ನಟ ಪ್ರಭಾಸ್ ತೆಲುಗು ಚಿತ್ರದ ಸುಂದರಾಂಗ ಯುವಕ. ಎತ್ತರಕ್ಕೆ ತಕ್ಕಂತೆ ಮೈಕಟ್ಟು ಸ್ಟೈಲಿಶ್ ವ್ಯಕ್ತಿತ್ವ. ಮೊದಲೇ ಫಿಲ್ಮೀ ಹಿನ್ನಲೆ, ಜೋತೆಗೆ ಪ್ರತಿಭೆ, ಇವೆರಡು ಕೈ ಹಿಡಿಯುವಲ್ಲಿ ಜಾಸ್ತಿ ಸಮಯ ಬೇಕಾಗಿರಲಿಲ್ಲ. ಇವರ ಒಂದೊಂದು ಸಿನಿಮಾವು ಅಭಿಮಾನಿಗಳಿಗೆ ರಸದೌತಣ.
ಹೀಗೆ ಸಾಲು ಚಿತ್ರಗಳು ಇವರನ್ನು ಉತ್ತುಂಗಕ್ಕೆ ಎರಿಸಿತ್ತು. ಇವೆಲ್ಲದರ ಮಧ್ಯೆ ಬಾಹುಬಲಿಯಂತಹ ಒಂದು ಸಿನಿಮಾ ಇವರ ಇಡೀ ಸಿನಿಜರ್ನಿಯನ್ನೇ ಬದಲಾಯಿಸಿ ಬಿಟ್ಟಿತ್ತು. ಪ್ರಭಾಸ್ ದೇಶ ವಿದೇಸದಲ್ಲಿ ಮನೆಮಾತಾದರು ಇಡೀ ಜಗತ್ತಿನ ಚಿತ್ರರಂಗ ತೆಲುಗು ಇಂಡಸ್ಟ್ರಿ ನೋಡುವಂತೆ ಮಾಡಿತ್ತು.
ಮೂರು ವರ್ಷಗಳ ಕಾಲ ಬಾಹುಬಲಿ ಜನರನ್ನು ತನ್ನ ಗುಂಗಿನಲ್ಲಿ ಹಿಡಿದ್ದು ಕೊಂಡಿತ್ತು. ಇತ್ತ ನಟ ಪ್ರಭಾಸ್ನ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಮುಂದೆ ಎಂತಹ ಸಿನಿಮಾ ಮಾಡಬಹುದು. ಮಾಡಿದರೆ ಅದು ಬಾಹುಬಲಿಗಿಂತಲೂ ಭಿನ್ನವಾಗಿರತ್ತದೆ ಎಂದು ನಿರೀಕ್ಷೆಯಲಿದ್ದರು.
ಇದೆ ಸಮಯಕ್ಕೆ ಸಾಹೋ ಸಿನಿಮಾ ಬಿಡುಗಡೆಯಾಗಿ ಎಲ್ಲರ ನೀರೀಕ್ಷೆಗೂ ತಣ್ಣೀರು ಎರಚಿತ್ತು. ಚಿತ್ರದ ಟ್ರೇಲರ್ ನೋಡಿ ಸಾಕಷ್ಟು ಕ್ರೇಜ್ ಮತ್ತು ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ತುಂಬಾನೇ ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಚಿತ್ರ ನೆಲಕಚ್ಚಿತ್ತು. ನಂತರ ಭಾರೀ ಕುತೂಹಲ ಹೆಚ್ಚಿಸಿದ ಚಿತ್ರ ರಾಧೇ ಶ್ಯಾಂಮ್ನಂತಹ ಲವ್ ಸ್ಟೋರಿ ಮೇಲೆ ಭಾರಿ ನೀರೀಕ್ಷೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಶೆಯಾಯಿತ್ತು.
ಇಷ್ಟೆಲ್ಲ ನಡೆಯುತ್ತಿರುವಾಗಲೇ ಆದಿಪುರುಷ್ ಸಿಮಾದ ಟ್ರೇಲರ್ ಬಿಡುಗಡೆಯಾಗುಯತ್ತದೆ. ಟ್ರೇಲರನ್ನು ಕಂಡು ಸ್ವತಃ ಪ್ರಭಾಸ್ ಒಂದು ಕ್ಷಣ ದಿಗ್ಬ್ರಮೆ ಒಳಗಾಗುತ್ತಾರೆ. ಯಾಕೆಂದರೆ ಆ ಮಟ್ಟಿಗೆ ಆದಿಪುರುಷ್ ನ ಸ್ಫೇಷಲ್ ಇಫೆಕ್ಟ್ ಗಳು ಕಳಪೆಯಾಗಿರುತ್ತದೆ. ಇತ್ತ ನೆಟ್ಟಿಗರು ಒಂದಲ್ಲ ಒಂದು ರೀತಿಯಲ್ಲಿ ಟ್ರೋಲ್ ಮಾಡಲು ಆರಂಭಿಸುತ್ತಾರೆ. ಇದೆಲ್ಲದರ ನೇರ ಪರಿಣಾಮ ಪ್ರಭಾಸ್ ಮೇಲಾಗುತ್ತದೆ. ಬಾಹುಬಲಿಯ ನಂತರ ಡೊಡ್ಢ ಮಟ್ಟದ ಯಶಸ್ಸು ಸಿಗಲಿಲ್ಲ ಎಂಬ ಕೊರಗು ಇವರನ್ನು ಕಾಡಲಾಂಬಿಸಿದೆ.
ನೆಟ್ಟಿಗರು ಹಿಗ್ಗಮುಗ್ಗ ಟ್ರೋಲ್ ಮಾಡಿದರ ನಂತರ ಚಿತ್ರ ತಂಡ ಮತ್ತೆ ಇದರ ಸ್ಫೆಷಲ್ ಇಫೆಕ್ಟ್ ನ್ನು ಸರಿಯಾಗಿ ಮಾಡುವುದಾಗಿ, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದಾಗಿ ಭರವಸೆಯನ್ನು ನೀಡಿತ್ತು. ಇದೀಗಾ ಟ್ರೇಲರ್ ಬಿಡುಗಡೆಗೆ ಸಿದ್ದವಾಗಿದೆ. ಜೂನ್ ೧೬ ರಂದು ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶಗೊಳ್ಳಲಿದೆ.
ಪ್ರಭಸ್ನ ಅದೃಷ್ಟ ಪರೀಕ್ಷೆಯು ನಡೆಯಲಿದೆ. ಸತತ ಸೋಲಿನ ನಂತರ ನೀರಿಕ್ಷೆಯ ಯಶಸ್ಸಿನ ಮಂದಹಾಸ ಮೂದಲಿದೆಯೇ ಎಲ್ಲದಕ್ಕೂ ಉತ್ತರ ಜೂನ್ ೧೬ರಂದು ಸಿಗಲಿದೆ