಿಂದ ಆಯ್ಕೆಯಾಗಿ ಮಾರ್ಚ್ 20, 1972 ರಿಂದ ಡಿಸೆಂಬರ್ 31, 1977 ರವರೆಗೆ ಪೂರ್ಣವದಿಯ ಮುಖ್ಯಮಂತ್ರಿಯಾಗಿ ಸೇವೆಯನ್ನು ಸಲ್ಲಿಸಿದರು. ಹಾಗೆಯೇ ಪುನಃ ಆಯ್ಕೆಯಾದ ಡಿ. ದೇವರಾಜ ಅರಸ್ ಫೆಬ್ರುವರಿ 28, 1978 ರಿಂದ ಜನವರಿ 7, 1980 ರವರೆಗೆ ಆಡಳಿತ ನಡೆಸಿದರು.
ಆರ್. ಗುಂಡುರಾವ್ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ಜನವರಿ 12, 1980 ರಿಂದ ಜನವರಿ 6, 1983 ರವರೆಗೆ ಹಾಗೂ ರಾಮಕೃಷ್ಣ ಹೆಗ್ಡೆ ಜನತಾ ಪಾರ್ಟಿಯಿಂದ ಆಯ್ಕೆಯಾಗಿ ಆಗಸ್ಟ್ 13, 1988 ರಿಂದ ಏಪ್ರಿಲ್ 21, 1989 ರವರೆಗೆ ಆಡಳಿತ ನಡೆಸಿದರು.
ಎಸ್.ಆರ್. ಬೊಮಾಯಿ ಜನತಾ ಪಾರ್ಟಿಯಿಂದ ಆಗಸ್ಟ್ 13, 1988 – ಏಪ್ರಿಲ್ 21, 1989ವರೆಗೆ ಹಾಗೂ ಮರು ಆಯ್ಕೆಯಾದ ವೀರೆಂದ್ರ ಪಾಟಿಲ್ ಕಾಂಗ್ರೆಸ್ ಪಕ್ಷದಿಂದ ನವೆಂಬರ್ 30, 1989 ರಿಂದ ಅಕ್ಟೋಬರ್ 10, 1990 ರವರೆಗೆ ಆಡಳಿತ ನಡೆಸಿದರು.
ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಎಸ್. ಬಂಗಾರಪ್ಪ ಅಕ್ಟೋಬರ್ 17, 1990 ರಿಂದ ನವೆಂಬರ್ 19, 1992 ರವರೆಗೆ ಹಾಗೂ ಎಂ. ವೀರಪ್ಪ ಮೊಯ್ಲಿ ನವೆಂಬರ್ 19, 1992 ರಿಂದ ಡಿಸೆಂಬರ್ 11, 1994 ರವೆರೆಗೆ ಸರ್ಕಾರ ನಡೆಸಿದರು.
ಹೆಚ್.ಡಿ.ದೇವೆಗೌಡ ಜನತಾದಳದಿಂದ ಡಿಸೆಂಬರ್ 11, 1994 ರಿಂದ ಮೇ 31, 1996 ರವರೆಗೆ ಹಾಗೂ ಜೆ.ಹೆಚ್. ಪಟೇಲ್ ಮೇ 31, 1996 ರಿಂದ ಅಕ್ಟೋಬರ್ 07, 1999 ರವೆರೆಗೆ ಆಡಳಿತ ನಡೆಸಿದರು.
ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಎಸ್.ಎಂ. ಕೃಷ್ಣ ಅಕ್ಟೋಬರ್ 11, 1999 ರಿಂದ ಮೇ 28, 2004 ರವೆರೆಗೆ ಹಾಗೂ ಧರಂಸಿಂಗ್ – ಕಾಂಗ್ರೆಸ್ ಪಕ್ಷ – ಕಾಂಗ್ರೆಸ್, ಮೇ 28, 2004 ರಿಂದ ಫೆಬ್ರುವರಿ 02, 2006 ರವೆರೆಗೆ ಆಡಳಿತ ನಡೆಸಿದರು.
