ಎಲ್ಲೆಡೆ ಎಚ್ಚುತ್ತಿರುವ ಕೌರ್ಯ ಜನರನ್ನು ಬೆಚ್ಚಿ ಬೀಳಿಸುತ್ತಿದೆ. ಯಾವುದರ, ಯಾರ ಭಯನೂ ಇಲ್ಲದೆ ಶರ ವೇಗದಲ್ಲಿ ಕ್ರೌರ್ಯವು ನಿರಂತರವಾಗಿ ಮಾನ ಪ್ರಾಣ ಹರಣ ಮಡುತ್ತಿದೆ. ದಿನದಿಂದ ದಿನಕ್ಕೆ ಅಪಾರಾಧ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ನಮ್ಮ ಸುತ್ತಮುತ್ತನೇ ಇಂತಹ ಘಟನೆಗಳು ನಡೆಯುತ್ತಿರುವಾಗ ಆ ಭಾಗದ ಜನರನ್ನು ಬೆಚ್ಚಿ ಬೀಳಿಸುತ್ತಿದೆ.
ಉಡುಪಿಯ ವಿಡಿಯೊ ಪ್ರಕರಣದ ಗದ್ದಲದ ಬೆನ್ನ ಹಿಂದೆಯೇ ಮೂಲ್ಕಿಯಲ್ಲಿ ಒಂದು ಶೌಚಾಲಯದಲ್ಲಿ ವಿಡಿಯೊ ಮಾಡಿರುವ ಪ್ರಕರಣ ಅಪ್ಪಳಿಸಿತ್ತು. ಉತ್ತರ ಪ್ರದೇಶದ ಶಾಲೆಯಲ್ಲಿ ಸಹಪಾಠಿಗೆ ಅನ್ಯ ಕೋಮಿನ ವಿದ್ಯಾರ್ಥಿಯಿಂದ ಕಪಾಳ ಮೋಕ್ಷ ಮಾಡಿಸಿದ ವಿಡಿಯೋ ಎಲ್ಲೆಡೆ ವೈರಲ್.
ಇನ್ನು ಮಣಿಪುರದಲ್ಲಿ ಇಬ್ಬರು ಮಹಿಳೆಯನ್ನು ನಗ್ನವಾಗಿ ಮೆರವಣಿಗೆ ಮಾಡಿ ಲೈಗಿಂಕ ದೌಜನ್ಯ ವೆಸಗಿರುವ ದೃಶ್ಯವಳಿಗಳು ಮನಸ್ಸಿನಿಂದ ಮಾಸಿಲ್ಲ ಆಗಲೇ ಪಶ್ಚಿಮ ಬಂಗಾಳದಲ್ಲಿ ಮಾಲ್ಡಾ ಜಿಲ್ಲೆಯಲ್ಲಿ ಇಬ್ಬರು ಬುಡಗಟ್ಟು ಮಹಿಳೆಯರನ್ನು ವಿವಸ್ತçಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂತು.
ತೀರಾ ಇತ್ತೀಚೆಗಷ್ಟೆ ಪೂತ್ತೂರಿನಲ್ಲಿ ಯುವತಿಯ ಕತ್ತು ಸೀಳಿದ ಘಟನೆ ನಡೆದಿದೆ. ಅಬ್ಬಾ ಇಂತಹ ಕ್ರೌರ್ಯಕ್ಕೆ ದೈರ್ಯ ಎಲ್ಲಿಂದ ಬರುತ್ತೋ.?ಇದು ಧೈರ್ಯನಾ ಅಥವಾ ಕಾನುನೂನಿನ ಹಿಡಿತ ಕೈ ಜಾರಿದೆಯೇ..?
ನಿರ್ಭಯವಾಗಿ ಕೆಲವರು ತಮ್ಮ ಕ್ರೂರತೆಯನ್ನು ಮರೆಯುತ್ತಿದ್ದಾರೆ. ದೇಶ ನಾಗಲೋಟದಿಂದ ಅಭಿವೃದ್ಧಿ ಸಾಗುತ್ತಿದ್ದರೆ ಇತ್ತ ಕ್ರೌರ್ಯವು ದಿನೆ ದಿನೆ ಹೆಚ್ಚುತ್ತಿದೆ. ಕಟ್ಟು ನಿಟ್ಟಿನ ಕಾನೂನು ಕ್ರಮದ ಅವಶ್ಯಕತೆ ಇದೆ.
ಶ್ರೀಮಂತ ರಾಷ್ಟçಗಳಲ್ಲಿ ಅಪಾರಾಧಗಳು ಹೆಚ್ಚಾಗಿ ನಡೆಯುತ್ತಿರುತ್ತವೆ ಎಂಬುದನ್ನು ಗಮನಿಸಬಹುದು. ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ ಇದರ ಬೆನ್ನ ಹಿಂದೆ ಬಹುಶ; ಕ್ರೌರ್ಯಗಳೂ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.