ಪದ್ಮ ಭೂಷಣ ಪ್ರಶಸ್ತಿಯಿಂದ ಸಮ್ಮಾನಿತರಾದ ಸಾಹಿತಿ ಡಾ.ಎಸ್.ಎಲ್ ಭೈರಪ್ಪನವರ ಅನೇಕ ಪ್ರಸಿದ್ಧ ಕಾದಂಬರಿಗಳ ಸಾಲಿನಲ್ಲಿ ವಂಶವೃಕ್ಷವು ಅಗ್ರಪಂಥೀಯವಾಗಿದೆ.
ಕಾದಂಬರಿಯ ಪಾತ್ರಗಳು ಮತ್ತು ಕಾದಂಬರಿಯ ಆಶಯ ಇಂದಿಗೂ ಪ್ರಸ್ತುತವಾಗಿದೆ. ಈ ಕಾದಂಬರಿಯಲ್ಲಿ ಆಧ್ಯಾತ್ಮ, ವಿಧವಾ ಪುನರ್ವಿವಾಹ , , ಪ್ರೀತಿ, ಸಂಪ್ರದಾಯ, ಪ್ರತಿಷ್ಠೆ ಇಂತಹ ಜ್ವಲಂತವಿರುವ ಅಂಶಗಳನ್ನೇ ಇದರಲ್ಲಿ ತಿಳಿಸಿದ್ದಾರೆ. ವಂಶವೃಕ್ಷ ಎಲ್ಲ ಕಾದಂಬರಿಗಳಿಗಿಂತ ಭಿನ್ನವಾಗಿರಲು ಮತ್ತೋಂದು ಕಾರಣವೆಂದರೆ ೬೦ರ ದಶಕದಲ್ಲಿ ಇನ್ನೂ ದೇಶದಲ್ಲಿ ಸಂಪ್ರದಾಯವಾದಿಗಳು ಇದ್ದಂತಹ ಕಾಲದಲ್ಲೇ ಇಂತಹ ವಿಕಾಸಿತ ವಿಚಾರವನ್ನು ಜನರ ಮುಂದೆ ತಮ್ಮ ಕೃತಿಯ ಮೂಲಕ ಓದುಗರಿಗೆ ತಲುಪಿಸುದೆಂದರೆ ಅದಕ್ಕೆ ಭೈರಪ್ಪನವರ ಛಾತಿಯನ್ನು ಮೆಚ್ಚ ಬೇಕು. ಇಲ್ಲಿ ಬರುವ ಪಾತ್ರಗಳ ಮುಖಾಂತರ ಸಮಜಾದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುತ್ತಾರೆ.
ಶ್ರೀನಿವಾಸ ಶ್ರೋತ್ರೀಗಳು ಸಂಪ್ರದಾಯಸ್ಥ ವ್ಯಕ್ತಿಗಳಾಗಿದ್ದು ಅವರಿಗೆ ತಮ್ಮ ಕುಟುಂಬ ವಂಶದ ಬಗ್ಗೆ ಅತಿಯಾದ ಅಭಿಮಾನ ಮತ್ತು ಗರ್ವವನ್ನು ಹೊಂದಿರುವ ವ್ಯಕ್ತಿಯಾಗಿರುತ್ತಾರೆ. ಮಗ ಕಪಿಲ ನದಿಯ ರಬಸಕ್ಕೆ ಸಿಲುಕಿ ಮರಣ ಹೊಂದಿರುತ್ತಾನೆ. ಅವನ ಹೆಂಡತಿ ಕಾತ್ಯಯಿನಿ ಒಂದು ಚಿಕ್ಕ ಗಂಡು ಮಗುವಿನ ತಾಯಿ. ಕಾತ್ಯಯಿನಿ ಗೆ ಇನ್ನು ಚಿಕ್ಕ ವಯಸ್ಸು ಶ್ರೀನಿವಾಸ ಶ್ರೋತೃಗಳು ಆಧ್ಯಾತ್ಮ ಮನೋಭಾವದವರಾದರೂ ಅದನ್ನು ಬೇರೆಯವರ ಮೇಲೆ ಬಲವಂತದಿಂದ ಹೇರುವವರಲ್ಲ, ಅದಕ್ಕೆ ಮಗ ಸತ್ತ ಮೇಲೆ ತಮ್ಮ ಸೋಸೆಗೆ ಸಂಪ್ರದಾಯದಂತೆ ತಲೆ ಬೋಳಿಸಿ ಕೆಂಪು ಸೀರೆ ಉಡಲು ಹೇಳುವುದಿಲ್ಲ. ಕಾತ್ಯಯಿನಿಗೆ ಮನೆಯಲ್ಲಿ ಗಂಡ ಇಲ್ಲ ಎನ್ನುವುದು ಬಿಟ್ಟರೆ ಮತ್ತಾವ ಕೊರತೆಯು ಇರುವದಿಲ್ಲ. ಇನ್ನು ಶ್ರೀನಿವಾಸ ಶ್ರೋತ್ರಿಗಳು ಮಗನ ಸಾವಿನ ಬಗ್ಗೆ ನಿರ್ಲಿಪ್ತ ಭಾವನೆಯನ್ನ ಹೊಂದಿದ್ದರು, ಅವರ ಹೆಂಡತಿಗೆ ಮಗನನ್ನು ನೆನೆದು ಕೆಲವೋಂದು ಬಾರಿ ದುಖಿಃಸುವುದು ತಾಯಿಯ ಅಂತಃಕರಣವನ್ನು ವ್ಯಕ್ತಪಡಿಸುತ್ತದೆ.
