ಕೆನಡಾದಲ್ಲಿ ಖಲಿಸ್ತಾನಿ ಉಗ್ರ ಮತ್ತು ಟೈಗರ್ ಫೋರ್ಸ್ ಮುಖ್ಯಸ್ಥ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಕೆನಡಾದ ಸರ್ರೆ ನಗರದಲ್ಲಿ ಇಬ್ಬರು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಸೋಮವಾರ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಹಲವಾರು ಭಾರತ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ, ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಸರ್ಕಾರ ಮೋಸ್ಟ್ ವಾಟೆಂಡ್ ಖಲಿಸ್ತಾನಿ ಉಗ್ರ ಎಂದು ಘೋಷಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಆತನನ್ನು ಹಿಡಿದುಕೊಟ್ಟವರಿಗೆ 10 ಲಕ್ಷ ರೂ ನೀಡುವುದಾಗಿಯೂ ಘೋಷಿಸಿತ್ತು.
ನಿಜ್ಜರ್ 2022ರಲ್ಲಿ ಪಂಜಾಬ್ನ ಜಲಂಧರ್ನಲ್ಲಿ ಹಿಂದೂ ಅರ್ಚಕರನ್ನು ಗುರಿಯಾಗಿಸಿ ಹತ್ಯೆಗೈದ ಪ್ರಕರಣದ ಪ್ರಮುಖ ಆರೋಪಿಯೂ ಆಗಿದ್ದ. ನಿಜ್ಜರ್ ಭಾರತದಲ್ಲಿನ ಇತರ ಹಲವಾರು ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿತ್ತು. ಎನ್ಐಎ ಕೂಡ ಆತನ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸುತ್ತಿತ್ತು. ಆದರೆ ಈಗ ಆತ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ. ಇದುವರೆಗೂ ಯಾರು ಕೊಲೆ ಮಾಡಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಕೆನಡಾ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ವಿದೇಶಿದಲ್ಲಿರುವ ಖಲಿಸ್ತಾನಿ ಉಗ್ರರ ಹತ್ಯೆ ಇದೇ ಮೊದಲಲ್ಲ:
* ಲಂಡನಿನ ಭಾರತೀಯ ಹೈಕಮೀಷನರ್ ಕಚೇರಿಯಲ್ಲಿ ತ್ರಿವರ್ಣ ಇಳಿಸಿ ಖಾಲಿಸ್ತಾನಿ ಧ್ವಜ ಏರಿಸಲೆತ್ನಿಸಿದ ಘಟನೆ ಹಿಂದಿದ್ದ ಅವತಾರ್ ಸಿಂಗ್ ಕಾಂಡಾ 2023 ಜೂನ್15 ರಂದು ಆಸ್ಪತ್ರೆಯಲ್ಲಿ ಮರಣಹೊಂದಿದ್ದಾನೆ.
*ಪಾಕಿಸ್ತಾನದಲ್ಲಿ ಆಶ್ರಯ ಪಡೆದಿದ್ದ ಖಾಲಿಸ್ತಾನಿ ಉಗ್ರ ಪರಮಜೀತ್ ಪಂಜ್ವಾರನನ್ನು 2023 ಮೇ 6 ರಂದು ಅಪರಿಚಿತ ಬಂದೂಕುಧಾರಿಗಳು ಹತ್ಯೆಗೈದಿದ್ದರು.
*ಭಾರತಕ್ಕೆ ಬೇಕಿದ್ದ ಖಾಲಿಸ್ತಾನಿ ಉಗ್ರ ರಿಂಡಾ, ಲಾಹೋರಿನ ಆಸ್ಪತ್ರೆಯಲ್ಲಿ ಔಷಧದ ಡೋಸ್ ಹೆಚ್ಚಾಗಿ ನವೆಂಬರ್ 2022ರಲ್ಲಿ ಸಾವನ್ನಪ್ಪಿದ್ದ