ಕಲರ್ಸ್ ಕನ್ನಡ ಪ್ರಸಾರ ಆಗುತ್ತಿರುವ ತ್ರಿಪುರ ಸುಂದರಿ ಧಾರಾವಾಹಿ ತುಂಬಾ ಉತ್ತಮವಾಗಿ ಮೂಡಿ ಬರುತ್ತಿದೆ. ತುಂಬಾ ಕ್ಯೂರಿಯಾಸಿಟಿ ಇಂದ ಕಾದು ನೋಡುತ್ತಿದ್ದಾರೆ ಎಂಬುವ ಮಾತು ಕೇಳಿ ಬರುತ್ತಿದೆ.
ಸೂರ್ಯದೇವನ ಕೃಪೆಯಿಂದ ಗಂಧರ್ವ ಲೋಕದ ರಾಜಕುಮಾರ ಭೂಮಿಗೆ ಬಂದಿದ್ದಾನೆ. ಭೂಲೋಕದಲ್ಲಿ ಅವನ ವಾಸಸ್ಥಾನ ಅರಸು ಮನೆತನದಲ್ಲಿ ಪ್ರದ್ಯುಮ್ನ ಎಂಬ ಹೆಸರಿನಿಂದ ಬೆಳೆದಿರುತ್ತದೆ. ಗಂಧರ್ವ ಕನ್ಯೆ ಆಮ್ರಪಾಲಿ ಅನ್ನೋ ರಾಜಕುಮಾರಿ 27 ವರ್ಷಗಳ ಬಳಿಕ ಅವನನ್ನು ಹುಡುಕಿಕೊಂಡು ಭೂಲೋಕಕ್ಕೆ ಬಂದಿದ್ದಾಳೆ. ಗಂಧರ್ವ ಲೋಕದ ರಾಜಕುಮಾರನ ಪತ್ತೆಹಚ್ಚಲು ಅವಳ ಬಳಿ ಸೂರ್ಯನ ಪದಕ ಮಾತ್ರ ಇದೆ. ಇದರಿಂದಲೇ ಅವಳು ರಾಜಕುಮಾರನನ್ನು ಹುಡುಕುತ್ತಿದ್ದಾಳೆ. ಆದರೆ ಪ್ರದ್ಯುಮ್ನ ಆ ರಾಜ ಕುಮಾರ ಎನ್ನುವ ವಿಷಯ ಇನ್ನು ಅವಳಿಗೆ ತಿಳಿಯದಾಗಿದೆ. ಆಮ್ರಪಾಲಿ ಪ್ರದ್ಯುಮ್ನ ನ ಮನೆಯಲ್ಲಿ ಇದ್ದುದರಿಂದ ಪ್ರದ್ಯುಮ್ನ ನಿಗೆ ಆಮ್ರ ಪಾಲಿ ಮೇಲೆ ಲವ್ ಆಗಿದೆ. ಆದರೆ ಇನ್ನೂ ಆಮ್ರಪಾಲಿಗೆ ಹತ್ತಿರ ಹೇಳಿಕೊಂಡಿಲ್ಲ. ಈ ರೀತಿ ತ್ರಿಪುರ ಸುಂದರಿ ಧಾರಾವಾಹಿ ಕಥೆ ಸಾಗುತ್ತಲಿದೆ.
ಇನ್ನು ಈ ಪ್ರದ್ಯುಮ್ನ ನ ಪಾತ್ರದಲ್ಲಿ ಅಭಿನವ ವಿಶ್ವನಾಥನ್, ದಿವ್ಯ ಸುರೇಶ್ ಅವರು ಆಮ್ರಪಾಲಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಒಂದು ಕುಟುಂಬದ ಕಥೆ ತರ ಈ ಧಾರಾವಾಹಿ ಪ್ರೀಯರಿಗೆ ರಾತ್ರಿ 9.30 ಕ್ಕೆ ಪ್ರೇಕ್ಷಕರ ಮುಂದೆ ತ್ರಿಪುರ ಸುಂದರಿ ಬರುತ್ತಿದೆ.
ಇದೀಗ ತ್ರಿಪುರಸುಂದರಿಗೆ ಕನ್ನಡತಿ ದಾರಾವಾಹಿ ಹರ್ಷ ಅಲಿಯಾಸ್ ಕಿರಣ್ ರಾಜ್ ಅವರು ಆಗಮಿಸುತ್ತಿದ್ದು ಈ ಕಥೆಯಲ್ಲಿ ‘ಟ್ವಿಸ್ಟ್ ಡಬಲ್ ಎಂಟರ್ಟೈನ್ಮೆಂಟ್’ ಎಂಬ ಟೈಟಲ್ ಇರುವ ಪ್ರೊಮೊ ರಿಲೀಸ್ ಮಾಡಲಾಗಿದೆ. ಈಗ ಈ ಸೀರಿಯಲ್ ನಲ್ಲಿ ಹರ್ಷ ಪಾತ್ರಧಾರಿ ಅವರು ಅತಿಥಿ ಪಾತ್ರ ಮಾಡಲಿದ್ದಾರೆ. ಮುಂದೆ ತ್ರಿಪುರ ಸುಂದರಿಯಲ್ಲಿ ಯಾವ ರೀತಿಯ ಟ್ವಿಸ್ಟ್ ಸಿಗಲಿದೆ ಎಂದು ಕಾದು ನೋಡಬೇಕು.