ಶ್ರೀನಿವಾಸ ಶ್ರೋತ್ರೀಗಳ ಮಿತ್ರರು ಮತ್ತು ಇತಿಹಾಸದ ಪ್ರಾಧ್ಯಾಪಕರೂ ಆಗಿದ್ದ ಸದಾಶಿವರಾಯರು ಆಗ ತಾನೆ ಭಾರತದ ಐತಿಹಾಸಿಕ ಪುಸ್ತಕ ಬರೆದು ಇಂಗ್ಲೆಂಡಿನಲ್ಲಿ ಪ್ರಸಿದ್ದರಾಗಿದ್ದರು. ಈ ಪುಸ್ತಕ ಬರೆಯುವಾಗ ಶ್ರೀನಿವಾಸ ಶ್ರೋತೃಗಳು ತುಂಬಾ ಸಹಾಯ ಮಾಡಿದ್ದರು, ಮತ್ತು ಮಾರ್ಗದರ್ಶಕರಾಗಿದ್ದರು. ಯಾವುದೇ ವಿಷಯದ ಬಗ್ಗೆ ಚರ್ಚಿಸುವುದು ಸದಾಶಿವರಾಯರಿಗೆ ಗ್ರಂಥರಚನೆಯಲ್ಲಿ ತುಂಬ ಸಹಾಯ ಮಾಡಿದ್ದಕ್ಕಾಗಿ ಅದಕ್ಕಾಗಿಯೆ ಈ ಪುಸ್ತಕವನ್ನು ಸದಾಶಿವರಾಯರು ಶ್ರೀನಿವಾಸ ಶ್ರೋತ್ರೀಗಳಿಗೆ ಅರ್ಪಿಸಿದ್ದರು. ಈ ಪುಸ್ತಕವನ್ನು ಮೆಚ್ಚಿಗೆಯನ್ನು ನೋಡಿ ಮತ್ತು ಅವರ ಮನದ ಅಭಿಲಾಷೆಯಂತೆ ಅವರಿಗೆ ಭಾರತದ ಸಂಸೃತಿಕೆ ಸಂಭಂದಿಸಿದ ಒಂದು ದೊಡ್ಡ ಗ್ರಂಥವನ್ನು ರಚಿಸಬೇಕು ಎಂದನಿಸಿತು. ಅದನ್ನು ಪ್ರಾರಂಬಿಸುವ ಮುಂಚೆ ಶ್ರೀನಿವಾಸ ಶ್ರೋತೃಗಳ ತಿಳಿಸಿ ಆಶೀರ್ವಾದ ಪಡೆದರು. ಸದಾಶಿವರಾಯರಿಗೆ ಮನೆಯಲ್ಲಿ ಹೆಂಡತಿ ನಾಗ ಲಕ್ಷ್ಮಿ, ಮಗುಪೃಥ್ವಿ ಮತ್ತು ತಮ್ಮ. ರಾಜ.
