ದಾಸ ಎಂದರೆ ತನ್ನ ಸರ್ವಸ್ವವನ್ನು ಬಿಟ್ಟು ದೇವರ ಅಧೀನವಾಗಿರುವುದು ಎಂದರ್ಥ, ಈ ಶಬ್ಧವನ್ನು ಮೊದಲು ತ್ರೇತಾಯುಗದಲ್ಲಿ ಹನುಮಂತ ಲಂಕೆಗೆ ಹೊದಾಗ ರಾವಣನ ಎದುರು ನಾನು ರಾಮನ ದಾಸ ಎಂದು ತನ್ನ ಪರಿಚಯ ನೀಡುತ್ತಾನೆ. ಕಾರಣ ಕನ್ನಡ ಸಾಹಿತ್ಯದಲ್ಲಿ ದಾಸಸಾಹಿತ್ಯಕ್ಕೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ. ಪ್ರಮುಖವಾಗಿ ದಾಸಸಾಹಿತ್ಯದಲ್ಲಿ ಹರಿಯನ್ನು ವರ್ಣಿಸುವ ಮತ್ತು ಮಧ್ವ ಸಂಪ್ರದಾಯವನ್ನು ಪ್ರಸಾರಪಡಿಸುವ ಕಾರ್ಯವನ್ನು ದಾಸವರೇಣ್ಯರು ಮಾಡಿದರು.ಸಂಸ್ಕೃತದಲ್ಲಿದ್ದ ವೇದಗಳ ಅರ್ಥ ನೀತಿಯನ್ನು ಸಾಮಾನ್ಯ ಜನರಿಗೆ ತಿಳಿಯುವಂತೆ ಕನ್ನಡದಲ್ಲಿ ರಚಿಸಿದರು.ವ್ಯಾಸ ಸಾಹಿತ್ಯದಲ್ಲಿದ್ದ ಅಂಶಗಳನ್ನೇ ದಾಸಸಾಹಿತ್ಯ ಪ್ರಚಾರ ಪಡಿಸಿತು. ವಿಷ್ಣು ಸರ್ವೋತ್ತಮ ಎಂಬ ಧೇಯವನ್ನು ದಾಸರು ತಮ್ಮ ಹಾಡು, ಸುಳಾದಿ, ಉಗಾಭೋಗಗಳ ಮುಖಾಂತರ ತಿಳಿಸಿದ್ದಾರೆ.
ಈ ದಾಸ ಪರಂಪರೆಯು ಪ್ರಥಮವಾಗಿ ೧೪ನೇ ಶತಮಾನದ ಶ್ರೀಪಾದರಾಜರು ಶ್ರೀ ರಂಗ ವಿಠಲ ಎಂಬ ಅಂಕಿತದಿಂದ ಆನೇಕ ಕೀರ್ತನೆಗಳನ್ನು ರಚಿಸಿ ದಾಸಸಾಹಿತ್ಯಕ್ಕೆ ಭದ್ರ ಬುನಾದಿಯನ್ನು ಹಾಕಿದ್ದಾರೆ. ಇವರ ನಂತರದಲ್ಲಿ ವ್ಯಾಸರಾಯರು, ವಾದಿರಾಜರು, ಪುರಂದರದಾಸರು, ಕನಕದಾಸರು,ಜಗನ್ನಾಥದಾಸರು ವಿಜಯದಾಸರು ಮೋಹನದಾಸರು ಗೋಪಾಲದಾಸರು ಗುರುಗೋವಿಂದ ವಿಠಲದಾಸರು ಮುಂತಾದ ದಾಸವರೇಣ್ಯರು ತಮ್ಮ ಸುಂದರವಾದ ಕೀರ್ತನೆಯನ್ನು ರಚಿಸಿದ್ದಾರೆ.ಅಲ್ಲದೆ ಅನೇಕ ಮಹಿಳೆಯರು ಸಹ ದಾಸಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇವರಲ್ಲಿ ಪ್ರಮುಖವಾಗಿ ಹೆಳವನಕಟ್ಟೆ ಗಿರಿಯಮ್ಮ, ಹರಪನಹಳ್ಳಿ ಭೀಮವ್ವ ದಾಸಸಾಹಿತ್ಯಕ್ಕೆ ಕೊಡುಗೆಯನ್ನು ನೀಡಿದ್ದಾರೆಂದು ಹೇಳಬಹುದಾಗಿದೆ. ಈ ದಾಸವರೆಣ್ಯರಲ್ಲಿ ಮತ್ತೊಂದು ಗಣನೀಯ ಅಂಶವೆಂದರೆ ಎಲ್ಲ ಹರಿದಾಸರು ತಮ್ಮ ಹೆಸರನ್ನು ಬಳಿಸದೆ ತಮ್ಮ ಆರಾಧ್ಯದವವನ್ನು ತಮ್ಮ ಅಂಕಿತನಾಮವನ್ನಾಗಿ ಬಳಿಸಿಕೊಂಡು ಭಗವಂತನಲ್ಲಿ ದಾಸತ್ವ ಸಾರಿದ್ದಾರೆ. ಪುರಂದರವಿಠಲ, ಹಯವದನ, ಕಾಗಿನೆಲೆಯಾದಿಕೇಶದ ವಿಜಯವಿಠಲ ಜಗನ್ನಾಥ ವಿಠಲ ಎಂಬ ಅಂಕಿತದಿಂದ ಹರಿಯನ್ನು ಸ್ತುತಿಸಿದ್ದಾರೆ.
