ಕದಂಬರ ಇತಿಹಾಸ AD 325 – 540
ಕದಂಬ ರಾಜವಂಶವು ಕರ್ನಾಟಕದ ಪ್ರಾಚೀನ ರಾಜವಂಶವಾಗಿರುತ್ತದೆ. ಇವರ ಆಡಳಿತವು ಈಗಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಪ್ರಾರಂಭವಾಗುತ್ತಿತ್ತು. ಇವರ ಪ್ರಸಿದ್ಧ ದೊರೆ ಮಯೂರ ಶರ್ಮನು ಸರಿಸುಮಾರು 345 ರಲ್ಲಿ ರಾಜ್ಯವನ್ನು ಸ್ಥಾಪನೆ ಮಾಡಿದ್ದನು. ನಂತರ ಕದಂಬ ರಾಜವಂಶವು ದೊಡ್ಡ ಸಾಮ್ರಾಜ್ಯವಾಗಿತ್ತು.
ಇವರು ಕನ್ನಡದ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಮಾಂತರವಾಗಿ ಸರಿಸುಮಾರು 500 ವರ್ಷಗಳ ಕಾಲ ಆಳ್ವಿಕೆಯನ್ನು ಮಾಡಿದರು. ಸಾಮಂತರವಾಗಿ ಆಳ್ವಿಕೆ ಮಾಡುತ್ತಿದ್ದ ಇವರು ಸರಿ ಸುಮಾರು ಆನೇಕಲ್ ಮತ್ತು ಗೋವಾದವರೆಗೆ ತಮ್ಮ ಸಾಮ್ರಾಜ್ಯವನ್ನು ವಿಸ್ತಾರ ಮಾಡಿದ್ದರು.
ನಮಗೆ ಕದಂಬ ರಾಜವಂಶದ ಬಗ್ಗೆ ತಿಳಿಯಲು ಹಲವಾರು ಶಾಸನಗಳು ದೊರೆತಿವೆ. ಅವುಗಳೆಂದರೆ ಹಲ್ಮಿಡಿ ಶಾಸನಗಳು, ತಾಳಗುಂದ ಗುಂಡನೂರು ಚಂದವಳ್ಳಿ ಹಲವು ಶಾಸನಗಳು. ಈ ಶಾಸನಗಳು ನಮಗೆ ಕದಂಬ ವಂಶದವಳ ನೋಟವನ್ನು ಒದಗಿಸುವ ಹಲವಾರು ಮಾಹಿತಿಗಳನ್ನು ನೀಡುತ್ತದೆ. ಕದಂಬರ ಪ್ರಸಿದ್ಧ ದೊರೆ ಮಯೂರ ಶರ್ಮನು ತಾಳಗುಂದದಲ್ಲಿ ವಾಸ ಮಾಡುತ್ತಿದ್ದನು. ಇದು ಇಂದಿನ ಕರ್ನಾಟಕದ ಶಿವಮೊಗ್ಗ ಜಿಲ್ಲೆಯಲ್ಲಿದೆ. ನಮಗೆ ಬರುತ್ತಿರುವ ತಳಗುಂದ ಶಾಸನದಲ್ಲಿ ಮಯೂರ ಶರ್ಮನ್ನು ಕದಂಬ ಸಾಮ್ರಾಜ್ಯದ ಸ್ಥಾಪಕ ಎಂದು ತಿಳಿಯುತ್ತದೆ.
ಕದಂಬ ರಾಜವಂಶದ ವಿಸ್ತರಣೆ ಸರಿಸುಮಾರು 365ರ ಸುಮಾರಿಗೆ ಹಲವಾರು ಸಾಮ್ರಾಜ್ಯಗಳನ್ನು ಆಳ್ವಿಕೆ ಮಾಡುದಿದ್ದರು. ನಮಗೆ ದೊರತಿರುವ ತಾಳಗುಂದ ಶಾಸನದ ಪ್ರಕಾರ ಕದಂಬರು ಉತ್ತರ ಭಾರತದ ಸಾಮ್ರಾಜ್ಯಶಾಹಿ ಗುಪ್ತರಂತ ಪ್ರಮುಖ ಕುಟುಂಬಗಳೊಂದಿಗೆ ಹಲವಾರು ವೈಯಕ್ತಿಕ ಸಂಬಂಧಗಳನ್ನು ಹೊಂದಿದ್ದರು.