ಇತ್ತ ಕಾತ್ಯಯಿನಿಗೆ ಅವಳ ಗಂಡ ಅರ್ಧದಲ್ಲೇ ಬಿಟ್ಟ ಬಿ.ಎ ಪಾಸ್ ಮಾಡಬೇಕೆಂಬ ಬಯಕೆಯಿಂದ. ಮಾವನ ಒಪ್ಪಿಸಿ ಮೈಸೂರಿನಲ್ಲಿ ಕಾಲೇಜ್ ಸೇರುತ್ತಾಳೆ, ಅಲ್ಲಿ ಸದಾಶಿವರಾಯರ ತಮ್ಮ ರಾಜನ ಪರಿಚವಾಗುತ್ತದೆ. ಪರಿಚಯ ಪ್ರೀತಿಯಾಗಿ ಬೆಳೆದು ಒಬ್ಬರನೊಬ್ಬರು ಬಿಟ್ಟು ಇರಲಾರದೆ ರಿಜಿಸ್ಟರ್ ಮಾಡುವೆ ಯಾಗುತ್ತಾರೆ. ಇತ್ತ ಸದಾಶಿವರಾಯರು ತಮ್ಮ ಸಂಶೋದನೆಗೆ ಇಡಿ ಭಾರತವನ್ನು ಸುತ್ತುರಿತ್ತಾರೆ ಆಗೇ ಪರಿಚಯವಾದ ಕರುಣಾ ರತ್ನೆ ಪರಿಚವಾಗಿ ಅವಳ ಸಹವಿಲ್ಲದೆ ತಾನು ಗ್ರಂಥವನ್ನು ರಚಿಸಲ್ಲರೆ ಎಂದು ತಿಳಿದು ಎರಡನೇ ಮದುವಯಾಗುತ್ತಾರೆ. ಹೇಗೆ ಮುಂದೆ ಅವರ ಜೀವನ ಹೇಗೆ ಸಾಗುತ್ತದೆ, ಅತ್ತೆ ಮಾವನ ಸ್ತಿತಿ ಏನು, ಇದರಿಂದ ನಾಗಲಕ್ಷ್ನ್ಮಿಯಲ್ಲಿ ಮೂಡುವ ಒಂದು ನಿರ್ಲಿಪ್ತತೆ ಕೂಡ ನಿದರ್ಶನವೆಂಬುದಾಗಿ ಸಾರಿದ್ದಾರೆ
ಕಾದಂಬರಿಯ ಕೊನೆಯ ಅಧ್ಯಾಯಗಳಲ್ಲಿ ಅಕಸ್ಮಾತ್ತಾಗಿ ಗೋಚರವಾಗುವ ಸತ್ಯಗಳಿಂದ ಶಾಂತ ಸ್ವರೂಪದವರಾದ ಶ್ರೀನಿವಾಸ ಶ್ರೋತ್ರಿಯವರಿಗೆ ಆಘಾತವಾಗುತ್ತದೆ. ಪುತ್ರನ ಮರಣದ ಸಮಯದಲ್ಲೂ ಅಲ್ಲಾಡದ ಶ್ರೋತ್ರಿಗಳು ಈ ಸತ್ಯದಿಂದ ಸ್ವಲ್ಪ ಪೆಟ್ಟು ತಿನ್ನುತ್ತದೆ. (ಅದನ್ನು ತಿಳಿಯಲು ಪುಸ್ತಕ ಓದಿ) ವಂಶದ ಬಗ್ಗೆ ಅತಿಯಾದ ಗೌರವ ಹೊಂದಿರುವ ಶ್ರೋತ್ರಿಗಳು ಈ ಆಘಾತ ದಿಂದ ಸಹಿಸಲಾರದಷ್ಟು ಮನೋ ವೇದನೆಯನ್ನು ಅನುಭವಿಸುತ್ತಾರೆ. ಅವರ ವಂಶಗೌರವವೆಂಬ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಆದರೆ ಹಿಂದೆ ಆತಂಕ ಮೂಡಿಸುವ ದುವಿಧೆಗಳಲ್ಲಿ ಗೆದ್ದು ಬಂದಿದ್ದ ಶ್ರೋತ್ರಿಯರು ಇಲ್ಲಿಯೂ ಕಡೆಯಲ್ಲಿ ಗೆಲ್ಲುತ್ತಾರೆ. “ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಧರ್ಮವೇ ಮಾರ್ಗ ತೋರುತ್ತದೆ” ಎಂಬ ಅಚಲ ನಂಬಿಕೆಯನ್ನು ಹೊಂದಿದ ಶ್ರೋತ್ರಿಯರು ಅಂತ್ಯದಲ್ಲಿ ಭಾರತೀಯ ಆಶ್ರಮಧರ್ಮದ ಪಾಲನೆಯನ್ನೇ ಮಾಡುತ್ತಾರೆ.ಒಬ್ಬ ಜ್ಙಾನಿಯು ತನಗೆ ಎದುರಾದ ಕಷ್ಟವನ್ನು ಹೇಗೆ ನಿಭಾಯಿಸಬಲ್ಲ ಎಂಬುದು ಎಲ್ಲ ಓದುಗರಿಗೆ ಆಗುವ ಒಂದು ಪಾಠ.
ಇಲ್ಲಿ ಭೈರಪ್ಪನವರು ಸಮಾಜದ ಮೂಲ ಕಷ್ಟಗಳನ್ನು ಎತ್ತಿ ಅದರ ಪರಿಹಾರ ಹೇಗೆ ಮತ್ತು ನಮ್ಮ ಕಟ್ಟು ಪಾಡುಗಳನ್ನು ಮೀರಿ ಹೇಗೆ ಜೀವನ ಮಾಡಬೇಕು ಎಂದು ತಿಳಿಸಿದ್ದಾರೆ. ಇದು ಎಂಥ ಅಧ್ಬುತ ಕೃತಿ ಎನ್ನುವುದಕ್ಕೆ ಸಾಕ್ಷಿ.