ಬೆಂಗಳೂರು: ಸಂಕಲ್ಪ ಹಿಂದೂ ರಾಷ್ಟ್ರ ಇದರ ವತಿಯಿಂದ ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಬೆಂಗಳೂರು ನಗರದ ಮೆಜೆಸ್ಟಿಕ್ ಬಳಿ ಇರುವ ಬಿಬಿಎಂಪಿ ಗ್ರೌಂಡ್, ಪಕ್ಕದಲ್ಲಿರುವ ಪುರಾತನ ನಾಗರಕಟ್ಟೆಯ ಬಳಿ ನಾಗ ದೇವರ ಪೂಜೆಯನ್ನು ಹಮ್ಮಿಕೊಂಡಿದ್ದರು, ಮತ್ತು ಎಲ್ಲ ಹಿಂದೂಗಳು ಕುಟುಂಬ ಸಮೇತರಾಗಿ ಬಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಎಲ್ಲರಿಗೂ ಆಹ್ವಾನವನ್ನು ನೀಡಿದ್ದರು. ಆದರೆ ಪೂಜೆ ತಯಾರಿ ನಡೆಸುತಿದ್ದ ಪುನೀತ್ ಕೆರೆಹಳ್ಳಿಅವರನ್ನು ಮಧ್ಯದಲ್ಲೇ ಕರೆದುಕೊಂಡು ಹೋಗಿ ಉಪ್ಪಾರಪೇಟೆ ಪೊಲೀಸರು ನೋಟೀಸ್ ನೀಡಿದ್ದಾರೆ.
ಬಿಬಿಎಂಪಿ ಗೌಂಡ್ ಪಕ್ಕದಲ್ಲಿರುವ ಪುರಾತನ ನಾಗರಕಟ್ಟೆಯ ಬಳಿ ಪೂಜೆಯನ್ನು ಮಾಡಲು ಸಂಬಂಧಪಟ್ಟ ಬಿಬಿಎಂಪಿ ಅಧಿಕಾರಿಗಳಿಂದ ಅನುಮತಿಯನ್ನು ಪಡೆದಿದ್ದಿರಾ? ಪಡೆದಿದ್ದರೆ ಅದರ ಪ್ರತಿಯಲ್ಲಿದೆ ? ಎಂದು ನೋಟಿಸ್ನಲ್ಲಿ ಉಲ್ಲೇಖವಾಗಿದೆ. ಅದರಿಂದ ಆಕ್ರೋಶಗೊಂಡ ಪುನೀತ್ ಕೆರೆಹಳ್ಳಿ ನೋಟಿಸ್ ನೀಡುವ ಅಧಿಕಾರ ಬಿಬಿಎಂಪಿಗೆ ಇದೆ ಹೊರತು ಉಪ್ಪಾರ ಪೇಟೆಯ ಪೋಲಿಸರಿಗೆ ಅಲ್ಲಾ ಎಂದು ತಿಳಿಸಿದ್ದಾರೆ. ಇದು “ಹಿಟ್ಲರ್ ಸರ್ಕಾರ”ಇನ್ನು ಮುಂದೆ ದೇವಸ್ಥಾನದಲ್ಲಿ ಪೂಜೆ ಮಾಡಲು BBMP ಅನುಮತಿ ಪಡೆಯಬೇಕಂತೆ ಎಲ್ಲಿಗೆ ಬಂತು ಹಿಂದೂಗಳ ಪರಿಸ್ಥಿತಿ, ದೇವಸ್ಥಾನಗಳಲ್ಲಿ ಪೂಜೆ ಮಾಡಲು ಹಿಂದೂಗಳಿಗೆ ಸ್ವಾತಂತ್ರ್ಯ ಇಲ್ಲವೇ? ಎಂದು ತಮ್ಮ ಆಕ್ರೋಶವನ್ನು ರಾಜ್ಯ ಸರ್ಕಾರದ ವಿರುದ್ಧ ಹೊರಹಾಕಿದ್ದಾರೆ.
ಇದಕ್ಕೆ ಬಿಜೆಪಿಯಿಂದ ಬಿ ವಾಯ್ ವಿಜಯೀಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ನಡೆಸಿ ರಾಜ್ಯದಲ್ಲಿ ಹಿಂದೂಗಳಿಗೆ ಸಾಮಾಜಿಕ ನ್ಯಾಯವಿಲ್ಲ ಇದು ತುಘಲಕ್ ಸರ್ಕಾರ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.