ಕದಂಬ ರಾಜವಂಶದ ಆರ್ಥಿಕತೆ
ಕದಂಬ ರಾಜವಂಶದ ಆರ್ಥಿಕತೆ ತಿಳಿದಿರುವುದು ನಮಗೆ ನಮಗೆ ದೊರತ್ತಿರುವ ಶಾಸನ ಮತ್ತು ಸಾಹಿತ್ಯಗಳಿಂದ. ಇವರ ಪ್ರಮುಖ ಕಸುಬುಗಳು ಮೇಯಿಸುವಿಕೆ ಕೃಷಿ ಮಿಶ್ರವೇಸಾಯ ಗಳಾಗಿದ್ದವು. ಇವರ ಆಳ್ವಿಕೆಯಲ್ಲಿ ಶ್ರೀಮಂತ ಗಾವುಂಡ ರೈತ ಅಂದರೆ ಈಗಿನ ಗೌಡ ಸಮುದಾಯ ಬಹಳ ಪ್ರಾಂಬಲ್ಯವನ್ನು ಹೊಂದಿತ್ತು. ಇವರ ಆಳ್ವಿಕೆ ಕಾಲದಲ್ಲಿ ಜಾನುವಾರುಗಳ ಸಂಖ್ಯೆಯು ಹೆಚ್ಚಿದ್ದರಿಂದ ಹಾಲು ಉತ್ಪಾದನೆ ಕೂಡ ಇತ್ತು. ನಮಗೆ ದೊರಕಿರುವ ಮಾಹಿತಿಯಂತೆ ಇವರ ಆಳ್ವಿಕೆಯ ಸಮಯದಲ್ಲಿ ಮಹಾ ಗ್ರಾಮಗಳು, ದಸ ಗ್ರಾಮಗಳು ಎಂಬ ವಿಧಗಳು ಇದ್ದವು ಮಹಾ ಗ್ರಾಮ ಅಂದರೆ ತಾಲೂಕು ಹೆಚ್ಚಿನ ಹಳ್ಳಿ ಪ್ರದೇಶಗಳನ್ನು ಹೊಂದಿತ್ತು ಪ್ರಜೆಗಳು ತನ್ನ ಭೂಮಿ ಆರನೇ ಒಂದು ಭಾಗದಷ್ಟು ತೆರಿಗೆಯನ್ನು ಪಾವತಿ ಮಾಡಬೇಕಾಗಿತ್ತು. ಇವರ ಆಳ್ವಿಕೆಯ ಸಮಯದಲ್ಲಿ ಪ್ರಜೆಗಳಿಗೆ ರಾಜಮನೆತನದ ಸಾಮಾಜಿಕ ಭದ್ರತಾ ತೆರದೇ ತೆರಿಗೆ ಮಾರಾಟ ತೆರಿಗೆ ಭೂತೇರಿಗೆ ವೀಳ್ಯದೆಲೆ ತೆರಿಗೆ ಮುಂತಾದ ತೆರಿಗೆಗಳನ್ನು ವಿಧಿಸಲಾಗಿತ್ತು. ಇವರ ಸಾಮ್ರಾಜ್ಯದಲ್ಲಿದ್ದ ಪ್ರಜೆಗಳು ಈ ಶುಲ್ಕಗಳನ್ನು ಪಾವತಿ ಮಾಡಿ ಜೀವನ ನಡೆಸುತ್ತಿದ್ದರು.
