ಈ ಸಾಲಿನ ಕರ್ನಾಟಕ ಬಜೆಟ್ 2023-2024ನೇ ಸಾಲಿನ ವಾರ್ಷಿಕ ಮುಂಗಡ ಪತ್ರವನ್ನು ಮುಖ್ಯಮಂತ್ರಿ ಸಿದ್ಧರಾಮ್ಯನವರು ಮಂಡಿಸಿದ್ದಾರೆ. ಈ ಸಾಲಿನ ಮುಂಗಡ ಪತ್ರದಲ್ಲಿ ತಮಗೆ ಅಧಿಕಾರ ನೀಡಲು ನೆರವಾದ ಅಲ್ಪಸಂಖ್ಯಾತರಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಈಗಾಗಲೇ ಅನೇಕ ಗ್ಯಾರೆಂಟಿಗಳ ಮೂಲಕ ಜನರನ್ನು ಸಂತೃಪ್ತಿ ಪಡಿಸಿರುವ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಭಾಗ್ಯಗಳನ್ನು ನೀಡಿ ಖಜಾನೆಯ ಭಾಗ್ಯಲಕ್ಷ್ಮಿಯನ್ನು ಈಗಾಗಲೇ ಹೊರಹಾಕಿದ್ದಾರೆ. ಇವರ ಗ್ಯಾರೆಂಟಿಗಳಲ್ಲಿ ಒಂದಾದ ಅನ್ನಭಾಗ್ಯಕ್ಕೆ ಅನ್ನಲಕ್ಷ್ಮಿ ಮುನಿಸಿಕೊಂಡಿದ್ದು ಬೇರೆಯವರಿಂದ ಬೇಡಿ ಅಕ್ಕಿ ತರುವಂತಹ ಕಾರ್ಯವನ್ನು ರಾಜ್ಯದ ನಾಯಕರು ಮಾಡುತ್ತಿದಾರೆ.
ಇಲ್ಲದ ಲಕ್ಷ್ಮಿಗೆ ಇನ್ನೊಂದು ಚುರು ಅಲಂಕಾರ ಮಾಡುವಂತಿದೆ ಈ ಸಾಲಿನ ರಾಜ್ಯದ ಬಜೆಟ್. ಮೊದಲನಿಂದಲೂ ಸರ್ವ ಜನಾಂಗದ ಶಾಂತಿಯ ತೋಟವಾದ ಕರ್ನಾಟಕ ಇವರ ಆಳ್ವಿಕೆಯಲ್ಲಿ ಜೈ ಹಿಂದ ಗಿಂತ ಅಹಿಂದ ಮಂತ್ರವೇ ಜಾಸ್ತಿ ಕೇಳಿಸುತ್ತದೆ. ನೀಡುವುದಾದರೆ ಎಲ್ಲರಿಗೂ ನೀಡಿ ತಾರತಮ್ಯಕ್ಕೆ ಇಲ್ಲಿ ಆಸ್ಪದವಿಲ್ಲ. ಆದರೆ ಇಲ್ಲಿ ಒಂದು ಸಮುದಾಯದ ಒಲೈಕೆ ರಾಜಕಾರಣದ ವಾಸನೆ ತುಂಬಾ ಗಾಢವಾಗಿ ಮೂಗಿಗೆ ಬಡಿಯುತ್ತಿದೆ.
ಅಗತ್ಯವಿದ್ದವರಿಗೆ ಆರ್ಥಿಕವಾಗಿ ದುರ್ಬಲವಿದ್ದವರಿಗೆ ಎಲ್ಲ ಸಮುದಾಯಗಳಿಗೆ ಉಪಯುಕ್ತವಾಗುವಂತಹ ಹೊಸ ಹೊಸ ಯೋಜನೆಗಳನ್ನು ತನ್ನಿ ಅದಕ್ಕೆ ನಮ್ಮ ಸಹಕಾರ ಮತ್ತು ಬೆಂಬಲವು ಇದೆ. ಆದರೆ ನಿಮ್ಮ ಯೋಜನೆಗಳು ಕೇವಲ ಒಂದು ಸಮುದಾಯಕ್ಕೆ ಅಥವಾ ಒಂದು ಕೋಮಿಗೆ ಮೀಸಲಾಗಿರುವುದು ದುರಾದುಷ್ಟಕರ.
ಉದಾಹರಣೆಯೊಂದಿಗೆ ವಿವರಿಸುತ್ತೆನೆ.
