ಕೇವಲ ನವೆಂಬರ ಒಂದು ಅಥವಾ ನವೆಂಬರ ತಿಂಗಳು ಮಾತ್ರ ಕನ್ನಡಕ್ಕಾಗಿ ಹೋರಾಡುವ ಹೋರಾಟಗಾರರು ನಮಗೆ ಬೇಕಾಗಿಲ್ಲ. ಈಗಿನ ಕೆಲವು ಹೋರಾಟಗಾರರು ಗೆದ್ದ ಎತ್ತಿನ ಬಾಲವನ್ನು ಹಿಡಿಯುವವರೇ ಆಗಿದ್ದಾರೆ. ನೀವು ಕನ್ನಡದ ಅಭಿಮಾನಿಗಳು ಹೋರಾಟಗಾರರೆ ನಿಜವಾಗಿದ್ದರೆ ಎಲ್ಲರನ್ನು ಒಂದೇ ತಕ್ಕಡಿಯಲ್ಲಿ ತೂಗಿ; ಅದನ್ನು ಬಿಟ್ಟು ಒಂದು ಪಕ್ಷ ಒಂದು ಸಿದ್ಧಾಂತದ ಪರವಾಗಿ ಮಾತನಾಡುವುದು ಬೇಡ. ಕನ್ನಡ ಅಂತ ಬಂದಾಗ ಎಲ್ಲ ಪಕ್ಷ, ಸಿದ್ಧಾಂತೀತವಾಗಿ ದುಡಿಯುವ ಕೈಗಳು ಕನ್ನಡಕ್ಕೆ ಬೇಕಾಗಿವೆ.
ಮೊನ್ನೆಯಷ್ಟೆ ನಡೆದ ಹೊಸ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎಷ್ಟೋ ಜನ ಶಾಸಕರು ಅನ್ಯ ಭಾಷೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅದೇ ಮಹಾರಾಷ್ಟ್ರದಲ್ಲಿ ಈ ಹಿಂದೆ ಒಬ್ಬ ಶಾಸಕ ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಅದೇ ಸಭೆಯಲ್ಲಿದ್ದ ಮನಸೇ ( ಮಹಾರಾಷ್ಟ್ರ ನವ ನಿರ್ಮಾಣ ಸೇನೆ) ಯ ಚುನಾಯಿತ ಸದಸ್ಯರು ಅಲ್ಲಿದ್ದ ಪೋಡಿಯಂ ಅನ್ನು ಎತ್ತಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಇಂತಹ ತಾಕತ್ತು ನಮ್ಮ ನಾಯಕರಲ್ಲೇಕಿಲ್ಲ ?
ನಮಗೆ ಸಿಟ್ಟು ಬರಲು ಮತ್ತೊಂದು ಕಾರಣ ನಮ್ಮಲ್ಲೇ ಇದ್ದು ನಮ್ಮವರ ಮೇಲಯೇ ದಬ್ಬಾಳಿಕೆ ಮಾಡಿ ಗೂಂಡಾಗಿರಿ ನಡೆಸುವಾಗ ಒಬ್ಬ ಕನ್ನಡಿಗನ ಸಹಾಯಕ್ಕೆ ಮತ್ತೋಬ್ಬ ಕನ್ನಡಿಗ ಅಥವಾ ರಾಜಕಾರಣಿ ,ಸಂಘಟನೆಗಳು ನಮ್ಮ ಸಹಾಯಕ್ಕೆ ಬರುವುದಿಲ್ಲ. ಇಂತಹ ಸಂಧರ್ಭದಲ್ಲಿ ಕನ್ನಡಕೊಬ್ಬ ರಾಜ್ ಠಾಕ್ರೆ ಬೇಕಾಗಿತ್ತಲ್ಲವೆ ?
ಇಷ್ಟು ಸರ್ಕಾರಗಳು ಬಂದವು ಹೋದವು ಕನ್ನಡಗರಿಗೆ ಅಂತಲೇ ಮಿಸಲಾತಿಯನ್ನು ಯಾಕೆ ಒದಗಿಸಲಾಗಲಿಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಮೀಸಲಾತಿ ಅಂತ ಈಗೀಗ ಪ್ರಾರಂಭವಾಗಿದೆ ಅದು ಸರ್ಕಾರಿ ಉದ್ಯೋಗದಲ್ಲಿ ಮಾತ್ರ ಇದರಲ್ಲೂ ಇನ್ನೂ ಒಳ ಮೀಸಲಾತಿಗಳು ಬೇರೆ.