ಕದಂಬ ರಾಜವಂಶದ ಸಾಮಾಜಿಕ ಸ್ಥಿತಿ-ಗತಿ
ಕದಂಬ ರಾಜವಂಶದ ಆಳ್ವಿಕೆಯ ಸಮಯದಲ್ಲಿ ಜಾತಿ ಪದ್ಧತಿಯು ವ್ಯಾಪಕವಾಗಿ ಹರಡಿತ್ತು. ಇವರ ಆಳ್ವಿಕೆ ಕಾಲದಲ್ಲಿ ಕ್ಷತ್ರಿಯ ಮತ್ತು ಬ್ರಾಹ್ಮಣ ಜಾತಿ ಅಗ್ರಸ್ಥಾನದಲ್ಲಿತ್ತು. ಮರಣ ಹೊಂದಿದ ನಾಯಕರಿಗೆ ವಿಶೇಷ ಗೌರವವನ್ನು ಸಲ್ಲಿಸುವುದಕ್ಕ ಕೆಲವಾರು ಸ್ಮಾರಕ ಕಲ್ಲುಗಳ ನಿರ್ಮಾಣದ ಕಾರ್ಯವನ್ನು ಮಾಡುತ್ತಿದ್ದರು. ಇದು ಆ ಕಾಲದಲ್ಲಿ ಸಾಮಾನ್ಯವಾಗಿತ್ತು. ಅಂತಹ ಕಲ್ಲುಗಳನ್ನು ನಾವಿಂದಿಗೂ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ನೋಡಬಹುದು. ಇವರ ಆಳ್ವಿಕೆಯ ಕಾಲದಲ್ಲಿ ಪುರುಷರು ಹೆಚ್ಚಾಗಿ ದೈಹಿಕ ಶಿಕ್ಷಣದ ಪ್ರಿಯರಾಗಿದ್ದರು. ಪುರುಷರ ಹೆಚ್ಚಾಗಿ ದೈಹಿಕ ಶಿಕ್ಷಣವನ್ನು ಪಡೆಯುತ್ತಿದ್ದರು. ಅಗ್ನಿ ಪುರಾಣ ಪುಸ್ತಕದ ಪ್ರಕಾರ ಪುರುಷರು ಹೊಟ್ಟೆ ತುಂಬಿದಾಗ ವ್ಯಾಪಾರ ವ್ಯಾಯಾಮವನ್ನು ಮಾಡುವುದನ್ನು ಮಾಡದಂತೆ ಸಲಹೆಯನ್ನು ನೀಡಿದ್ದಾರೆ.
ಕದಂಬ ರಾಜವಂಶದ ವಾಸ್ತುಶಿಲ್ಪ
ಕದಂಬ ರಾಜವಂಶ ವಾಸ್ತುಶಿಲ್ಪಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದರು. ನಾವು ಈಗಲೂ ಹಲವಾರು ವಾಸ್ತು ಶಿಲ್ಪಗಳನ್ನು ಕಾಣಬಹುದು. ಚಾಲುಕ್ಯ ಮತ್ತು ಪಲ್ಲವ ಶೈಲಿಗಳಿಗೆ ಕೆಲವು ಇವರ ವಾಸಿ ಶಿಲ್ಪಗಳು ಹೋಲಿಕೆಯನ್ನು ಕಾಣುತ್ತದೆ. ಕದಂಬ ರಾಜವಂಶವು ವಾಸ್ತುಶಿಲ್ಪದಲ್ಲಿ ಶಾಂತವಾಹನರ ವಾಸ್ತುಶಿಲ್ಪಗಳಿಂದ ಪ್ರೇರಿತರಾಗಿದ್ದರು. ಇವರ ಆಳ್ವಿಕೆಯ ಕಾಲದಲ್ಲಿ ಹಲವಾರು ಬೃಹತ್ ದೇವಾಲಯಗಳನ್ನು ನಿರ್ಮಾಣ ಮಾಡಲಾಯಿತು.
ಅವುಗಳಲ್ಲಿ ಕೆಲವು ನಾವು ಈಗಲೂ ಕಾಣಬಹುದು. ಅವುಗಳೆಂದರೆ ಬನವಾಸಿಯ ಮಧುಕೇಶ್ವರ ದೇವಾಲಯ. ಈ ದೇವಾಲಯಕ್ಕೆ ನಾವು ಇಂದಿಗೂ ಭೇಟಿ ನೀಡಬಹುದು. ಶತಮಾನದಲ್ಲಿ ನಿರ್ಮಾಣವಾದ ಹಲವಾರು ದೇವಾಲಯಗಳನ್ನು ಇವರ ವಾಸ್ತುಶಿಲ್ಪವನ್ನು ಕಾಣಬಹುದು. ಕದಂಬರ ಇತಿಹಾಸ ಅದ್ಭುತವಾಗಿ ಕೆತ್ತನೆ ಮಾಡಿದ ಕಲ್ಲು ಮತ್ತು ಭವ್ಯ ಕಲೆಗಳನ್ನು ಪ್ರವಾಸಿಗರನ್ನು ಸೆಳೆಯುತ್ತದೆ.
