ಇದು ಮೂಲತಃ ಎಸ್.ಎಲ್.ಭೈರಪ್ಪನವರಿಂದ ರಚಿತವಾದ ಕಾದಂಬರಿಯಾಗಿದೆ.ಇದು ಮುಖ್ಯವಾಗಿ ಗೋವಿನಕುರಿತಾದ ಕೃತಿ ಎಂದು ಹೇಳಬಹುದಾಗಿದೆ.ಇಲ್ಲಿ ಜನಪದ ಕಾವ್ಯವಾದ ಪುಣ್ಯಕೋಟಿ ಎಂಬ ಹಾಡು ಎಲ್ಲರಿಗೂ ಚಿರಪರಿಚಿತವಾಗಿರುವ ಒಂದು ಕೃತಿ ಅದರ ಮುಂದುವರೆದ ಕಾಲ್ಪನಿಕ ಭಾಗವೇ ತಬ್ಬಲಿಯುನೀನಾದೆ ಮಗನೆ; ಇದು ಯಾವುದೇ ಸೀಮಿತವಾದ ಪ್ರದೇಶದ ಕುರಿತಾದ ಕಾದಂಬರಿ ಇದಾಗಿಲ್ಲ. ಮತ್ತುಇದನ್ನಭೈರಪ್ಪನವರು ಸುಂದರವಾಗಿ ವಿಸ್ತರಿಸಿದ್ದಾರೆ.ಹೆಬ್ಬುಲಿಯ ಬಾಯಿಂದ ತಪ್ಪಿಸಿಕೊಂಡು ಬಂದಪುಣ್ಯಕೋಟಿ ತಳಿಯ ಆಕಳು ಕಾಳಿಂಗಗೌಡನವಂಶದಲ್ಲೇ ವಾಸವಾಗಿರುತ್ತದೆ.ಅದರಂತೆಕಾಳಿಂಗಗೌಡನ ವಂಶದ ತಲೆಮಾರಿನ ಒಂದುಮಗುವಿಗೆ ಕಾಳಿಂಗಗೌಡ ಎಂದು ಹೆಸರಿಡುವಸಂಪ್ರದಾಯವಿತ್ತು. ಅದರಂತೆ ಕಥೆಮುಂದುವರೆಯುತ್ತಿರುವಾಗ ಕಾಳಿಂಗಗೌಡನೆಂಬಅಜ್ಜನ ಪಾತ್ರ ಪರಿಚಯವಾಗುತ್ತದೆ. ಕಾಳಿಂಗಜ್ಜಆಕಳನ್ನು ತಾಯಿಯ ಸ್ವರೂಪವೆಂದು ಮತ್ತುಆಕಳನ್ನೇ ತನ್ನ ಸರ್ವಸ್ವ ಎಂದು ತಿಳಿದು,ತನ್ನಶತ್ರುವಿನ ಮನೆಯ ಆಕಳಿಗೆ ರೋಗ ಬಂದರೆ ತಾನೆ ಶತ್ರುತ್ವವನ್ನು ಮರೆತು ಆಕಳಿಗೆ ಉಪಚಾರಮಾಡುತ್ತಿರುತ್ತಾನೆ.ಅಲ್ಲದೆ ಬರಗಾಲದ ಸಂಧರ್ಭದಲ್ಲಿತನ್ನ ಮನೆಯಲ್ಲಿರುವ ಹುಲ್ಲನ್ನೇ ಇತರರಿಗೆ ಹಂಚುತ್ತಾನೆ.
ಆತನ ಮೊಮ್ಮಗನ ಹೆಸರು ಸಹ ಕಾಳಿಂಗಗೌಡನೆ ಎಂಬುದಾಗಿದ್ದು, ಬಾಲ್ಯದಲ್ಲಿ ಆಕಳಿನ ಬಗ್ಗೆ ಪ್ರೀತಿಹೊಂದಿದ್ದುನಂತರ ಶಿಕ್ಷಣದ ಸಲುವಾಗಿ ಬೇರೆ ಊರಿಗೆಹೋಗುತ್ತಾನೆ.ಅಲ್ಲಿ ಆತನ ಬಾಲ್ಯದ ಸ್ನೇಹಿತವೆಂಕಟರಮಣನು ಇರುತ್ತಾನೆ,ಕಾಳಿಂಗಗೌಡನು ಶಿಕ್ಷಣವನ್ನು ಉತ್ತಮ ಅಂಕದೊಂದಿಗೆ ಮುಗಿಸಿ ಹೆಚ್ಚಿನವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ಹೊಗುತ್ತಿರುವಾಗಅದನ್ನ ತಡೆಯಲು ವೆಂಕಟರಮಣ ಮತ್ತು ತಾತನಿಂದಸಾಧ್ಯವಾಗುದಿಲ್ಲ.