ಬೆಂಗಳೂರು: ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಈ ವಾರದ ಆರಂಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರೂ ಕೂಡ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಯಾವುದೇ ಸ್ಥಾನವಿಲ್ಲ. ಕರ್ನಾಟಕದ ಮೂರು ಪ್ರದೇಶಗಳ 12 ಜಿಲ್ಲೆಗಳಲ್ಲಿನ ಲಿಂಗಾಯತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೂ ಕೂಡ ಲಿಂಗಾಯತರು ತಮ್ಮ ರಾಜಕೀಯ ಆದ್ಯತೆಗಳಲ್ಲಿ ವಿಭಜನೆಯಾಗುವ ಸಾಧ್ಯತೆಗಳಿವೆ ಮತ್ತು ಅವರ ಧಾರ್ಮಿಕ ಸಂಸ್ಥೆಗಳು ಮತ್ತು ಸ್ವಾಮೀಜಿಗಳ ನೇತೃತ್ವದಲ್ಲಿ ಮಾತ್ರ ಮುಂದುವರಿಯಬಹುದು.
ಬಿ.ಎಸ್.ಯಡಿಯೂರಪ್ಪ ಮತ್ತು ಜಗದೀಶ್ ಶೆಟ್ಟರ್ ಇಬ್ಬರೂ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರು. ಅವರಿಬ್ಬರ ನಾಯಕತ್ವದಿಂದಲೇ ವೀರಶೈವರೂ ಕೂಡ ಲಿಂಗಾಯತರೊಂದಿಗೆ ಸೇರಿಕೊಂಡಿದ್ದ, ಮುಂಬೈ ಕರ್ನಾಟಕದ 3 ಜಿಲ್ಲೆಗಳು ಮತ್ತು 24 ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯದ ದೊಡ್ಡ ವಲಯವಾಗಿದೆ. ಈ ವಲಯದಲ್ಲಿ ಲಿಂಗಾಯತ ಮತದಾರರ ಸಂಖ್ಯೆ 35-40% ರಷ್ಟಿದೆ. 2022 ರಲ್ಲಿ ಚುನಾವಣಾ ರಾಜಕೀಯದಿಂದ ಸ್ವಯಂಪ್ರೇರಿತರಾಗಿ ನಿವೃತ್ತಿ ಘೋಷಿಸಿದಾಗ ಲಿಂಗಾಯತ ಮತದಾರರು ಕಳವಳಗೊಂಡಿದ್ದರು ಆದರೆ ಪಕ್ಷದ ಕೋರ್ ಕಮಿಟಿಯ ಸದಸ್ಯರಾಗಿ ಬಿ.ಎಸ್.ಯಡಿಯೂರಪ್ಪನವರನ್ನು ಮಾಡುವ ಮೂಲಕ ಬಿಜೆಪಿ ತಮ್ಮ ಹಿತಾಸಕ್ತಿಗಳನ್ನು ನೋಡಿಕೊಂಡಿತು.
ಬಿಎಸ್ವೈಯನ್ನು ದೂರವಿಟ್ಟರೇ ಪಕ್ಷದ ಮೇಲೆ ಲಿಂಗಾಯುತ ಮತದಾರರು ಮುನಿಸಿಕೊಳ್ಳಬಹುದು ಎಂದು ಅಂದಾಜಿಸಿದ ಪಕ್ಷ ಲಿಂಗಾಯತ ಮತಗಳನ್ನು ಹೇಗಾದರೂ ಸಮಾಧಾನಪಡಿಸುವ ಸಲುವಾಗಿ ಬಿಎಸ್ವೈ ಅವರ ಕಿರಿಯ ಪುತ್ರ ಬಿ.ವೈ.ವಿಜೇಂದ್ರ ಅವರಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಿಂದ ಸ್ಪರ್ಧಿಸಲು ಟಿಕೆಟ್ ನೀಡಿತು. ಇದರಿಂದ ಲಿಂಗಾಯತರಿಗೆ ಪರೋಕ್ಷವಾಗಿಯಾದರೂ ಬಿಎಸ್ವೈ ಇರುವುದಾಗಿ ಭರವಸೆಯನ್ನ ಪಕ್ಷ ನೀಡಿದೆ.
