ಆಟಿ ತಿಂಗಳು ಬಂದೆಂದರೆ ತುಳುನಾಡಿನಾದ್ಯಂತ ಆಟಿದ ಕೂಟದಂತಹ ಸಮಾರಂಭಗಳಲ್ಲಿ ತುಳುನಾಡಿನ ಪಾರಂಪರಿಕ ಖಾದ್ಯಗಳು ಪ್ರಮುಖ ಆಕರ್ಷಣೆ. ಇದೀಗ ಇವುಗಳ ರುಚಿಗಳ ದೆಹಲಿಗೂ ತಲುಪಿದ್ದು, ಪ್ರಧಾನಿ ಮೋದಿ ತುಳುನಾಡಿದ ಖಾದ್ಯದ ರುಚಿಗೆ ಫಿದಾ ಆಗಿದ್ದಾರೆ.
ದೆಹಲಿಯ ಸಂಸತ್ ಭವನದಲ್ಲಿ ದಕ್ಷಿಣ ಭಾರತದ ಎನ್ಡಿಎ ಸಂಸದರ ಜತೆ ಪ್ರಧಾನಿ ಮೋದಿ ಸಭೆ ನಡೆಸಿದ್ದು ಈ ಸಂದರ್ಭದಲ್ಲಿ ದಕ್ಷಿಣ ಭಾರತದ ಪ್ರಮುಖ ಪ್ರದೇಶಗಳಾದ ಮಂಗಳೂರು, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪ್ರಮುಖ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗಿತ್ತು.
ದೆಹಲಿಯಲ್ಲಿರುವ ಸಾಗರ್ ರತ್ನ ಹೋಟೆಲ್ನಲ್ಲಿ 40 ಬಗೆಯ ತಿಂಡಿ ಖಾದ್ಯಗಳನ್ನು ತಯಾರಿಸಲಾಗಿದ್ದು, ಇದಕ್ಕೆ ಉಡುಪಿ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶದಿಂದ ತಲಾ ಇಬ್ಬರು ಪಾಕ ತಜ್ಞರನ್ನು ಕರೆಸಿ ಆಯಾ ರಾಜ್ಯದ ವಿಶೇಷ ತಿಂಡಿ ತಿನಿಸುಗಳನ್ನು ತಯಾರಿಸಲಾಗಿತ್ತು.
ತುಳುನಾಡಿನ ಖಾದ್ಯಕ್ಕೆ ಮನಸೋತ ಪಿಎಂ:
ಜೇನು ಸಹಿತ ಹಲಸಿನ ಗಟ್ಟಿ, ಮರತೇವು ಪತ್ರೊಡೆ, ಹಳದಿ ಎಲೆಯ ಗಟ್ಟಿ, ಬಂಬೆ ಸುಕ್ಕ, ಕಣಲೆ ಖಾದ್ಯ, ತಿಮರೆ ಚಟ್ನಿ, ದಕ್ಷಿಣ ಭಾರತೀಯ ಶೈಲಿಯ ಕಾಫಿ, ಗೋಳಿ ಬಜೆ, ಮಸಾಲ ವಡಾ, ಬನಾನ ಚಿಪ್ಸ್ , ರಾಗಿ ದೋಸೆ, ದಹಿ ವಡಾ ಸೇರಿದಂತೆ ಸುಮಾರು 40 ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಲಾಗಿತ್ತು. ಇವುಗಳನ್ನು ತುಳುನಾಡಿನ ಸಾಂಪ್ರದಾಯಿಕ ಶೈಲಿ ಬಾಳೆ ಎಲೆಯಲ್ಲಿ ಬಡಿಸಲಾಯಿತು. ಮೋದಿ ಇವುಗಳ ರುಚಿಯನ್ನು ಸವಿದು ಸಂಭ್ರಮಿಸಿದರು.
ಶುಚಿಗೆ ಆದ್ಯತೆ:
ತುಳುನಾಡಿನ ಖಾದ್ಯಗಳ ರುಚಿಯಂತೆ ಶುಚಿತ್ವಕ್ಕೂ ಆದ್ಯತೆಯನ್ನು ನೀಡಲಾಯಿತು. ಬಳಕೆ ಮಾಡುವ ಪ್ರತಿಯೊಂದು ಸಾಮಾಗ್ರಿಗಳನ್ನು ತಪಾಸಣೆಮಾಡಿ ಬಳಸಲಾಗಿತ್ತು.