ಅಲ್ಲಿ ಮಾಂಸ ಭಕ್ಷಣೆ ಅನಿವರ್ಯವಾಗುತ್ತದೆ. ಕಾಲಕ್ರಮೇಣ ಕಾಳಿಂಗಜ್ಜ ಮರಣಹೊಂದುತ್ತಾನೆ, ಆಗ ಕಾಳಿಂಗ ಭಾರತಕ್ಕೆ ಬಂದರು ಆತನಿಗೆ ಧರ್ಮದಲ್ಲಿ ನಂಬಿಕೆಯಿರುವದಿಲ್ಲ. ಮತ್ತು ಆಕಳು ಕೇವಲ ನೀಡುವ ಒಂದು ಪ್ರಾಣಿಎಂದು ಆತನ ಅಭಿಪ್ರಾಯವನ್ನ ಆತ ತಳಿದಿರುತ್ತಾನೆ.ವಿದೇಶದಿಂದ ಬಂದಿರುವ ಈತನನ್ನು ಹಳ್ಳಿಯ ಜನ ಅಷ್ಟು ಬೇಗನೆ ಒಪ್ಪಿಕೊಳ್ಳುವದಿಲ್ಲ. ಗ್ರಾಮದಲ್ಲಿ ಕಟ್ಟ ಬೇಕೆಂದಿದ್ದ ಪುಣ್ಯಕೋಟಿ ಮಂದಿರಕ್ಕೆ ತನ್ನ ಅಡ್ಡಿಯನ್ನ ವ್ಯಕ್ತಪಡಿಸುತ್ತಾನೆ. ಸರ್ಕಾರದಿಂದ ಜಮೀನನ್ನ ಪಡೆದು ಅದರಲ್ಲಿ ಯಾಂತ್ರಿಕರಣದಿಂದ ವ್ಯವಸಾಯವನ್ನ ಪ್ರಾರಂಭಿಸುತ್ತಾನೆ, ಆದರೆ ಹಳ್ಳಿಯ ಜನರು ಇನ್ನು ಪುರಾತನವಾದ ಪದ್ದತಿಯನ್ನೇನಂಬಿದ್ದರಿಂದ ಅವರು ಅದನ್ನ ವೀರೊಧಿಸುತ್ತಾರೆ. ಅದೇ ಸಮಯಕ್ಕೆ ಆತನ ಹೆಂಡತಿ ಹಿಲ್ಡಾನನ್ನು ಆತ ಭಾರತಕ್ಕೆ ಕರೆಸಿಕೊಳ್ಳುತ್ತಾನೆ ಆಕೆಗೆ ಈ ದೇಶಿಯಪದ್ದತಿಯಲ್ಲಿ ನಂಬಿಕೆ ಇರುವದಿಲ್ಲ. ಕಾಳಿಂಗ ಬಾಲ್ಯದಲ್ಲಿ ಯಾವ ಆಕಳಿನ ಕೆಚ್ಚಲಿಗೆ ಬಾಯಿಹಾಕಿ ಹಾಲನ್ನು ಕುಡಿದಿರುತ್ತಾನೊ ಇಂದು ಅದೇ ಆಕಳಿನ ಕೆಚ್ಚಲಿಗೆ ಯಂತ್ರವನ್ನ ಹಚ್ಚಿ ರಕ್ತ ಬರುವಂತೆ ಹಾಲನ್ನ ಕರೆಯಲಾಗುತ್ತದೆ. ಕೊನೆಗೆ ತನ್ನ ಹೆಂಡತಿಯ ಮಾತಿಗೆ ಮರುಳಾಗಿ ಪುಣ್ಯಕೋಟಿಯ ಮಾಂಸವನ್ನ ಭಕ್ಷಿಸಲು ಮುಂದಾಗುತ್ತಾನೆ. ಕೊನೆಗೆ ಎಲ್ಲ ಹಸುಗಳ್ಳನ್ನು ಕಸಾಯಿಖಾನೆಗೆ ತಳ್ಳಲಾಗುತ್ತದೆ, ಆದರೆ ಅಷ್ಟರಲ್ಲೇ ಕಾಳಿಂಗನಿಗೆ ಬುದ್ದಿಬಂದಿದ್ದು ಅದನ್ನ ತಡೆಯಲು ಮುಂಬೈನವರೆಗೆ ಹೋಗುತ್ತಾನೆ. ಅಲ್ಲಿ ಸಾವಿರಾರು ಹಸುಗಳಿದ್ದರು ಅವನಿಗೆ ತನ್ನ ಹಸುಗಳ ಪರಿಚಯವಾಗುದಿಲ್ಲ. ಕೊನೆಗೆ ಖಾಲಿ ಕೈಯಲ್ಲಿ ಮರಳಬೇಕಾಗುತ್ತದೆ.ಆದರೆ ತಾನು ಮಾಡಿದ ತಪ್ಪುಗಳ ಪಾಪ ಪ್ರಜ್ಞೆ ಆತನಿಗೆ ಸದಾ ಕಾಡುತ್ತಿರುತ್ತದೆ. ಇಲ್ಲಿ ಭೈರಪ್ಪನವರು ಕಾಳಿಂಗಜ್ಜನ ಗೋ ಪ್ರೀತಿಯನ್ನ ಮತ್ತು ಅದೇ ವಂಶದಲ್ಲಿ ಹುಟ್ಟಿದ ಕಾಳಿಂಗಗೌಡನ ಮನಸ್ಥಿತಿಯನ್ನು ತಿಳಿಸಲಾಗಿದೆ.
ಇದುಪಾಶ್ಚಿಮಾತ್ಯ ಮತ್ತು ದೇಶಿಯತೆ ನಡುವೆ ಇರುವ ವೈಚಾರಿಕ ಭಿನ್ನಾಭಿಪ್ರಾಯವನ್ನ ಈ ಕೃತಿ ತಿಳಿಸುತ್ತದೆ.