ಮಂಗಳೂರು: ದಕ್ಕಿಣ ಕನ್ನಡದಲ್ಲಿ ಸರ್ಕಾರಿ ಬಸ್ಸುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸರ್ಕಾರವು ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ ಯೋಜನೆಯನ್ನು ಜಾರಿಗೊಳಿಸುತ್ತಿದ್ದಂತೆ ಸರ್ಕಾರಿ ಬಸ್ಸುಗಳನ್ನು ಪೂರೈಸುವಂತೆ ಆಗ್ರಹ ಕೇಳಿಬರುತ್ತಿದೆ.
ಮಂಗಳೂರಿನ ಮತ್ತು ಉಡುಪಿ ನಗರದಲ್ಲಿ ಖಾಸಗಿ ಬಸ್ಸುಗಳೇ ಹೆಚ್ಚಾಗಿ ಒಡಾಡುವುದರಿಂದ ಈ ಭಾಗದ ಮಹಿಳೆಯರು ಅವಕಾಶ ವಂಚಿತರಾಗುತ್ತಿದ್ದಾರೆ. ದಿನ ನಿತ್ಯವು ಬಸ್ಸುಗಳಲ್ಲಿ ಒಡಾಡುವ ಮಹಿಳೆಯರ ಸಂಖ್ಯೆ ಕಮ್ಮಿ ಇಲ್ಲ.
ದಕ್ಕಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯು ಸಾಕಷ್ಟು ಮುಂದುವರಿದ ಹಾಗೂ ಅಭಿವೃದ್ಧಿ ಹೊಂದಿರುವ ಪ್ರದೇಶ. ಶೈಕ್ಷಣಿಕವಾಗಿ, ವ್ಯಾಪಾರ-ವಹಿವಾಟು, ಸಂಚಾರ, ಆಸ್ಪತ್ರೆ, ಹೊಟೇಲ್, ಎಂಎನ್ಸಿ ಕಂಪೆನಿಗಳು, ಕೈಗಾರಿಕ ವಲಯ ಹೀಗೆ ಸಾಕಷ್ಟು ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಪ್ರದೇಶಗಳಾಗಿವೆ. ಇಲ್ಲಿ ಕೆಲಸಕ್ಕೆ ಹೋಗುವ ಮಹಿಳೆಯರ ಸಂಖ್ಯೆ ಅಧಿಕವಾಗಿದೆ.
ರಾಜ್ಯ ಸರ್ಕಾರದ ಗ್ಯಾರಂಟಿ ಜಾರಿ ಹಿನ್ನಲೆಯಲ್ಲಿ ಈ ಎರಡು ಜಿಲ್ಲೆಯ ಮಹಿಳೆಯರು ಅವಕಾಶ ವಂಚಿತರಾಗುತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತದೆ. ಮಂಗಳೂರು ನಗರದಲ್ಲಿ ಕೇವಲ ಬೆರಳೆಣಿಕೆಯಷ್ಟೇ ಸರ್ಕಾರಿ ಬಸ್ಸುಗಳು ಒಡಾಡುತ್ತಿದೆ.ಇನ್ನು ಉಡುಪಿಗೆ ಒಲ್ವಾ ಬಸ್ಸುಗಳು ಒಡಾಡುತ್ತಿದ್ದು ಈ ಬಸ್ಸಿಗೆ ಉಚಿತ ಪ್ರಯಾಣದ ಯೋಜನೆಯು ಅನ್ವಯವಾಗುತ್ತಿಲ್ಲ.
ಸರ್ಕಾರದ ಯೋಜನೆಗಳು ಸಮಸ್ತ ರಾಜ್ಯದ ಸಮಸ್ತ ನಾಗರೀಕರಿಗೂ ಸಿಗುವಂತಾಗಲಿ. ಆಗಲೇ ಈ ಯೋಜನೆ ಸಾರ್ಥಕವೆನಿಸಿವುದು. ಇಲ್ಲವಾದಲ್ಲಿ ನಿಜಕ್ಕೂ ಇದು ಜನಪರ ಯೋಜನೆ ಅನಿಸದೆ ವೋಟ್ಗಾಗಿ ನಡೆಸಿರುವ ಗಿಮಿಕ್ ಅನಿಸುವುದರಲ್ಲಿ ಸಂಶಯವಿಲ್ಲ. ರಾಜಕೀಯ ವ್ಯಕ್ತಿಗಳ ಸುಳ್ಳಿನ ಭರವಸೆಯ ಪಟ್ಟಿಗೆ ಈ ಯೋಜನೆಯು ಕೂಡ ಸೇರುತ್ತದೆ.