ಕದಂಬ ರಾಜವಂಶದ ಧಾರ್ಮಿಕತೆ
ಕದಂಬ ರಾಜವಂಶವು ಮೂಲತಃ ವೈದಿಕ ಹಿಂದು ಧರ್ಮಕ್ಕೆ ಸೇರಿದವರಾಗಿದ್ದಾರೆ. ಇವರ ಸ್ಥಾಪಕ ದೊರೆ ಮಯೂರ ಶರ್ಮನು ಬ್ರಾಹ್ಮಣನಾಗಿದ್ದನು. ಹಲವಾರು ಕದಂಬ ರಾಜರುಗಳು ನಂತರ ಅಶ್ವಮೇಧ ಅಂತ ಹಲವಾರು ಯಾಗಗಳನ್ನು ಮಾಡಿದರು. ನಮಗೆ ಸಿಕ್ಕಿರುವ ತಾಳಗುಂದದ ಶಾಸನದಲ್ಲಿ ಶಿವನ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಉಳಿದ ಹಲ್ಮಿಡಿ ಮತ್ತು ಬನವಾಸಿ ಶಾಸನಗಳು ವಿಷ್ಣುವಿನ ಪ್ರಾರ್ಥನೆಯೊಂದಿಗೆ ಆರಂಭವಾಗುತ್ತದೆ. ಇವರ ಕುಲದೇವರು ಮಧುಕೇಶ್ವರ ಆಗಿರುವುದರಿಂದ ಮಧುಕೇಶ್ವರ ದೇವಾಲಯವನ್ನು ಕೂಡ ನಿರ್ಮಿಸಿದ್ದಾರೆ.
ಕದಂಬರ ಇತಿಹಾಸ ಕದಂಬ ರಾಜರುಗಳು ಜೈನರಿಗೂ ಬೆಂಬಲವನ್ನು ತೋರಿಸುತ್ತಿದ್ದರೂ ಆದರಿಂದ ಇವರು ಬನವಾಸಿ ಬೆಳಗಾವಿ ಮಂಗಳೂರು ಮತ್ತು ಗೋವಾದ ಕೆಲವು ಪ್ರದೇಶಗಳಲ್ಲಿ ಜೈನ ದೇವಾಲಯಗಳು ನಿರ್ಮಿಸಲು ಸಹಾಯ ಮಾಡಿದರು ಮತ್ತು ಕೆಲವು ದೇವಾಲಯಗಳನ್ನು ಇವರೇ ನಿರ್ಮಾಣ ಮಾಡಿದರು. ರಾಜರುಗಳು ಹೆಚ್ಚಾಗಿ ಸಾಹಿತ್ಯ ಕಲೆ ಶಿಕ್ಷಣಗಳಿಗೆ ಹೆಚ್ಚಿನ ಕೊಡುಗೆಯನ್ನು ನೀಡುವ ಉದ್ದೇಶದಿಂದ ಇವುಗಳು ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಿದ್ದರು. ಇವರ ಆಧುನಿಕ ವಂಶಸ್ಥರು ಈಗ ಮಂಗಳೂರು ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಕದಂಬ ರಾಜವಂಶದ ಅವನತಿ :
ನಮಗೆ ಸಿಕ್ಕಿರುವ ಸಂಗೊಳ್ಳಿ ಶಾಸನದ ಪ್ರಕಾರ ಎರಡನೆಯ ಕೃಷ್ಣ ವರ್ಮ ಬನವಾಸಿಯ ಮೇಲೆ ದಾಳಿಯನ್ನು ಮಾಡಿದನು ಮತ್ತು ದೊರೆ ಹರಿವರ್ಮನನ್ನು 530ರಲ್ಲಿ ಕೊಲ್ಲಲಾಯಿತು. ನಂತರ ಚಾಲುಕ್ಯರು 540ರಲ್ಲಿ ಎಲ್ಲಾ ಪ್ರದೇಶಗಳನ್ನು ವಶ ಮಾಡಿಕೊಂಡರು. ಇವುಗಳ ನಡುವಿನ ಕದಂಬರು ಮತ್ತು ಬಾದಾಮಿ ಚಾಲುಕ್ಯರು ಸಾಮಂತರಾದರು ನಂತರ ಇವರ ರಾಜವಂಶ ವಿವಿಧ ಅಂಗ ಸಂಸ್ಥೆಗಳಾಗಿ ವಿಭಜನೆಯಾಯಿತು.