ಒಂದು ಕಾಲವಿತ್ತು, ಮಾಧ್ಯಮದಲ್ಲಿ ಪ್ರಕಟವಾದದ್ದೆಲ್ಲ ಬ್ರಹ್ಮ ಲಿಪಿ ಎಂದು ನಂಬಿರುವ ಕಾಲ. ಅವೆಲ್ಲ ಕಳೆದು ಮಧ್ಯಮದಲ್ಲಿ ಪ್ರಕಟವಾದ್ದು ಯಾವುದೂ ನಂಬುವಂತಿಲ್ಲ ಎಂಬ ಮನೋಸ್ಥಿತಿ ಬೆಳೆದಿರುವ ಮಟ್ಟಿಗೆ ಮಾಧ್ಯಮ ಕ್ಷೇತ್ರ ಮುನ್ನುಗ್ಗಿಟ್ಟಿದೆ.
ಸಿಟಿಜನ್ ಜರ್ನಲಿಸಂ ಎಂಬ ಪ್ರಕಾರ ಮಾಮೂಲಾದಂತೆ ಮಾಧ್ಯಮಗಳು ಅದರಲ್ಲೂ ಆನ್ಲೈನ್ ಮಾಧ್ಯಮಗಳು, ನಿಜವಾದ ಮಾಧ್ಯಮ ಗುಣಮಟ್ಟವನ್ನು ತಲೆ ಕೆಳಗಾಗಿಸಿದೆ. ಕಾಲಕ್ಕನುಗುನವಾಗಿ ಎಲ್ಲಾ ರಂಗಗಳೂ ಬದಲಾವಣೆಯನ್ನು ಕಾಣಬೇಕಾದದ್ದು ಅವಶ್ಯ ಆದರೆ ಬದಲಾವಣೆ ನಮ್ಮ ಬೇರನ್ನೆ ಕಿತ್ತೊಗೆಯುವ ಸಾಧನವಾಗಬಾರದು.ಇತ್ತೇಚಿನ ದಿನಗಳಲ್ಲಿ ಮಾಧ್ಯಮ ಮಿತ್ರ, ಏರ್ಪೋರ್ಟ್ ಗಳಲ್ಲಿ ಚಲನಚಿತ್ರ ತಾರೆಯರನ್ನು ಸೆರೆ ಹಿಡಿತುವುದ, ತಾರೆಯರು ಊಟಕ್ಕೆ, ಆಸ್ಪತ್ರೆಗೆ ಇಲ್ಲೇ ಹೋದರೂ ಹಿಂಬಾಲಿಸಿ ಸೆರೆ ಹಿಡಿಯುವುದು ಒಂದು ವಿಚಿತ್ರ ಮಾಧ್ಯಮ ಪ್ರಕಾರವಾಗಿ ಬಿಟ್ಟಿದೆ.
ಮುಂಬೈ ನಗರಿಯಲ್ಲಿ ಅತ್ಯಂತ ಹೆಚ್ಚಿರುವ ಈ ಸಂಸ್ಕೃತಿಯು, ದಕ್ಷಿಣ ಭಾರತಕ್ಕೆ ದಾಪು ಗಾಲು ಹಾಕುವಲ್ಲಿ ಹೆಚ್ಚಿನ ಸಮಯ ಹಿಡಿಯ ಬೇಕಿಲ್ಲ. ಒಬ್ಬ ಮನುಷ್ಯನ ಖಾಸಗಿ ತನಕ್ಕೆ ಅಡ್ಡಿ ಮಾಡುವಂತಹ ಈ ಮಾದರಿಗಳನ್ನು ಸಾಮಾಜಿಕ ನಿಲುವಿನಲ್ಲಿ ಸರಕಾರವು ಕೊನೆಹಾಡಬೇಕು .
ಆಲಿಯಾ ಭಟ್ ರಂತಹ ನಟಿಯರು ತಮ್ಮ ಖಾಸಿಗಿ ತನಕ್ಕೆ ಧಕ್ಕೆ ಉಂಟಾಗಿದೆ ಎಂದು ಪ್ರಕರಣ ದಾಖಳಿಸಿದ್ದರು. ಇಂತಹ ಮತ್ತಷ್ಟು ಪ್ರಕರಣಗಳು ದಾಖಲಾಗಿ, ಮಾಧ್ಯಮ ಕ್ಷೇತ್ರವು ವರ್ಷoತರ ಕಾಲದಿಂದ ಕಾಪಾಡಿಕೊಂಡು ಬಂದ ತನ್ನ ಗೌರವ ಮತ್ತಷ್ಟು ಬೀಗಡಾಯಿಸುವ ಮುನ್ನ, ಇಂತಹ ಸಂಸ್ಕೃತಿಗಳು ಅಂತ್ಯ ಕಾಣಬೇಕಿದೆ.