ರಾಹುಲ ಗಾಂಧಿ ಏನು ಸಾಧಿಸಲು ಹೊರಟಿದ್ದಾರೆ? ಈ ಹಿಂದೆ ಉಗ್ರ ಅಫ್ಜಲ್ ಗುರುನನ್ನು ಬೆಂಬಲಿಸಿದ ವಿದ್ಯಾರ್ಥಿಗಳನ್ನು ಹಾಗೂ ಮುಖಂಡರನ್ನು ಅಮಾಯಕರು ಎಂದು ಹೇಳಿದ್ದರು. ಅವರನ್ನು ದೋಷ ಮುಕ್ತರಾಗಿಸ ಹೊರಟಿದ್ದು ಏಕೆ? ಯುದ್ಧ ಮತ್ತು ಪ್ರೇಮದಲ್ಲಿ ಎಲ್ಲವೂ ಸಾಧುವಂತೆ ! ಆದರೆ ತಮ್ಮ ಸ್ವಾರ್ಥಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯಬಲ್ಲರು ಎಂದು ತೊರಿಸುತ್ತಿದ್ದಾರೆ. ಒಂದು ರೀತಿ ಹಿಗೆಲ್ಲ ಮಾಡಿ ತಮ್ಮ ಸೋಲನ್ನು ತಾವೇ ಬರ ಮಾಡಿಕೊಳ್ಳುತ್ತಿದ್ದಾರೆ. ಭಾರತದ ಜನತೆ ಇಂಥವರ ಹೊಲಸು ರಾಜಕಾರಣವನ್ನು ತಿಳಿದುಕೊಂಡೆ ಈ ಹಿಂದೆ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಆದರೂ ಬುದ್ಧಿ ಕಲಿಯದ ರಾಹುಲ ಗಾಂಧಿಯಂಥ ಅಪ್ರಬುದ್ಧರು ನಮ್ಮನ್ನು ಆಳುತ್ತಿಲ್ಲ ಎಂದು ಸಮಾಧಾನವಾಗುತ್ತಿದೆ.
ಯುವ(?) ನಾಯಕ ರಾಹುಲ್ ಗಾಂಧಿ ಇತಿಹಾಸವನ್ನು ಕೆದಕಿ ಮೈಮೇಲೆ ಹಾಕಿಕೊಳ್ಳುವ ಬದಲು, ಭಾರತದ ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನ ಏನೆನ್ನುವುದನ್ನು ಸ್ಪಷ್ಟ ಪಡಿಸಲಿ.
ನಿನ್ನೆ ನ್ಯೂಯಾರ್ಕನಲ್ಲಿ ಮಾತನಾಡುತ್ತ ಗಾಂಧೀಜಿ, ನೆಹರೂ, ಸರ್ದಾರ ಪಟೇಲ, ಬಾಬಾಸಾಹೇಬ ಅಂಬೇಡ್ಕರ್ ಸುಭಾಷ್ ಚಂದ್ರ ಬೊಸ್ ಎಲ್ಲರೂ ಸಹ ವಿದೇಶದಲ್ಲಿ ವಾಸಿಸುವ ಭಾರತೀಯರಾಗಿದ್ದರು ( NRI )ಎಂದಿದ್ದಾರೆ. ಅಷ್ಟೇ ಅಲ್ಲದೆ ಭಾರತದ ಸ್ವಾತಂತ್ರ ಸಂಗ್ರಾಮವು ಇಂತಹ NRI ಗಳಿಂದಲೇ ಪ್ರಾರಂಭವಾಗಿದೆ ಎಂದು ಹೇಳಿಕೆಯನ್ನು ನೀಡಿ ದೇಶದ ಇತಿಹಾಸವನ್ನು ಮರೆಮಾಚಲು ಅಥವಾ ತಿದ್ದಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದಾರೆ.
#WATCH | “The central architect of modern India was an NRI, Mahatma Gandhi was an NRI…The freedom movement of India began in South Africa…Nehru, BR Ambedkar, Sardar Vallabhbhai Patel, Subhas Chandra Bose, all were NRIs and had an open mind to the outside world…”: Congress… pic.twitter.com/NjFT7NQE1X
— ANI (@ANI) June 4, 2023
ರಾಹುಲ ಗಾಂಧಿ ಅವರ ಪ್ರಕಾರ ಗಾಂಧಿ ಹಾಗೂ ನೆಹರು ಬಂದ ನಂತರವೇ ಸ್ವಾತಂತ್ರ ಸಂಗ್ರಾಮ ಪ್ರಾರಂಭವಾಗಿದ್ದರೆ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿ ಪ್ರಾಣತೆತ್ತ ಮಂಗಲ ಪಾಂಡೆ, ಝಾನ್ಸಿ ರಾಣಿ ಲಕ್ಮೀಬಾಯಿ, ತಾತ್ಯಾ ಟೋಪಿ, ಎ ಸೀತಾರಾಮ ರಾಜು ಅಷ್ಟೆ ಏಕೆ ಕನ್ನಡಿಗರಾದ ಸ್ವಾತಂತ್ರ ಸಂಗ್ರಾಮದ ಮೊದಲ ಕಿಡಿ ಹೊತ್ತಿಸಿದ ವೀರ ರಾಣಿ ಕಿತ್ತೂರು ಚೆನ್ನಮ್ಮ ಮತ್ತು ಆಕೆಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ತ್ಯಾಗಗಳು ವ್ಯರ್ಥವೇ? ದೇಶದ ಗೌರವವನ್ನು ವಿದೇಶದಲ್ಲಿ ಹೆಚ್ಚಿಸಬೇಕೆ ಹೊರತು ತಪ್ಪು ಸಂದೇಶಗಳನ್ನು ಜನರಿಗೆ ನೀಡುವುದು ಅಪರಾಧ. ಎರಡು ದಿನಗಳ ಹಿಂದೆ ದೇಶ ವಿಭಜನೆಗೆ ಕಾರಣವಾದ ಮುಸ್ಲಿಂ ಲೀಗ್ ಪಕ್ಷವು ಜಾತ್ಯಾತೀತವಾಗಿದೆ ಎಂಬುದಾಗಿಯು ಮತ್ತು ದೇಶದಲ್ಲಿ ತಮ್ಮ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಾಕಿಸ್ಥಾನಕ್ಕೆ ಬಡ್ಡಿರಹಿತವಾಗಿ ಸಾಲವನ್ನು ನೀಡುತ್ತೆವೆ ಎಂದು ಹೇಳಿದ್ದಾರೆ ಇವೆಲ್ಲವು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿತವಾಗಿರುವ ನಾಯಕನ(?) ಯೋಚನೆಗಳು, ಯೋಜನೆಗಳು ಜನರಿಗೆ ತಿಳಿಯಲಿ. ಹೊಸ ಭಾರತದ ತನ್ನ ಕನಸುಗಳನ್ನು ಹಂಚಿಕೊಳ್ಳಲಿ.