ಅಲ್ಪಸಂಖ್ಯಾತರಿಗೆ ಸಿದ್ದು ಸರ್ಕಾರದ ಕೊಡುಗೆಗಳು
• 1-8 ನೇ ತರಗತಿವರೆಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ
• ವಿದ್ಯಾರ್ಥಿ ವೇತನಕ್ಕಾಗಿ ಸುಮಾರು 60 ಕೋಟಿ ಮೀಸಲು
• 10 ಹೊಸ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ಸ್ಕೂಲ್ ಆರಂಭ
• 65 ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಗಳ ಉನ್ನತೀಕರಣ
• ಬೆಂಗಳೂರಿನ ಹಜ್ ಭವನದಲ್ಲಿ IAS/KAS ವಸತಿ ಸಹಿತ ತರಬೇತಿ
• ರಾಜ್ಯದಲ್ಲಿ 49,000 ವಕ್ಸ್ ಆಸ್ತಿ ಸಂರಕ್ಷಣೆಗೆ 50 ಕೋಟಿ
• ವಿದೇಶದಲ್ಲಿ ಅಧ್ಯಯನ ಮಾಡಲು ಶೂನ್ಯ ಬಡ್ಡಿಯಲ್ಲಿ ಸಾಲ
• ಅಲ್ಪಸಂಖ್ಯಾತರು 4 ಚಕ್ರದ ವಾಹನ ಖರೀದಿಗೆ 3 ಲಕ್ಷ ನೆರವು
• ಗುರುದ್ವಾರ ಅಭಿವೃದ್ಧಿಗೆ 25 ಕೋಟಿ ಮೀಸಲು
• ಕೌಶಲ್ಯಾಭಿವೃದ್ಧಿ ತರಬೇತಿಗೆ 4 ಕೋಟಿ ಮೀಸಲು
• ಅರ್ಧಕ್ಕೆ ನಿಂತ ಶಾದಿಮಹಲ್ ಮರು ನಿರ್ಮಾಣಕ್ಕೆ 54 ಕೋಟಿ
ಇಷ್ಟಲ್ಲದೆ ನಿಮ್ಮ ಬಜೆಟ್ ಮಂಡನೆ ಅವಧಿಯಲ್ಲಿನ ಅರ್ಧ ಭಾಗವನ್ನು ಹಿಂದಿನ ಬಿಜೆಪಿ ಸರ್ಕಾರ ಮತ್ತು ಮೋದಿಯನ್ನು ತೆಗೆಳಲು ಬಳಿಸಿಕೊಂಡಿದ್ದಿರಿ ಅವರು ನೀಡಿದ ಅನೇಕ ಉತ್ತಮವಾದ ಯೋಜನೆಗಳಿಗೆ ತಡೆಯೊಡ್ಡಿದ್ದಿರಿ. ಸರ್ಕಾರ ಸರ್ಕಾರದ ನಡುವೆ ವೈಮನಸ್ಸು ಅಥವಾ ಜಗಳಗಳು ನಡೆಯುತ್ತಲೇ ಇರುತ್ತವೆ ಆರೋಪ/ ಪ್ರತ್ಯಾರೋಪಗಳು ರಾಜಕೀಯದಲ್ಲಿ ಸಹಜ ಆದರೆ ಅದನ್ನೇ ಮೂಲವಾಗಿಟ್ಟುಕೊಂಡು ಜನರಿಗೆ ಉಪಯುಕ್ತವಾದ ಕಾಯ್ದೆ ಕಾನೂನುಗಳನ್ನು ಅಮಾನತು ಮಾಡುವುದು ಎಷ್ಟರ ಮಟ್ಟಿಗೆ ಸರಿ ?
ಇದಕ್ಕೂ ಅನೇಕ ಉದಾಹರಣೆಗಳಿವೆ
• ಬಿಜೆಪಿಯ APMC ಕಾಯ್ದೆ ಕೈಬಿಟ್ಟ ಸರ್ಕಾರ.
• ಪಠ್ಯ ಪರಿಷ್ಕರಣೆ ಕೈಬಿಟ್ಟ ಸರ್ಕಾರ.
• NEP ರದ್ದು ಮಾಡಿ ರಾಜ್ಯ ಶಿಕ್ಷಣ ನೀತಿ ಜಾರಿ .
• ಜಿಲ್ಲೆಗೊಂದು ಗೋಶಾಲೆ ಯೋಜನೆ ಕೈಬಿಟ್ಟ ಸರ್ಕಾರ.
• ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು.
• ವಿವೇಕ ಶಾಲೆ ಅಭಿವೃದ್ಧಿ ಯೋಜನೆ ರದ್ದು.
• ಕೃಷಿ ಭೂಮಿ ಮಾರಾಟ ಕಾಯ್ದೆ ರದ್ದು.
• ಸ್ವಾಮಿವಿವೇಕಾನಂದ ಯುವ ಶಕ್ತಿ ಯೋಜನೆಗೆ ಕೊಕ್.
• ಮಹಿಳಾ ಸ್ತ್ರೀ ಸಾಮರ್ಥ್ಯ ಯೋಜನೆಗೂ ಕೊಕ್.
• ಮಹಿಳೆಯರ ಸ್ವಸಹಾಯ ಸಂಘದ ಸಹಾಯಧನ ಬಂದ
• ಭೂಸಿರಿ ಯೋಜನೆಯಡಿ ನೀಡುವ 10 ಸಾವಿರ ರೂ.ಇಲ್ಲ.
• 500 ರೂ.ನೀಡುವ ಶ್ರಮಶಕ್ತಿ ಯೋಜನೆ ಬಂದ್.
ಈ ರೀತಿ ಉತ್ತಮ ಯೋಜನೆಗಳು ಅಥವಾ ಗ್ರಾಮೀಣ ಭಾಗದ ಜನರಿಗೆ ಉಪಯುಕ್ತವಾಗುವ ರೈತರು ಮತ್ತು ಮಹಿಳೆಯರಿಗೆ ಉಪಯುಕ್ತವಾದ ಯೋಜನೆಗಳನ್ನು ಕೇವಲ ನಿಮ್ಮ ರಾಜಕೀಯ ಲಾಭಕ್ಕಾಗಿ ನಿಲ್ಲಿಸುವುದು ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ನಿಮಗೆ ಇದು ಶೋಭೆ ತರುವಂತಹದ್ದಲ್ಲ.
ನಿಮಗೆ ಈ ಬಾರಿ ಕೇವಲ ಅಲ್ಪ ಸಂಖ್ಯಾತರು ಮತಗಳು ಮಾತ್ರ ದೊರೆಯದೆ ಎಲ್ಲರಿಂದಲೂ ಮತ ದೊರೆತಿದೆ ಆದರೆ ನಿಮ್ಮ ಯೋಜನೆಗಳು ಕೇವಲ ಕೆಲವು ಕೋಮಿಗೆ ಮೀಸಲಾಗಿರುವುದು ದುರಾದೃಷ್ಟಕರ.