ಬೆಂಗಳೂರು: ಬಹುತೇಕ ಪಕ್ಷಗಳು ಆಯಾ ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದಾಗಿದೆ. ಇತ್ತ ಅಭ್ಯರ್ಥಿಗಳು ತುಂಬಾನೇ ಉತ್ಸಹಾದಲ್ಲಿ ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ಆದರೆ ಟಿಕೇಟ್ ಸಿಗದ ಅತೃಪ್ತರು ಸಪ್ಪೆ ಮೋರೆ ಮಾಡಿಕೊಂಡು ಸುಮ್ಮನೆ ಕೂತಿಲ್ಲ, ಅವರ ರಾಜಕೀಯ ಆಟವನ್ನು ಮುಂದುವರಿಸಿದ್ದಾರೆ.
ಮರಕೋತಿ ಆಟವನ್ನು ಸ್ಮರಿಸಬಹುದು
ಶಾಸಕರು ಮತ್ತು ಅವರ ಒಂದಿಷ್ಟು ಬೆಂಬಲಿಗರು ಪಕ್ಷದಿಂದ ಪಕ್ಷಕ್ಕೆ ಹೈಜಂಪ್ ಮಾಡಿದ್ದಾರೆ. ಬರೇಯ ಫ್ಯಾಮಿಲಿ ಪಕ್ಷ ಅಂತ ಲೇವಾಡಿ ಮಾಡಿರುವ ಒಂದಿಷ್ಟು ಮಂದಿ ಅದೇ ಪಕ್ಷದಲ್ಲಿ ಸ್ಥಾನಗಿಟ್ಟಿಸಿರುವುದು ವಿಪರ್ಯಸ.
ಇನ್ನು ನಿನ್ನೆ ಮೊನ್ನೆಯವರೆಗೆ ತಮ್ಮ ನೆಚ್ಚಿನ ಶಾಸಕ ಮತ್ತು ಪಕ್ಷಕ್ಕಾಗಿ ಹಗಲಿರುಲು ದುಡಿದವರ ಪಾಡು ಹೇಳತ್ತೀರದು. ಬ್ಯಾನರ ಕಟ್ಟಿ, ಬಟ್ಟಿಂಗ್ಸ್ ಗಳನ್ನು ಕಟ್ಟಿ, ನಾಯಕನ ದೊಡ್ಡ ದೊಡ್ಡ ಕಟ್ಟವುಟ್ಗಳನ್ನು ಕಟ್ಟಿ, ಊರೆಲ್ಲ ಪಕ್ಷದ ಬಾವುಟಗಳನ್ನು ಕಟ್ಟಿ ಜೈಕಾರ ಕೂಗುತ್ತಿದ್ದವರದ್ದು ಪೆಚ್ಚು ಮೋರೆಯಾಗಿದೆ.
ಇವೆಲ್ಲದರ ಮಧ್ಯೆ ಗೊಂದಲಗೀಡಾಗಿರುವುದು ಮತದಾರ. ನಿನ್ನೆಯವರೆಗೆ ತಮ್ಮ ನಾಯಕನನ್ನು ಒಂದೇ ಪಕ್ಷದಲ್ಲಿ ಕಂಡು ಇವಾಗ ಬೇರೆಯೊಂದು ಪಕ್ಷದಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗುತಿಲ್ಲ. ಆ ಪಕ್ಷ ಅಂದರೆ ನಮ್ಮ ನಾಯಕ, ನಮ್ಮ ನಾಯಕ ಎಂದರೆ ಆ ಪಕ್ಷ ಅನ್ನುವ ಮಟ್ಟಿಗೆ ಜನರು ಪಕ್ಷ ಮತ್ತು ನಾಯಕನ್ನು ನೆಚ್ಚಿಕೊಂಡಿದ್ದರು.
ಆದರೆ ಈಗ ಒಂದೇ ಕ್ಷಣದಲ್ಲಿ ಎಲ್ಲವು ಬದಲಾಗಿದೆ. ನೆಚ್ಚಿನ ನಾಯಕರು ಬೇರೆ ಬೇರೆ ಪಕ್ಷದಲ್ಲಿ, ಇನ್ನುಕೆಲವರು ಬಂಡಾಯ, ಇನ್ನುಕೆಲವರು ಪಕ್ಷೇತರ ಅಭ್ಯರ್ಥಿ ಹೀಗೆ ತಮ್ಮನು ತಾವೇ ಹಂಚಿಕೊ0ಡಿದ್ದಾರೆ.
ಅದೆಷ್ಟೊ ಮತದಾರರು ನಿಷ್ಟೆಯಿಂದ ಒಂದೇ ಪಕ್ಷವನ್ನು ಅನಾದಿ ಕಾಲದಿಂದಲೇ ಅನುಸರಿಸಿಕೊಂಡು ಬಂದಿರುತ್ತಾರೆ. ಅಂತವರು ಈ ಮೇಗಾ ಬದಲಾವಣೆಯನ್ನು ಹೇಗೆ ಒಪ್ಪಿಕೊಳ್ಳುತ್ತಾರೊ. ಇತ್ತ ಮಾತದಾರನಿಗೆ ತಮ್ಮ ನಾಯಕ ಮಾತ್ರ ಕಾಣಬಹುದು, ಇನ್ನು ಕೆಲವರಿಗೆ ಪಕ್ಷ ಮಾತ್ರ ಕಾಣಬಹುದು ಈ ಗೊಂದಲದಲ್ಲಿ ಯಾರಿಗೆ ಲಾಭ, ಯಾರಿಗೆ ನಷ್ಟ ಕಾದು ನೋಡಬೇಕು