ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಡುವೆ ಇಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಿ20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ದಕ್ಷಿಣ ಭಾರತದ ಎರಡು ಬಲಿಷ್ಟ ತಂಡಗಳ ನಡುವಿನ ಕಾಳಗಕ್ಕೆ ಐಪಿಎಲ್ 2023 ಸಾಕ್ಷಿಯಾಗಲಿದೆ.
ಭಾರತೀಯ ಕ್ರಿಕೆಟ್ ದಿಗ್ಗಜರಾದ
ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿಯ ಹೆಸರುಗಳು ಪ್ರತಿ ಐಪಿಲ್ ಸೀಸನ್ ನಲ್ಲೂ ಸದ್ದು ಮಾಡುತ್ತವೆ. ಐಪಿಲ್ನಲ್ಲಿ ಪರಸ್ಪರ ಎದುರಾಳಿಗಳಾಗಿ ಪಂದ್ಯವನ್ನು ಆಡುವ ಇವರಿಬ್ಬರು ಬ್ಯಾಟಿಂಗ್ ಶೈಲಿಯಲ್ಲಿ ಒಬ್ಬರನ್ನೊಬ್ಬರು ಮೀರಿಸುವಂತೆ ಆಟವನ್ನ ಆಡುತ್ತಾರೆ.
ಕೊಹ್ಲಿ ನಾಯಕತ್ವದ ಆರ್ಸಿಬಿ ತಂಡ ಡೆಲ್ಲಿ ಕ್ಯಾಪಿಟಲ್ ವಿರುದ್ಧ ಗೆಲುವನ್ನು ಸಾಧಿಸಿ ಕೊಹ್ಲಿ ಪ್ಲೇಯರ್ ಅಫ್ ದ ಮ್ಯಾಚ್ ಆಗಿ ಗುರುತಿಸಿಕೊಂಡಿದ್ದಾರೆ. ಹಾಗೆಯೇ ಇಂದು ನಡೆಯಲಿರುವ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಲು ಸಜ್ಜಾಗಿದ್ದಾರೆ.
2023ರ ಐಪಿಎಲ್ನಲ್ಲಿ ಸಿಡಿಲಿನಬ್ಬರದ ಪ್ರದರ್ಶನದ ಮೂಲಕ ಆಟವನ್ನು ಪ್ರಾರಂಭಿಸಿದ ಕೊಹ್ಲಿಯನ್ನು ಭಾರತದ ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಶ್ಲಾಘಿಸಿ ಆರ್ಸಿಬಿಗೆ ಇದು ಶುಭ ಸಂಕೇತ ಎಂದು ಹೇಳಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು ಇನಿಂಗ್ಸ್ನ ಆರಂಭದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಆಟವನ್ನು ಆಡಿ ಉತ್ತಮ ಆರಂಭವನ್ನು ನೀಡುತ್ತಿದ್ದಾರೆ. ಆರ್ಸಿಬಿ ತಂಡದ ಉತ್ತಮ ಆರಂಭ ಮತ್ತು ಬೋರ್ಡ್ ಮೇಲೆ ಉತ್ತಮ ಮೊತ್ತವನ್ನು ಕಲೆಹಾಕುತ್ತಿರುವುದರ ಶ್ರೇಯ ಕೊಹ್ಲಿಗೆ ಸಲ್ಲಬೇಕು. ಇದು ಆರ್ಸಿಬಿ ತಂಡಕ್ಕೆ ಶುಭ ಸೂಚನೆ ಎಂದು ಹೇಳಿದರು.