ಉಡುಪಿ: ಕಾರ್ಕಳದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಸುನಿಲ್ ಕುಮಾರ್ ಅವರು ಸತತ ನಾಲ್ಕನೇ ಬಾರಿ ಜಯಗಳಿಸಿದ್ದಾರೆ. ಈ ಬಾರಿ ಉದಯಕುಮಾರ್ ಶೆಟ್ಟಿ ಮುನಿಯಾಲ್, ಪ್ರಮೋದ್ ಮುತಾಲಿಕ್ ಮತ್ತು ಸುನಿಲ್ ಕುಮಾರ್ ನಡುವೆ ಭಾರಿ ಪೈಪೋಟಿ ನಡೆದಿದ್ದು ಈ ತ್ರಿಕೋನ ಸ್ಪರ್ಧೆಯಲ್ಲಿ ಯಾರು ಗೆಲ್ಲಬಹುದು ಎನ್ನುವುದೆ ಯಕ್ಷಪ್ರಶ್ನೆಯಾಗಿತ್ತು. ಆದರೆ ಸುನಿಲ್ ಕುಮಾರ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನತೆ ಅವರಿಗೆ ಮತವನ್ನು ಹಾಕುವಂತೆ ಮಾಡಿದೆ.
ಬಿಜೆಪಿ ಗೆಲುವಿಗೆ ಕಾರಣಗಳನ್ನು ಹುಡುಕುವುದಾದರೆ ಸುನಿಲ್ ಕುಮಾರ್ ಅವರು ಗ್ರಾಮ ಮಟ್ಟದಲ್ಲಿ ಪಕ್ಷದ ಸಂಘಟನೆ ಸದೃಢವಾಗಿರುವುದು, ಕಾರ್ಕಳ ಉತ್ಸವ, ಪರಶುರಾಮ ಥೀಮ್ ಪಾರ್ಕ್ ಮೊದಲಾದ ಜನಾಕರ್ಷಣೆಯ ಕಾರ್ಯಕ್ರಮಗಳು, ಜಾತಿಯನ್ನು ಪರಿಗಣಿಸದೆ ಹಿಂದುತ್ವವನ್ನು ಗಟ್ಟಿಯಾಗಿ ಹಿಡಿದಿದ್ದು, ಕಾರ್ಕಳ ತಾಲೂಕಿನ ಪ್ರತಿಯೊಂದು ಭಾಗಗಳಲ್ಲಿ ಮಾಡಿದ ಅಭಿವೃದ್ದಿ ಅವರ ಗೆಲುವಿಗೆ ಕಾರಣವಾಗಿದೆ ಎನ್ನಬಹುದು.
ಇಂದಿನ ಮತ ಎಣಿಕೆ ಆರಂಭದಿಂದ ಸುನಿಲ್ ಕುಮಾರ್ ಅವರೇ ಮುನ್ನಡೆಯಲ್ಲಿದ್ದು ಅಂತಿಮ ಸುತ್ತು ಬರುವ ತನಕ ಲೀಡ್ ಕಾಪಾಡಿಕೊಂಡಿದ್ದು ವಿಶೇಷ ಗೆಲುವು ಎಂದು ಹೇಳಬಹುದು.