ದಾಸಸಾಹಿತ್ಯದಲ್ಲಿ ಕನ್ನಡ ಭಾಷೆಯು ಅತ್ಯಂತ ಸರಳ ರೂಪದಲ್ಲಿದ್ದು ಪ್ರಾಸ ಮತ್ತು ಶಬ್ದಗಳ ಬಳಕೆ ವಿಶಿಷ್ಟವಾದ ರೂಪವನ್ನು ಪಡೆದಿದೆ. ಈ ಸಾಹಿತ್ಯದಲ್ಲಿ ಕೇವಲ ಭಗವಂತನ ಗುಣಗಾನವನ್ನು ಮಾಡದೆ ಜೀವನದ ಅನೇಕ ತತ್ವಗಳನ್ನು ತಿಳಿಸಿದ್ದಾರೆ. ಉದಾಹರಣೆಗೆ ʼʼಮಾನವ ಜನ್ಮ ದೊಡ್ಡದು ಇದನ್ನು ಹಾಳು ಮಾಡಿಕೊಳ್ಳದಿರೋ ಹುಚ್ಚಪ್ಪಗಳಿರಾ ”ಪುರಂದರ ದಾಸರು ಮಾನವ ಜನ್ಮದ ಶ್ರೇಷ್ಠತೆಯನ್ನು ಸಾರಿದ್ದಾರೆ, ಮತ್ತು ಅತ್ಯಂತ ಸರಳ ರೀತಿಯಲ್ಲಿ ಮುಕ್ತಿ ಮಾರ್ಗವನ್ನು ತೋರಿಸಿದ್ದಾರೆ ಉದಾಹರಣೆಗೆ ತಂಬೂರಿ ಮೀಟಿದವ ಭವ ಸಮುದ್ರ ದಾಟಿದವ ಎಂದು ಸುಲಭವಾಗಿ ದೇವರನ್ನು ಕೊಂಡಾಡುವ ಪದ್ಧತಿಯನ್ನು ಪ್ರಾರಂಭಿಸಿದರು. ದಾಸನ ಮಾಡಿಕೊಯನ್ನ ಎಂದು ದೇವರಲ್ಲಿ ತಮ್ಮ ಬೇಡಿಕೆಯನ್ನು ಹಾಡುಗಳ ಮುಖಾಂತರ ಜನರಲ್ಲಿ ಭಕ್ತಿ ಮಾರ್ಗವನ್ನು ಬಿತ್ತಿದರು. ದಾಸನಾಗು ವಿಶೇಷನಾಗು ಎಂದು ಕನಕದಾಸರು ತಿಳಿಸಿದ್ದಾರೆ. ಜಗನ್ನಾಥದಾನರು ಹರಿಕಥಾಮೃತ ಸಾರ ಎಂಬ ಗ್ರಂಥವನ್ನು ರಚಿಸಿದ್ದಾರೆ, ಅಲ್ಲದ ದಾಸರುಗಳು ವೈರಾಗ್ಯವನ್ನು ಅಷ್ಟೇ ಸುಂದರವಾಗಿ ಮತ್ತು ಮನಸ್ಸಿಗೆ ನಾಟುವಂತೆ ಚಿತ್ರಿಸಿದ್ದಾರೆ. ಬಿಂಬದಲ್ಲಿರುವ ಜೀವ ಕಂಬಸೂತ್ರ ಗೊಂಬೆಯಂತೆ ಎಂದಿಗಾದರೊಂದು ದಿನ ನಾವು ತಪ್ಪದೋ ಮತ್ತು ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಚಿಂತೆಯನ್ನು ಬಿಟ್ಟು ಶ್ರೀ ಹರಿಯ ನೆನೆಯೋ ಎಂದು ಸಾರಿದ್ದಾರೆ. ಪುರಂದರ ದಾಸರು ಮಡಿ ಮಡಿ ಮಡಿ ಎಂದು ಮೂರ ಮಾಡು ಹಾರುತಿ ಮಡಿಯಲ್ಲಿಂದ ಬಂತು ಎಂಬುದಾಗಿಯು ಮತ್ತು ಕನಕದಾಸರು `ಕುಲ- ಕುಲ ಕುಲವೆಂದು ಹೋಡೆದಾಡದಿರಿ ನಿಮ್ಮ ಕುಲದ ನೆಲೆಯ ನೇನಾದರು ಬಲ್ಲಿರಾ ಎಂದು ಸಾಮಾಜಿಕ ಸಮಾನತೆಯನ್ನು ಸಾರುವ ಹಾಡುಗಳನ್ನು ರಚಿಸಿ ಸಮಾಜದಲ್ಲಿ ಭಕ್ತಿಮಾರ್ಗದ ಜೊತೆಗೆ ಸಮಾಜವನ್ನು ಸುಧಾರಿಸುವ ಕಾರ್ಯವನ್ನೂ ಹರಿದಾಸರುಗಳು ಮಾಡಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ ….