ಪಕ್ಷದ ಅಭ್ಯರ್ಥಿಗಳು ಸೀರೆ, ಹೆಂಡ, ಕುಕ್ಕರ್, ಚಿನ್ನದ ಓಲೆ, ಟೋಕನ್ ಗ್ಯಾರಂಟಿ ಕಾರ್ಡ್, ಕಾಸು ಹೀಗೆ ಎಲ್ಲವನ್ನು ಹಂಚಿದ್ದಾಯಿತ್ತು. ಆದರೆ ಮತದಾರರು ಇದ್ಯಾವುದು ಬೇಡ ನಮ್ಮಗೆ ಬದುಕಲು ಬೇಕಾಗಿರುವ ಮೂಲ ಭೂತ ಸೌಕರ್ಯಗಳನ್ನು ನೀಡಿ ಎಂದು ಕೇಳುತ್ತಿದ್ದಾರೆ ಒಂದಷ್ಟು ಬಹಿಷ್ಕಾರದ ಕೂಗೂ ಕೂಡಾ ಜೋರಾಗಿ ಕೇಳಿ ಬಂದಿದೆ.
ಆದರೆ ಇದ್ಯಾವುದರ ಗೊಡವೆನೆ ಇಲ್ಲದೆ ಒಬ್ಬರ ಮೇಲೆ ಒಬ್ಬರು ಕೆಸರೆಚುವ ಕೆಲಸವನ್ನು ರಾಜಕಾರಣಿಗಳು ನಿತ್ಯ ಮಾಡುತ್ತಿದ್ದಾರೆ. ಇಬ್ಬರ ಜಗಳದಲ್ಲಿ ಕೂಸು ಬಡಾವಾಯಿತ್ತು ಅನ್ನುವ ಹಾಗೆ ಜನ ಸಾಮಾನ್ಯನ ಕೂಗೇ ಇವರಿಗೆ ಕೇಳಿಸುತ್ತಿಲ್ಲ. ಬಹುಶಃ ಅಧಿಕಾರದ ಮೋಹ ಇವರನ್ನು ಅಂಧರು ಹಾಗೂ ಕಿವುಡರನ್ನಾಗಿಸಿದೆ. ಇವರು ಜನಸಾಮಾನ್ಯರಿಗಾಗಿ ಅಲ್ಲ ತಾವು ಅಧಿಕಾರಕ್ಕೆ ಬರಲು ಹಂಬಲಿಸುತ್ತಿದ್ದಾರೆ.
ಇದುವರೆಗೆ ನಡೆದ ಬಹಿಷ್ಕಾರದ ಕೂಗಿಗೆ ಯಾರೊಬ್ಬ ಅಭ್ಯರ್ಥಿಯು ಸ್ಪಂದಿಸಿದ್ದು ಕಂಡು ಬಂದಿಲ್ಲ, ಎಲ್ಲೂ ವರದಿಯಾಗಿಲ್ಲ. ತುಮಕೂರು ತಾಲೂಕಿನ ಕೋರೆಹೋಬಳಿಯ ಅಗ್ರಹಾರದ ಗ್ರಾಮಸ್ಥರು ಮತ ಬಹಿಷ್ಕಾರದ ಎಚ್ಚರಿಕೆ ನೀಡಿದ್ದರು. ಮರಳು ಮಾಫೀಯಾದಿಂದ, ಬಲಾಡ್ಯರಿಂದ ಅತಿಯಾದ ಗಣಿಗಾರಿಕೆ ನಡೆಯಿತ್ತಿದೆ ಇದರಿಂದ ಗ್ರಾಮಸ್ಥರು ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಸಮಸ್ಯೆ ಪರಿಹರಿಸದಿದ್ದಲ್ಲಿ ಚುನಾವಣೆ ಬಹಿಷ್ಕಾರಿಸುವುದಾಗಿ ಎಚ್ಚರಿಸಿದ್ದರು.ಬಹಿಷ್ಕಾರದ ಎಚ್ಚರಿಕೆ ನೀಡಿದ್ದ ಪ್ರತಿಭಟನಾ ಸ್ಥಳಕ್ಕೆ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ್ ಭೇಟಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ಸಂಗತಿ ವರದಿಯಾಗಿದೆ ಬಿಟ್ಟರೆ ಬೇರೆ ಯಾವುದೇ ಭಾಗದಲ್ಲಿ ಇಂತಹ ಒಂದು ಸಕಾರಾತ್ಮಕ ವಿಷಯಗಳು ಹೊರ ಬಂದಿಲ್ಲ.
