ಇಂದು ಭ್ರಷ್ಟಾಚಾರ ಕರ್ನಾಟಕದಾದ್ಯoತ ಪ್ರತೀ ಹಂತದಲ್ಲೂ ಕಾಣ ಸಿಗುವ ಒಂದು ವ್ಯವಸ್ಥೆಯಾಗಿದೆ. ತಮ್ಮ ಕೆಲಸ ನಡೆಯಬೇಕೆಂದರೆ ಗಿoಬಳ ಕೊಡದೇ ಯಾವುದೂ ನಡೆಯುವುದೇ ಇಲ್ಲ ಎಂಬದು ತೊಂಬತ್ತು ಶೇಖಡ ಕಟು ಸತ್ಯವಾಗಿದೆ.
ವಾಹನ ಚಲಾಯಿಸುವಾಗ ಸಿಗುವ ಸಂಚಾರ ಪೊಲೀಸರಿಂದ ಹಿಡಿದು, ಮನೆ ಕಟ್ಟಬೇಕಾದಲ್ಲಿ ಗ್ರಾಮದ ಪಂಚಾಯತ್ ಕಛೇರಿವರೆಗೂ ಜನ ಸಾಮಾನ್ಯರಿಂದ ಹಣ ವಸೂಲು ಮಾಡುವವರೇ. ಇನ್ನು ಕರ್ನಾಟಕದ ಹೆಸರಾಂತ ಪರಪ್ಪನ ಅಗ್ರಹಾರವೂ ಭ್ರಷ್ಟಾಚಾರದ ಜಾಲಕ್ಕೆ ಹೊರತಾಗಿಲ್ಲ. ಇವೆಲ್ಲಕ್ಕೂ ಉತ್ತರವೆಂಬತೆ ಇತ್ತೀಚೆಗೆ ಎಡಿಜಿಪಿ ಅಲೋಕ್ ಕುಮಾರ್ ರವರು, ಕ್ಯೂ ಆರ್ ಕೋಡ್ ಮೂಲಕ ಜನ ಸ್ನೇಹಿ ಆಡಳಿತದತ್ತ ದಿಟ್ಟ ಹೆಜ್ಜೆಯನ್ನಿಟ್ಟ ದ್ದಾರೆ.
ಈ ಕ್ಯೂ.ಆರ್ ಕೋಡ್ಗಳನ್ನು ಎಲ್ಲಾ ಪೊಲೀಸ್ ಠಾಣೆಗಳು ಮತ್ತು ಬೀದಿ ಬೋರ್ಡ್ಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಜನರು ಸಾರ್ವಜನಿಕ ಸೇವೆಗಳ ಬಗ್ಗೆ ಪ್ರತಿಕ್ರಿಯೆಯನ್ನು ನೀಡುವುದರೊಂದಿಗೆ ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆಯನ್ನು ಕಾಪಾಡ ಬಹುದಾಗಿದೆ. ಈ ವ್ಯವಸ್ಥೆಯು ಜನ ಸಾಮಾನ್ಯರಿಗೆ ತಮ್ಮ ಹಕ್ಕನ್ನು ಸುಲಲಿತ ವಾಗಿ ಚಲಾಯಿಸುವವಂತೆ ಮಾಡುವುದಲ್ಲದೆ, ಅಧಿಕಾರಿಗಳ ಅಕ್ರಮ ಮತ್ತು ಕಾನೂನು ಬಾಹಿರ ಪ್ರವ್ರತ್ತಿಯಿಂದ ದೂರವಿಡುತ್ತದೆ. ಜನ ಸಾಮಾನ್ಯರು ವ್ಯವಸ್ಥೆಯ ಸದುಪಯೋಗದೊಂದಿಗೆ ಉತ್ತಮ ಸಮಾಜದ ನಿರ್ಮಾಣದಲ್ಲಿ ಹೊಣೆಗಾರರಾಗಬೇಕಿದೆ.