ಈಗ ಗಡಿ ಜಿಲ್ಲೆ ಬೆಳಗಾವಿಯನ್ನೇ ತೆಗೆದುಕೊಳ್ಳಿ ಇಲ್ಲಿರುವ ಸಮಸ್ಯೆಯೆಂದರೆ ಇಲ್ಲಿ ಮರಾಠಿ ಭಾಷಿಕರು ತಮ್ಮ ಸ್ವಾಭಿಮಾನಿಗಳು ತಮ್ಮ ಭಾಷೆಯನ್ನು ಎಂದೂ ಬಿಟ್ಟುಕೊಡುವುದಿಲ್ಲ. ಆದರೆ ನಮ್ಮ ಕನ್ನಡ ಭಾಷಿಕರು ತಮ್ಮತನವನ್ನು ಮರೆತು ತಾವೇ ಮೊದಲು ಮರಾಠಿಯಲ್ಲಿ ಸಂಭಾಷಣೆಯನ್ನು ಪ್ರಾರಂಭಿಸುತ್ತಾರೆ ಹೀಗಿರುವಾಗ ಮರಾಠಿ ಭಾಷಿಕರು ಕನ್ನಡವನ್ನು ಕಲೆಯುವುದು ಯಾವಾಗ ? ಈ ಸಲದ ಬೆಳಗಾವಿ ನಗರದ ಚುನಾವಣೆಯಲ್ಲಿ ಇದೇ ರೀತಿಯ ಕಾರ್ಯದಿಂದ ಒಬ್ಬ ಒಳ್ಳೆಯ ಅಭ್ಯರ್ಥಿಯು ಸೋಲಬೇಕಾಯಿತು ಇದಕ್ಕೆ ಕಾರಣ ಮರಾಠಿ ಭಾಷಾ ಅಭ್ಯರ್ಥಿ ಚುನಾವಣಾ ಕಣದಲ್ಲಿರುವುದು. ಇದರಿಂದ ಎಲ್ಲ ಮರಾಠಿ ಭಾಷಿಕರ ಮತಗಳು ಕೇಂದ್ರೀಕೃತಗೊಂಡವು ಕೇವಲ ಒಂದು ಭಾಷೆಯ ಹೆಸರಿನ ಮೇಲೆ ಇಷ್ಟು ಮತಗಳು ಬದಲಾಗುತ್ತವೆ ಎಂದರೆ ನಮ್ಮ ಜನರಿಗೆ ಈ ಸ್ವಾಭಿಮಾನ ಏಕಿಲ್ಲ ? ಮರಾಠಿ ಭಾಷಿಕರು ಕೇವಲ ಶಿವಾಜಿ ಮಹಾರಾಜರ ಹೆಸರು ಕೇಳಿದರೆ ಸಾಕು ತಾವೆಲ್ಲ ಒಂದು ಒಗ್ಗಟ್ಟಿನಲ್ಲಿ ನಿಲ್ಲುವಂತೆ ನಮ್ಮ ಜನರಿಗೆ ಏಕೆ ಇಂತಹ ಅಭಿಮಾನ ಹುಟ್ಟುತ್ತಿಲ್ಲ ? ಇಂತಹ ಅಭಿಮಾನವನ್ನು ಹುಟ್ಟಿಸಲು ನಮ್ಮ ಕನ್ನಡಪರ ಹೋರಾಟಗಾರರಿಗೆ ಎಕೆ ಸಾಧ್ಯವಾಗುತ್ತಿಲ್ಲ ? ಎರಡು ವರ್ಷಗಳ ಹಿಂದೆ ಒಂದು ಭಾಷಣದಲ್ಲಿ ರಾಜ್ ಠಾಕ್ರೆ ಪ್ರತಾಪಗಡ ದಲ್ಲಿರುವ ಅಫ್ಜಲ್ ಖಾನನ ಗೋರಿಯ ಜಾಗವು ದಿನದಿಂದ ದಿನಕ್ಕೆ ಅತಿಕ್ರಮಣ ಗೊಳ್ಳುತ್ತದೆ ಏಕೆ ಅದರಲ್ಲಿ ಸತ್ತು ಮಲಗಿರುವ ಅಫ್ಜಲ್ ಖಾನ ಬೆಳೆಯುತ್ತಿದ್ದಾನೆಯೇ ? ಎಂಬ ಒಂದು ಪ್ರಶ್ನೆಗೆ ಸರ್ಕಾರವೇ ಅದರ ಮುಂದಾಳತ್ವವನ್ನು ವಹಿಸಿ ಅತಿಕ್ರಮಣವನ್ನು ತೆರವುಗೊಳಿಸಿತು. ಅದರಂತೆ ಕಳೆದ ವರ್ಷದ ಭಾಷಣದಲ್ಲಿ ಸಮುದ್ರ ಮಧ್ಯದಲ್ಲಿರುವ ಮಾಹಿಮ್ನ ದರ್ಗಾದ ಬಗ್ಗೆ ಪ್ರಸ್ತಾಪಿಸಿ ಇಷ್ಟುದಿನ ಇಲ್ಲದ ದರ್ಗಾ ಈಗ ಒಮ್ಮೆಲೆ ಉದ್ಭವಿಸಿದ್ದಾರೂ ಹೇಗೆ ಎಂಬ ಒಂದು ಆಕ್ಷೇಪಕ್ಕೆ ಮಹಾರಾಷ್ಟ್ರ ಮಹಾ ವಿಕಾಸ ಅಗಾಡಿಯ ಸರ್ಕಾರವೇ ಕಾಂಗ್ರೇಸ್ ಬೆಂಬಲಿತ ಸರ್ಕಾರ ಪೋಲೀಸ್ರ ಸುರ್ಪದಿಯಲ್ಲೇ ಆ ದರ್ಗಾವನ್ನು ನೆಲಸಮ ಮಾಡಿತು ಇಂತಹ ಅದೇಷ್ಟೋ ಅಕ್ರಮಗಳು ಕರ್ನಾಟಕದಲ್ಲಿ ನಡೆಯುತ್ತಲೇ ಇವೇ ನಮ್ಮ ಹೋರಾಟಗಾರರು ತಮ್ಮ ಬೆಳೆ ಬೇಯಿಸಿಕೊಳ್ಳುವುದರಲ್ಲೇ ನಿರತವಾಗಿದ್ದರೆ; ಸರ್ಕಾರದ ಕಿವಿ ಹಿಂಡವುವವರಾರು ? ಇದಕ್ಕಾದರೂ ಬೇಕಲ್ಲವೇ ಕನ್ನಡಕ್ಕೋಬ್ಬ ರಾಜ್ ಠಾಕ್ರೆ .
ಮುಂದುವರೆಯುತ್ತದೆ.