ಸೌತ್ ಫಿಲಂನಲ್ಲಿ ಸಮಂತಾ ರುತ್ ಒಬ್ಬರು ಬಹುಮುಖ ನಟಿ ಎಂದರೆ ತಪ್ಪಾಗಲಾರದು. ಸೌತ್ ಇಂಡಸ್ಟ್ರೀ ಹೊರತುಪಡಿಸಿ ಬಾಲಿವುಡ್ ನಲ್ಲಿನ ದಿ ಫ್ಯಾಮಿಲಿ ಮ್ಯಾನ್ 2, ದಿ ಸಿಟಾಡೆಲ್ ನಂತಹ ಪ್ರಾಜೆಟ್ ಗಳ ಮೂಲಕ ಬಾಲಿವುಡ್ ನಲ್ಲೂ ತಮ್ಮ ಸ್ಥಾನ ಹಾಗೂ ಮಾನ್ಯತೆ ಪಡೆದುಕೊಂಡಿದ್ದಾರೆ. ಆದರೆ ಇದೀಗ ಅವರಿಗೆ ಅನಾರೋಗ್ಯದ ಸಮಸ್ಯೆ ಕಾಡುತ್ತಿರುವುದರಿಂದ ತಮ್ಮ ಸಿನಿಮಾ ಕೆರಿಯರ್ ಗೆ ಬ್ರೇಕ್ ಹಾಕಲಿದ್ದಾರೆ.
ಇತ್ತೀಚೆಗೆ ಸಮಂತಾ ತಮ್ಮ ವೃತ್ತಿಜೀವನಕ್ಕೆ ಒಂದು ವರ್ಷಗಳ ಕಾಲ ವಿರಾಮ ಘೋಷಿಸಿರುವುದು ಇಡೀ ಸಿನಿ ಅಭಿಮಾನಿಗಳಲ್ಲಿ ಬೇಸರ ಮನೆ ಮಾಡಿದೆ. ಸಮಂತಾ ಸ್ವಯಂ ನಿರೋಧಕ ಕಾಯಿಲೆಯಾದ ಮೈಯೋಸಿಟಿಸ್ ವಿರುದ್ದ ಹೋರಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ತಮಿಳು, ತೆಲುಗು ಅಥವಾ ಬಾಲಿವುಡ್ ಸಿನಿಮಾ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ಸಿಟಾಡೆಲ್ ಇಂಡಿಯಾ ಅಥವಾ ಕುಶಿ ಸಿನಿಮಾಗಳ ಬಳಿಕ ಮುಂಗಡ ಸಿನಿಮಾಗಳಿಗೆ ಪಡೆದ ಹಣವನ್ನು ಹಿಂದಿರುಗಿಸಿದರು. ಸಮಂತಾ ಸಾಮಾನ್ಯವಾಗಿ ಪ್ರತಿ ಚಿತ್ರಕ್ಕೆ 3.5 ರಿಂದ 4 ಕೋಟಿ ರೂ.ಗಳನ್ನು ಪಡೆಯುತ್ತಾರೆ ಮತ್ತು ಅವರು ಇತ್ತೀಚೆಗೆ ಸಹಿ ಹಾಕಿದ್ದ ಮೂರು ಪ್ರಾಜೆಕ್ಟ್ಗಳನ್ನು ಪರಿಗಣಿಸಿದರೆ, ಅವರ ಸಂಭಾವ್ಯ ನಷ್ಟವು 10 ರಿಂದ 12 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗುತ್ತದೆ.
ಇನ್ನು ಸಿನಿಮಾ ರಂಗದಿಂದ ಬ್ರೇಕ್ ಪಡೆದುಕೊಂಡಿರುವ ಸಮಂತಾ ರಿಫ್ರೆಶ್ ಆಗಲು ಕೊಯಮತ್ತೂರಿನಲ್ಲಿನ ಈಶಾ ಫೌಂಡೇಷನ್ ಗೆ ತೆರಳಿ ಸದ್ಗುರು ಅವರ ಮಾತುಗಳು, ಸೆಷನ್ ನಿಂದ ಎನರ್ಜಿ ಪಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಮಂತಾ ಅವರು ಯೋಗಿಗಳ ಗುಂಪಿನ ನಡುವೆ ಬಿಳಿ ಬಣ್ಣದ ಬಟ್ಟೆ ಧರಿಸಿ ಧ್ಯಾನ ಮಾಡುತ್ತಿರುವ ತಮ್ಮ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಇಂದು ಧ್ಯಾನಸ್ಥ ಸ್ಥಿತಿಯು ನನ್ನ ಶಕ್ತಿಯು ಪ್ರಕರವಾಗಿರಲಿದೆ. ತಾಳ್ಮೆ ಮತ್ತು ಶಾಂತಿಯ ಸಂಪರ್ಕವಾಗಿದ್ದು, ಈ ಮೂಲಕ ಸ್ಪಷ್ಟತೆ ನೀಡುತ್ತದೆ. ಈ ಮೂಲಕ ಶಕ್ತಿ ಅನ್ನೋದನ್ನ ಪಡೆಯೋದು ಇಷ್ಟು ಸುಲಭವಾಗಿರಬಹುದೆಂದು ಯಾರು ಊಹಿಸಬಲ್ಲರು ಎಂದು ಬರೆದುಕೊಂಡಿದ್ದಾರೆ.
ಕುಶಿ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಚಿತ್ರದ ಆಕರ್ಷಕ ಕಥೆ ಮತ್ತು ವಿಜಯ್ ದೇವರಕೊಂಡ ಹಾಗೂ ಸಮಂತಾ ರಂತಹ ಪ್ರತಿಭಾವಂತ ಸಿನಿ ಜೋಡಿಯ ನಡುವಿನ ಕೆಮಿಸ್ಟ್ರಿ ಈಗಾಗಲೇ ಸಿನಿ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದ್ದು, ಚಿತ್ರ ಹೇಗೆ ಮೂಡಿ ಬರಲಿದೆ ಎಂದು ಕಾದು ನೋಡಬೇಕಿದೆ.