ಕ್ಯಾನ್ಸರ್ ಮಹಾಮಾರಿಯ ಪ್ರಭಾವಕ್ಕೆ ಒಳಗಾದವರು ಪಾರಾಗಲು ಸಾಧ್ಯವೇ ಇಲ್ಲ ಎಂಬ ಮಾತಿದೆ. ಆದರೆ ನಿಸರ್ಗದ ಚಮತ್ಕಾರದ ಮುಂದೆ ಮನುಷ್ಯನ ಆಟ ನಡೆಯುವುದಿಲ್ಲ. ನಿಸರ್ಗದ ಮಡಿಲಲ್ಲಿ ಸೊಂಪಾಗಿ ಬೆಳೆದ ಅನೇಕ ಗಿಡಮೂಲಿಕೆಗಳು ಕ್ಯಾನ್ಸರ್ ಸಮಸ್ಯೆಗೆ ಮನೆ ಮದ್ದು ಎಂದು ಸಾಬೀತುಪಡಿಸಿವೆ. ಆದರೂ ಕೂಡ ಕೊನೆಯ ಹಂತಕ್ಕೆ ಬಂದ ಕ್ಯಾನ್ಸರನ್ನು ಕಡಿಮೆ ಮಾಡುವುದು ತುಂಬಾ ಕಷ್ಟ.
ಕ್ಯಾನ್ಸರ್ ಮಹಾಮಾರಿ ಇಡೀ ವಿಶ್ವದ ತುಂಬಾ ಹಬ್ಬಿ ಮಾರಕ ಖಾಯಿಲೆಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ. ದೇಹದಲ್ಲಿ ಕೋಶಗಳ ಅಸಮರ್ಪಕ ಮತ್ತು ಅನಿಯಂತ್ರಿತ ಬೆಳವಣಿಗೆಯಿಂದ ಗೆಡ್ಡೆಯಾಕಾರದ ಮಾಂಸ ಖಂಡಗಳು ರೂಪುಗೊಂಡಾಗ ಅದನ್ನು ಕ್ಯಾನ್ಸರ್ ಎಂದು ಕರೆಯಲಾಗುತ್ತದೆ.
ಆದರೆ ಪರಿಸರದ ಮತ್ತು ಅನುವಂಶೀಯ ಅಂಶಗಳನ್ನು ಸಹ ನಿರ್ಲಕ್ಷ್ಯ ಮಾಡುವಂತಿಲ್ಲ. ಕೆಲವೊಂದು ಹಂತದಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ಗುಣ ಪಡಿಸಲು ಸಾಧ್ಯವಿಲ್ಲದೇ ಇದ್ದರೂ, ನಾವು ಸೇವಿಸುವ ಆಹಾರಗಳ ಮೇಲೆ ಒಂದು ಕಣ್ಣಿಟ್ಟಿದ್ದರೆ ಭವಿಷ್ಯದಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ. ಇದಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ಗಿಡಮೂಲಿಕೆಗಳು ಕ್ಯಾನ್ಸರ್ ಕಾಯಿಲೆಯ ವಿರುದ್ಧ ಹೋರಾಡುವ ಗುಣ ಲಕ್ಷಣಗಳನ್ನು ಹೊಂದಿವೆ.
ಕ್ಯಾನ್ಸರ್ ಕಾಯಿಲೆಯನ್ನು ಆರೋಗ್ಯಕರ ಆಹಾರ ಪದ್ಧತಿ ಮತ್ತು ಉತ್ತಮ ಜೀವನ ಶೈಲಿಯಿಂದ ಕೂಡ ಅದು ಬರದ ಹಾಗೆ ತಡೆಯಬಹುದಾಗಿದೆ. ಆದ್ದರಿಂದ ನಮ್ಮ ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕ ಹಂತದಲ್ಲಿ ಗುಣ ಪಡಿಸುವ ಕೆಲವೊಂದು ಗಿಡಮೂಲಿಕೆಗಳ ಬಗ್ಗೆ ಮಾಹಿತಿ ಇಲ್ಲಿದೆ.
