ಕಾರವಾರ: ನನ್ನನ್ನು ಈ ಬಾರಿ ಶಾಸಕರಾಗಿ ಮಾಡಿದರೆ ಕ್ಷೇತ್ರದಲ್ಲಿ ಆರು ತಿಂಗಳ ಒಳಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿ ಕೊಡುತ್ತೇನೆ ಎಂದು ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿಕೆಟ್ ಪಡೆದುಕೊಂಡಿರುವ ನಿವೇದಿತ್ ಆಳ್ವ ಭರವಸೆ ನೀಡಿದರು.
ತಾಲೂಕಿನ ಎಲ್ಲಾ ಭಾಗಗಳಲ್ಲಿ ಪ್ರಚಾರ ನಡೆಸಿ, ತಮ್ಮ ಪರ ಮತಯಾಚನೆ ಮಾಡುತ್ತಾ, ಕುಮಟಾ ಕ್ಷೇತ್ರದಿಂದ ನಾನು ಈ ಬಾರಿ ಆಯ್ಕೆಯಾದರೆ ಮಾದರಿ ಕ್ಷೇತ್ರವನ್ನಾಗಿ ಮಾಡಿ ತೋರಿಸುತ್ತೇನೆ.
ನನಗೆ ಇಬ್ಬರು ಮಕ್ಕಳ ಚಿಕ್ಕ ಕುಟುಂಬವಿದ್ದು, ದೇವರು ಕುಟುಂಬ ನಿರ್ವಹಣೆಗೆ ಬೇಕಾದಷ್ಟು ಶಕ್ತಿಯನ್ನು ನೀಡಿದ್ದಾನೆ, ಹೆಚ್ಚು ಹಣ ಮಾಡುವ ಬಯಕೆ ನನಗೆ ಇಲ್ಲ, ಜನರ ಸೇವೆ ಮಾಡುವ ನಿಟ್ಟಿನಲ್ಲಿ ಬಂದಿದ್ದು ಜನರು ನಿರೀಕ್ಷಿಸಿದಂತೆ ಕೆಲಸ ಮಾಡುತ್ತೇನೆ ಮತ್ತು ಬಹು ವರ್ಷಗಳ ಜನರ ಕನಸಾಗಿರೋ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವಲ್ಲಿ ನನ್ನ ಪ್ರಯತ್ನವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.