ಒಡಿಶಾದ ಬಾಲಸೋರ್ನಲ್ಲಿ ಶುಕ್ರವಾರ ಸಂಜೆ ಕೋರಮಂಡಲ್ ಎಕ್ಸ್ಪ್ರೆಸ್ ಮತ್ತು ಬೆಂಗಳೂರು- ಹೌರಾ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲುಗಳ ನಡುವೆ ನಡೆದ ಭೀಕರ ಅಪಘಾತದ ನಂತರ ರೈಲ್ವೆ ಕವಚ್ ರೈಲ್ವೇ ಸುರಕ್ಷಾ ವ್ಯವಸ್ಥೆಯ ಬಗ್ಗೆ ಚರ್ಚೆಯಾಗುತ್ತಿದೆ.
ಕವಚ್ ವ್ಯವಸ್ಥೆ ಎಂದರೆ ಏನು?
ಭಾರತೀಯ ಉದ್ಯಮದ ಸಹಯೋಗದೊಂದಿಗೆ ರಿಸರ್ಚ್ ಡಿಸೈನ್ ಮತ್ತು ಸ್ಟ್ಯಾಂಡರ್ಡ್ಸ್ ಆರ್ಗನೈಸೇಶನ್ ಅಭಿವೃದ್ಧಿಪಡಿಸಿದ ಕವಚ್ ಒಂದು ಅತ್ಯಾಧುನಿಕ ಎಲೆಕ್ಟ್ರಾನಿಕ್ ಸುರಕ್ಷತಾ ವ್ಯವಸ್ಥೆಯಾಗಿದ್ದು, ಅಪಾಯದ ಸಮಯದಲ್ಲಿ ಸಿಗ್ನಲ್ ಪಾಸಿಂಗ್ ತಪ್ಪಿಸುವುದು ಮತ್ತು ಅತಿಯಾದ ವೇಗವನ್ನು ತಪ್ಪಿಸುವಲ್ಲಿ ನಿಯಂತ್ರಿಸುವಲ್ಲಿ ಲೋಕೋ ಪೈಲಟ್ಗಳಿಗೆ ಸಹಾಯ ಮಾಡುತ್ತದೆ.
ಇದಲ್ಲದೆ, ದಟ್ಟವಾದ ಮಂಜಿನಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಇದು ರೈಲು ಕಾರ್ಯಾಚರಣೆಗಳಿಗೆ ಸಹಾಯ ಮಾಡುತ್ತದೆ. ಸ್ವಯಂಚಾಲಿತವಾಗಿ ಬ್ರೇಕ್ಗಳನ್ನು ಅನ್ವಯಿಸುವ ಮೂಲಕ, ಅಗತ್ಯವಿದ್ದಾಗ, ಈ ವ್ಯವಸ್ಥೆಯು ರೈಲಿನ ವೇಗದ ಮೇಲೆ ನಿಯಂತ್ರಣವನ್ನು ಸಾಧಿಸುತ್ತದೆ ಮತ್ತು ಸಂಭಾವ್ಯ ಅಪಘಾತಗಳನ್ನು ತಡೆಯುತ್ತದೆ.
ಓಡಿಶಾ ರೈಲು ದುರಂತವನ್ನು ಕವಚ್ ವ್ಯವಸ್ಥೆ ಏಕೆ ತಡೆಯಲಿಲ್ಲ:
ಕವಚ್ ವ್ಯವಸ್ಥೆಯು ಇನ್ನು ಕೂಡಾ ಸಂಪೂರ್ಣವಾಗಿ ಜಾರಿಯಾಗಿಲ್ಲ. ಅದಲ್ಲದೇ ಒಡಿಶಾ ವಿಭಾಗದಲ್ಲಿ ಕವಚ್ ವ್ಯವಸ್ಥೆ ಇರಲಿಲ್ಲ ಒಂದು ವೇಳೆ ಈ ವ್ಯವಸ್ಥೆ ಇದಿದ್ದರೆ ಶುಕ್ರವಾರದ ದುರಂತವನ್ನು ತಡೆಯಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.