ಅಲೋವೆರಾ
ಒಂದು ಅಧ್ಯಯನ ವ್ಯಕ್ತಪಡಿಸಿದ ಅನಿಸಿಕೆಯಂತೆ ಅಲೋವೆರಾದಲ್ಲಿರುವ ಫೈಟೋನ್ಯೂಟ್ರಿಯೆಂಟ್ಸ್ ಅಂಶ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುತ್ತದೆ. ಆದ್ದರಿಂದ ಒಂದು ಗ್ಲಾಸ್ ಅಲೋವೆರಾ ಜ್ಯೂಸ್ ನಲ್ಲಿ ಮನುಷ್ಯನಿಗೆ ಎದುರಾಗುವ ಹಲವು ಬಗೆಯ ಕ್ಯಾನ್ಸರ್ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಗೋಧಿ ಹುಲ್ಲು
ಆಯುರ್ವೇದ ಪದ್ಧತಿಯಲ್ಲಿ ಗೋಧಿ ಹುಲ್ಲಿನ ಉಪಯೋಗ ಬಹಳ ಪ್ರಾಚೀನ ಕಾಲದಿಂದ ನಡೆಯುತ್ತಾ ಬಂದಿದೆ. ಗೋಧಿ ಹುಲ್ಲು ಮನುಷ್ಯನ ದೇಹದ ರಕ್ತವನ್ನು ಶುದ್ಧೀಕರಿಸಿ ಲಿವರ್ ಮತ್ತು ಮೂತ್ರ ಪಿಂಡಗಳನ್ನು ಶುಚಿಗೊಳಿಸಿ ಸರಿಯಾದ ರೀತಿಯಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಹೇಳಲಾಗುತ್ತದೆ. ಕ್ಯಾನ್ಸರ್ ರೋಗಿಗಳು ಪ್ರತಿ ದಿನ ಗೋಧಿ ಹುಲ್ಲಿನ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಅವರ ದೇಹದಲ್ಲಿ ರಕ್ತ ಸಂಚಾರ ಸರಿಯಾದ ರೀತಿಯಲ್ಲಿ ದೊರೆತು ಕ್ಯಾನ್ಸರ್ ಸಮಸ್ಯೆಯನ್ನು ದೂರ ಮಾಡಬಹುದು.
ಕಪ್ಪು ಮೆಣಸು
ಕಪ್ಪು ಮೆಣಸು ತನ್ನಲ್ಲಿ ‘ ಪೆಪೆರಿನೆ ‘ ಎಂಬ ಶಕ್ತಿಯುತವಾದ ಆಂಟಿ – ಆಕ್ಸಿಡೆಂಟ್ ಗುಣ ಲಕ್ಷಣಗಳನ್ನು ಹೊಂದಿದೆ. ಕಪ್ಪು ಮೆಣಸಿನಲ್ಲಿ ಮನುಷ್ಯನ ದೇಹದ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ ಕ್ಯಾನ್ಸರ್ ಕಾಯಿಲೆಯ ಪ್ರಭಾವವನ್ನು ಕಡಿಮೆ ಮಾಡುವ ಶಕ್ತಿ ಇದೆ. ನಿಮ್ಮ ಅಡುಗೆ ಪದಾರ್ಥಗಳಲ್ಲಿ ಕಪ್ಪು ಮೆಣಸಿನ ಉಪಯೋಗ ನಿಯಮಿತವಾಗಿ ಮಾಡುತ್ತಾ ಬಂದರೆ ಕ್ಯಾನ್ಸರ್ ಕಾಯಿಲೆಯಿಂದ ಪಾರಾಗಬಹುದು.
ಹೀಗೆ ಕೆಲವು ಆಹಾರ ಪದಾರ್ಥಗಳಿಂದಲೇ ನಾವು ಈ ಕ್ಯಾನ್ಸರನ್ನು ತಡೆಯಬಹುದೆಂದು ಆಯುರ್ವೇದದಲ್ಲಿ ತಿಳಿಸಲಾಗುತ್ತದೆ. ಹಾಗಂತ ಎರಡನೇ ಹಂತಕ್ಕೆ ಮೂರನೇ ಹಂತಕ್ಕೆ ಹೋದಾಗ ಇದನ್ನು ಬಳಸದೆ ನೇರವಾಗಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.