ಆದರೆ, ಜಗದೀಶ್ ಶೆಟ್ಟರ್ ವಿಚಾರದಲ್ಲಿ ಇದು ಭಿನ್ನವಾಗಿದೆ. ಅವರು ತಮ್ಮನ್ನು ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡಲಿಲ್ಲ ಮತ್ತು ಹೆಚ್ಚಾಗಿ ಪಕ್ಷದ ಹಿಂದುತ್ವ ಸಿದ್ಧಾಂತದ ಮೇಲೆ ಅವಲಂಬಿತರಾಗಿದ್ದರು. ಬಿಜೆಪಿಯಲ್ಲಿ ಸುದೀರ್ಘ ಅವಧಿಯಲ್ಲಿದ್ದರು ಕೂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿ.ಎಸ್. ಯಡಿಯೂರಪ್ಪನವರ ನೆರಳಿನಲ್ಲಿ ಬೆಳೆದರು.
ಶೆಟ್ಟರ್ ಧೀಡಿರ್ ಎಂದು ರಾತ್ರೋರಾತ್ರಿ ಕಾಂಗ್ರೆಸ್ ಪಕ್ಷವನ್ನು ಸೇರಿರುವುದು ಲಿಂಗಾಯತ ಸಮುದಾಯದ ಮತದಾರರ ಭರವಸೆಯನ್ನು ಕಳೆದುಕೊಂಡಂತಾಗಿದೆ. ಇದು ಶೆಟ್ಟರ್ ಅವರ ರಾಜಕೀಯ ಭವಿಷ್ಯಕ್ಕೆ ನಕರಾತ್ಮಕ ಪರಿಣಾಮವನ್ನು ಬೀರಬಹುದು.
ಶೆಟ್ಟರ್ ಕಾಂಗ್ರೇಸ್ ಸೇರಿರುವುದು ಲಿಂಗಾಯತ ಸಮುದಾಯದ ವಿಷಯದಲ್ಲಿ ಮತಗಳ ದೃಷ್ಟಿಯಿಂದ ಕಾಂಗ್ರೆಸ್ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಲಿಂಗಾಯುತ ಸಮುದಾಯ ಮತ್ತು ಶ್ರೀಮಂತ ಮತ್ತು ಬಲಿಷ್ಠ ಲಿಂಗಾಯತ ಮಠಗಳ ಹಾಗೂ ವೀರಶೈವ ಸಮುದಾಯ ಮತ್ತು ಮಠಗಳ ಸ್ವಾಮೀಜಿಗಳು ಪ್ರಭಾವದಿಂದ ಲಿಂಗಾಯುತ ಸಮುದಾಯದ ಮತದಾರ ಗಮನ ಸಾಧ್ಯಗಳಿವೆ. ಆದರೆ ಲಿಂಗಾಯತ ಮತದಾರರು ಮತ್ತು ಪ್ರಭಾವಿಗಳ ನಡುವೆ ಶೆಟ್ಟರ್ ಅವರ ಉಪಸ್ಥಿತಿಯನ್ನು ಹೇಗೆ ಉತ್ತಮವಾಗಿ ಬಳಸಿಕೊಳ್ಳಬೇಕು ಎಂಬುದರ ಬಗ್ಗೆಯೂ ಕಾಂಗ್ರೆಸ್ ಎಚ್ಚರಿಕೆಯಿಂದಿರಬೇಕು. ಲಿಂಗಾಯತ ಸಮುದಾಯದ ಬೆಂಬಲದ ವಿಷಯದಲ್ಲಿ ಶೆಟ್ಟರ್ ಅವರಿಂದ ಬಹಳ ನಿರೀಕ್ಷೆ ಇರುವುದರಿಂದ ಶೆಟ್ಟರ್ ಅವರಿಗೆ ಸವಾಲುಗಳು ಎದುರಾಗಬಹುದು.
ಇನ್ನೂ ಕಾಂಗ್ರೇಸ್ ಪಕ್ಷ ಲಿಂಗಾಯತ ಸಮುದಾಯದ ಮತ ಪಡೆಯಲು ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸಿ ಲಿಂಗಾಯತರಿಗೆ ಅವಮಾನ ಮಾಡಿದೆ ಎಂದು ಪ್ರಚಾರ ಮಾಡಬಹುದು. ಲಿಂಗಾಯತರಿಗೆ ಬಿಜೆಪಿ ಪಕ್ಷ ಸುರಕ್ಷಿತವಲ್ಲ ಎಂಬ ಮಾತುಗಳನ್ನು ಹೇಳಬಹುದು. ಕಾಂಗ್ರೇಸ್ ಈ ರೀತಿಯಾಗಿ ಪ್ರಚಾರ ಮಾಡಿದರೆ ಮತದಾನದ ಮೇಲೆ ಹೇಗೆ ಪರಿಣಾಮ ಬೀರಲಿದೆ ಅನ್ನುವುದನ್ನು ಕಾದು ನೋಡಬೇಕಿದೆ.