ಹೆಚ್.ಡಿ.ಕುಮಾರಸ್ವಾಮಿ ಜ್ಯಾತ್ಯಾತಿತ ಜನತಾದಿಂದ ಆಯ್ಕೆಯಾಗಿ ಫೆಬ್ರುವರಿ 03, 2006 ರಿಂದ ಅಕ್ಟೋಬರ್ 08, 2007 ರವೆರೆಗೆ ಹಾಗೂ ಬಿ.ಎಸ್.ಯಡಿಯೂರಪ್ಪ – ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾಗಿ ನವೆಂಬರ್ 12, 2007 ರಿಂದ ನವೆಂಬರ್ 19, 2007 ರವೆರೆಗೆ ಸರ್ಕಾರ ನಡೆಸಿದರು.
ನಂತರ ಸತತ ವಾಗಿ ಮೂರು ಬಾರಿ ಭಾರತೀಯ ಜನತಾ ಪಾರ್ಟಿಯಿಂದ ಆಯ್ಕೆಯಾದ ಬಿ.ಎಸ್.ಯಡಿಯೂರಪ್ಪ – ಭಾರತೀಯ ಜನತಾ ಪಾರ್ಟಿ- ಮೇ 30, 2008 ರಿಂದ ಆಗಸ್ಟ್ 04, 2011 ರವೆರೆಗೆ, ಡಿ.ವಿ.ಸದಾನಂದ ಗೌಡ ಭಾರತೀಯ ಜನತಾ ಪಾರ್ಟಿ ಆಗಸ್ಟ್ 05, 2011 ರಿಂದ ಜುಲೈ 11, 2012 ರವೆರೆಗೆ ಹಾಗೂ ಜಗದೀಶ್ ಶಿವಪ್ಪ ಶೆಟ್ಟರ್ ಭಾರತೀಯ ಜನತಾ ಪಾರ್ಟಿ ಜುಲೈ 12, 2012 ರಿಂದ ಮೇ 08, 2013 ರವೆರಗೆ ಆಡಳಿತ ನಡೆಸಿದರು.
ಬಳಿಕ ಕಾಂಗ್ರೆಸ್ ಪಕ್ಷದ ಸಿದ್ಧರಾಮಯ್ಯ ಮೇ 13, 2013 ರಿಂದ ಮೇ 15, 2018 ರವೆರೆಗೆ ಸರ್ಕಾರ ನಡೆಸಿದರು. ಬಳಿಕ ಬಿ.ಎಸ್.ಯಡಿಯೂರಪ್ಪ ಮೇ 17, 2018 ರಿಂದ ಮೇ 23, 2018 ರವರಗೆ ಆಡಳಿತ ನಡೆಸಿದರು
ಜ್ಯಾತ್ಯಾತಿತ ಜನತಾದಳದಿಂದ ಚುನಾಯಿತರಾದ ಹೆಚ್.ಡಿ.ಕುಮಾರಸ್ವಾಮಿ ಮೇ 23, 2018 ರಿಂದ ಜುಲೈ 23, 2019 ರವರೆಗೆ ಹಾಗೂ ಬಿಜೆಪಿಯಿಂದ ಚುನಾಯಿತರಾದ ಬಿ.ಎಸ್.ಯಡಿಯೂರಪ್ಪ ಜುಲೈ 26, 2019 ರಿಂದ ಜುಲೈ 26, 2021 ರವರೆಗೆ ಸರ್ಕಾರ ನಡೆಸಿದರು. ಬಳಿಕ ಅದೇ ಪಕ್ಷದ ನಾಯಕರಾದ ಬಸವರಾಜ ಬೊಮ್ಮಾಯಿ ಜುಲೈ 28, 2021 ರಿಂದ ಮೇ 14, 2023ರ ವರೆಗೆ ಆಡಳಿತ ನಡೆಸಿದರು.