ಮೈಸೂರು: ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಹತ್ಯೆ ಪೂರ್ವ ನಿಯೋಜಿತ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಆರೋಪಿಸಿದ್ದಾರೆ. ಸಿಟಿ ರವಿ ನೇತೃತ್ವದ ಬಿಜೆಪಿ ಸತ್ಯಶೋಧನಾ ತಂಡ ವೇಣುಗೋಪಾಲ್ ನಿವಾಸಕ್ಕೆ ಮಂಗಳವಾರ ಭೇಟಿ ನೀಡಿ ಮೃತನ ಪತ್ನಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿತು. ವೇಣುಗೋಪಾಲ್ ಪತ್ನಿ ಪೂರ್ಣಿಮಾ ಅವರಿಗೆ ಸಿಟಿ ರವಿ 5 ಲಕ್ಷ ರೂಪಾಯಿ ಚೆಕ್ ನೀಡಿದರು. ನಂತರ ಮಾತನಾಡಿದ ಅವರು, ಇದೊಂದು ಪೂರ್ವನಿಯೋಜಿತ ಹತ್ಯೆ. 30 ಕಡೆ ಇರಿದಿದ್ದಾರೆ, ಶಸ್ತ್ರಾಸ್ತ್ರ ಬಳಸಿ ಕೊಲೆ ಮಾಡಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಇದುವರೆಗೂ ರಾಜ್ಯದ 16-17 ಕಡೆ ಈ ರೀತಿ ಘಟನೆಗಳು ನಡೆದಿವೆ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದುವರೆಗೆ 14 ಕೊಲೆ, ಕೊಲೆ ಯತ್ನ, ಹೆದರಿಸುವ ಪ್ರಕರಣಗಳು ನಡೆದಿವೆ. ಸಾಮಾನ್ಯ ನೆಲೆಯಲ್ಲಿ ನೋಡಿದರೆ ಇವೆಲ್ಲವೂ ಬಿಡಿ ಬಿಡಿಯಾದ ಪ್ರಕರಣಗಳು. ಆದರೆ ಎಲ್ಲದರ ಹಿಂದೆ ಒಂದು ತಂಡ ಕೆಲಸ ಮಾಡುತ್ತಿರುವ ಗುಮಾನಿ ಇದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಮುಸ್ಲಿಮರ ಒಂದು ವರ್ಗ ಮದೋನ್ಮತ್ತವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗಿದೆ. ಇದಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಪ್ರೋತ್ಸಾಹವೂ ಕಾರಣ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.
ಚಿಕ್ಕೋಡಿಯ ಹಿರೇಕೋಡಿಯಲ್ಲಿ ನಡೆದ ಜೈನ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಕೊಲೆ
ಮೈಸೂರಿನ ತಿ. ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ ಹತ್ಯೆ
ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಹೊಸಕೋಟೆಯಲ್ಲಿ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಎಂಬವರ ಕೊಲೆ
ಧಾರವಾಡದಲ್ಲಿ ನಡೆದ ವಿಜಯೋತ್ಸವದಲ್ಲಿ ಭರತೇಶ್ ಎಂಬವರಿಗೆ ಚೂರಿ ಇರಿತ
ಯಾದಗಿರಿಯಲ್ಲಿ ಬಿಜೆಪಿ ಕಾರ್ಯಕರ್ತ ಶ್ರೀನಿವಾಸ್ ಹತ್ಯೆ ನಡೆದಿದೆ. ಇದರಲ್ಲಿ, ಬಂಗಾಳ ಒಡಿಶಾ ಮೂಲದ ಮುಸ್ಲಿಮರು ಭಾಗಿಯಾಗಿರುವ ಶಂಕೆ ಇದೆ.
ಚುನಾವಣೆಯ ವಿಜಯೋತ್ಸವದ ಸಂದರ್ಭದಲ್ಲಿ ಬೆಳಗಾವಿಯಲ್ಲಿ ಪಾಕಿಸ್ತಾನ್ ಕೀ ಜೈ ಘೋಷಣೆ
ನಂಜನಗೂಡಿನಲ್ಲಿ ಭಾರತ್ ಮಾತಾ ಕೀ ಜೈ ಎಂದು ಜಯಘೋಷ ಮಾಡಿದ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ
ಸರ್ವಜ್ಞ ನಗರದಲ್ಲಿ ಪದ್ಮನಾಭ ರೆಡ್ಡಿ ಅವರ ಗ್ಯಾರೇಜಿಗೆ ಮತ್ತು ಬೈಕ್ಗೆ ಬೆಂಕಿ ಹಾಕಿದ್ದು
ಹಾಸನದಲ್ಲಿ ಬೈಕ್ನಲ್ಲಿ ಪಿಸ್ತೂಲು ಹಿಡಿದುಕೊಂಡು ಓಡಾಡಿ ಭಯ ಹುಟ್ಟಿಸಿದ್ದು
ಸಕಲೇಶಪುರದಲ್ಲಿ ಬಕ್ರೀದ್ ಹಿಂದಿನ ದಿನ ತುಂಬು ಗಬ್ಬದ ಎಮ್ಮೆಯನ್ನು ಬಂದೂಕಿನಿಂದ ಶೂಟ್ ಮಾಡಿ ಮಾಂಸ ಮಾಡಿದ್ದು,
ಕಡೂರಿನಲ್ಲಿ ವಿಘ್ನೇಶ್ ಎಂಬಾತನ ಮೇಲೆ ಸಣ್ಣ ಕಾರಣ ಇಟ್ಟುಕೊಂಡು ಮುಸ್ಲಿಂ ಯುವಕರು ಅಟ್ಟಾಡಿಸಿ ಹಲ್ಲೆ ಮಾಡಿದ್ದು
ಹಳೆ ಬಾಗಲಕೋಟೆಯ ನವನಗರದಲ್ಲಿ ಬೀದಿ ದೀಪ ಆಫ್ ಮಾಡಿ, ಸಿಸಿ ಟಿವಿ ಕವರ್ ಮಾಡಿ ಮೂವರು ಹಿಂದುಗಳ ಮೇಲೆ ಹಲ್ಲೆ ಮಾಡಿದ್ದುಭಟ್ಕಳದಲ್ಲಿ ಹಿಂದೂ ಹೆಣ ಹೂಳಲು ಬಿಡಲ್ಲ ಅಂತ ಧಮ್ಕಿ ಹಾಕಲಾಗಿದೆ
ಎಂದು ರವಿ ಇತ್ತೀಚೆಗೆ ನಡೆದ ಘಟನಾವಳಿಗಳ ಪಟ್ಟಿ ನೀಡಿದರು.