ವೈಯಕ್ತಿಕ ತೇಜೋವಧೆ ಮೂಲಕ ಸ್ವಲ್ಪನೂ ಮೂಲಾಜಿಲ್ಲದೆ ಒಬ್ಬರ ಮೇಲೆ ಒಬ್ಬರು ವಾಗ್ದಾಳಿ ನಡೆಸುತ್ತಿದ್ದಾರೆ ಹೊರತು ಜನಸಾಮಾನ್ಯರ ಅವಶ್ಯಕತೆಯ ಬಗ್ಗೆ ಕಿಂಚಿತ್ತು ಮಾತನಾಡುತ್ತಿಲ್ಲ. ಅಧಿಕಾರದ ಅವಧಿಯಲ್ಲಿ ಭ್ರಷ್ಟಚಾರ ನಡೆದಾಗ ಸುಮ್ಮನಿದ್ದು ಚುನಾವಣೆ ಸಂದರ್ಭದಲ್ಲಿ ಅದೆನೆಲ್ಲ ಕೂಗಾಡಿ ಹೇಳುವುದು ಪ್ರಚಾರದ ಗಿಮ್ಮಿಕ್ ಆಗಿ ಬಳಸಲಾಗುತ್ತಿದೆ.
ಅವರು ಅಂದು ಬಂದಿಲ್ಲ ಇಂದು ಬಂದಿದ್ದಾರೆ ಎಂಬ ಕೊಂಕು ವ್ಯಂಗಗಳೇ ಹೆಚ್ಚು.ಬರೇ ಹಳಿಸಿರುವ ಆಸ್ವಾಶನೆಗಳು. ಕೇಳಿ ಕೇಳಿ ಬೇಜಾರಾಗಿರುವ ಡೈಲಾಗ್ಗಳು.ಅಣೆ ಪ್ರಮಾಣ, ವಿಷಕನ್ಯೆ, ಸ್ವಾಭಿಮಾನ, ಅಭಿಮಾನ, ಮೂಲ,ನಿವೃತ್ತಿಯ ಘೋಷಣೆ ಎಂದಿನಂತೆ ಜಾತಿ ವಿಷ ಬೀಜ, ಸಂಘಟನೆಯ ಬ್ಯಾನ್ ಇವೆಲ್ಲವೂ ಈ ಭಾರಿ ಚುನಾವಣೆಯ ಸ್ಪೆಷಲ್. ದ್ವೇಷಪೂರಿತ, ಸ್ವಾರ್ಥದ ರಾಜಕೀಯದಿಂದ ಮುಕ್ತಿಯಾಗಿ ಪ್ರಜೆಗಳು ಪ್ರಭುಗಳಾಗಿ, ಪ್ರಭುಗಳು ಪ್ರಜೆಗಳಿಗೊಸ್ಕರ ನಡೆಸುವ ಸರ್ಕಾರ ಎಂದು ಸಿಗುವುದು. ನಿಜ ಅರ್ಥದಲ್ಲಿ ಜನರಿಗೊಸ್ಕರ ಬದುಕುವ ಜನಪ್ರತಿನಿಧಿಗಳಾಗಿ ಬದಲಾಗಬೇಕಿದೆ.