ಸೃಷ್ಟಿಕರ್ತನು ಪ್ರತೀ ಮನುಷ್ಯನನ್ನು ಒಂದು ನಿರ್ದಿಷ್ಟ ಶಕ್ತಿ ಮತ್ತು ಒಂದು ನಿರ್ದಿಷ್ಟ ಕುಂದು ಕೊರತೆಗಳಿಂದ ಸೃಷ್ಟಿಸಿರುತ್ತಾನೆ.
ಈ ಸೃಷ್ಟಿಗಳಲ್ಲಿ ದೈಹಿಕ ಮತ್ತು ಬೌದ್ದಿಕ ಆರೋಗ್ಯವನ್ನು ದಯಪಾಲಿಸಿ ಒಂದು ವರ್ಗ ಮಾನವರನ್ನು ಸೃಷ್ಟಿಸಿದ್ದರೆ, ಬೌದ್ಧಿಕ ಗುಣಗಳು, ಸರಿ ತಪ್ಪನ್ನು ಬೆರ್ಪಡಿಸಲು ಅಸಾಧ್ಯವಾಗುವ, ಆಗುಹೋಗುಗಳಲ್ಲನ್ನು ತಟ್ಟನೆ artaisuvalli ವಿಫಲರಾಗುವ ಮಾನವರೂ ಸೃಷ್ಟಿಸಲ್ಪಟ್ಟಿದ್ದಾರೆ.
ಆದರೆ, ಬಹುಸಂಖ್ಯಾತರಾದ ಆರೋಗ್ಯವಂತ ಮಾನವ, ವಿಶೇಷ ಚೈತನ್ಯವುಳ್ಳ ಅಲ್ಪಸಂಖ್ಯಾತರನ್ನು ನೋಡುವ ದ್ರಿಷ್ಟಿಕೋನ ವಿಶೇಷ ಚೈತನ್ಯರ ಜೀವಿಸುವ ಹಕ್ಕನ್ನೇ ಕಸಿದಂತಿದೆ. ಪ್ರತೀ ವಿಶೇಷ ಚೈತನ್ಯವುಳ್ಳ ಮಗುವು ಕೂಡ, ಸಹಪಾಟಿಗಳೊಂದಿಗೆ ಮಿಂದು, ಬೆಂದು ತಮ್ಮ ಬೌದ್ಧಿಕ ಶಕ್ತಿಯನ್ನು ಸಾವಯವವಾಗಿ ಬೆಳೆಸಬಹುದಾಗಿದೆ. ಆದರೆ, ಸಭೆ -ಸಮಾರಂಭದಂತಹ ಸಾಮಾಜಿಕ
ಒಕ್ಕೂಟದಲ್ಲಿ ವಿಶೇಷ ಚೈತನ್ಯರನ್ನು ಭಿನ್ನವಾಗಿ ನೋಡುವುದು, ಅವರ ನಡೆವಳಿಕೆಯ ಬಗ್ಗೆ ಮತ್ತೊಬ್ಬರಲ್ಲಿ ಮಾತನಾಡುವುದು ಮತ್ತು ತಮ್ಮ ಮಕ್ಕಳನ್ನು ವಿಶೇಷ ಚೇತನ ಮಕ್ಕಳೊಂದಿಗೆ ಸೇರುವುದರಿಂದ ದೂರ ವಿರಿಸುವುದು ಮುಂತಾದವುಗಳನ್ನು ಕಾಣಬಹುದಾಗಿದೆ.
ತಮ್ಮ ಮಕ್ಕಳನ್ನು ಸಮಾಜ ನೋಡುವ ದೃಷ್ಟಿ ಕೋಣವನ್ನು ಕಂಡು ಅತ್ಯಂತ ವ್ಯಥೆ ಪಡುವವರಾಗಿದ್ದಾರೆ ಹೆತ್ತವರು. ಸಮಾಜದಿಂದ ವ್ಯತಿರಿಕ್ತವಾಗಿ ಸ್ವೀಕರಿಸಿಲ್ಪಡುವ ತಮ್ಮ ಮಕ್ಕಳು ಮತ್ತಷ್ಟು ಸಂಕಷ್ಟಕ್ಕೂಳ ಗಾಗದಿರಲು, ಹೆತ್ತವರು ತಮ್ಮ ವಿಶೇಷ ಮಕ್ಕಳನ್ನು ಮನೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿರಿಸುತ್ತಾರೆ. ಇದರಿಂದ ವಿಶೇಷ ಚೈತನ್ಯ ಮಕ್ಕಳ ಮಾನಸಿಕ ಆರೋಗ್ಯ ಬೆಳವಣಿಗೆಗೆ ದಾರಿ ಮುಚ್ಚಲ್ಪಡುತ್ತದೆ.
ಸೃಷ್ಟಿಕರ್ತನು ತನ್ನ ಸೃಷ್ಟಿಗಳಲ್ಲಿ ಮಾಡಿದ ಭಿನ್ನತೆಗೆ, ಸಮಾನ ಸ್ವೀಕಾರ ಮನೋಭಾವವನ್ನು ಒಳಗೊಳ್ಳಬೇಕೇ ವಿನಃ ಅವರ ಜೀವನದ ದುಸ್ವಪ್ನವಾಗ ಬಾರದು. ಶಾಲಾ ಪಠ್ಯ ಪುಸ್ತಕ ಮತ್ತು ಸಾಮಾಜಿಕ ಚಳುವಳಿಗಳಲ್ಲಿ ಮೂಕ ಪ್ರಾಣಿಕಾಳ ಮೇಲೆ ತೋರುಬೇಕಾದ ದಯೆಯನ್ನು ಎತ್ತಿ ಹಿಡಿಯಲಾಗಿದೆ. ಆದ್ದರಿಂದ, ಸೃಷ್ಟಿಗಳಲ್ಲೇ ಅತ್ಯಂತ ಉತ್ತಮ ಸೃಷ್ಟಿಯಾಗಿರುವ ಮಾನವರ ಕುರಿತು, ಮುಖ್ಯವಾಗಿ ವಿಶೇಜ ಚೇತನರೊಂದಿಗೆ ಸಮಾಜ ಹೊಂದ ಬೇಕಾದ ಕನಿಷ್ಠ ಮರ್ಯಾದೆಗಗಳ ಕುರಿತು ಅರಿವು ಮೂಡಿಸುವುದು ಅಗತ್ಯ.