ಸದ್ಯದ ದಿನಗಳಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯವಾಗಿ ಎಲ್ಲರ ಬಾಳಲ್ಲೂ ಇದೆ. ಅಂತಹ ಸವಾಲಿನ ದಿನಗಳಲ್ಲಿ, ದೇಹ ಮತ್ತು ಮನಸ್ಸನ್ನು ಶಾಂತಗೊಳಿಸುವ ಯೋಗಾಸನಗಳು ನಿಮ್ಮನ್ನು ಮರಳಿ ನೆಮ್ಮದಿಯ ಜೀವನಕ್ಕೆ ತರಲು ಸಹಕಾರಿಯಾಗಲಿದೆ.
ಒತ್ತಡ ತಂದುಕೊಳ್ಳುವ ಮನಸ್ಥಿತಿ ಯಾರಿಗೂ ಇರುವುದಿಲ್ಲ ಆದರೆ ಒತ್ತಡ ಎಲ್ಲಿಂದ ಬರುತ್ತದೆ ಎನ್ನುವ ಸುಳಿವಿಲ್ಲದೆ ನಮ್ಮ ಮನಸ್ಸಿಗೆ ಬಂದು ಹಿಂಸಿಸುತ್ತದೆ. ಹಾಗಾಗಿ ಆಂತರಿಕ ಶಾಂತಿಯನ್ನು ಮರಳಿ ಪಡೆಯುವಲ್ಲಿ ಸಹಾಯ ಮಾಡುವ ಸರಳ, ಶಕ್ತಿಯುತ ಆಸನಗಳಿವೆ. ಮನಸ್ಸು, ದೇಹ ಮತ್ತು ಆತ್ಮವನ್ನು ಸಮನ್ವಯಗೊಳಿಸುವ ಪ್ರಾಚೀನ ಅಭ್ಯಾಸವಾದ ಯೋಗವು ಭಾವನಾತ್ಮಕವಾಗಿ ನಮ್ಮ ಯೋಗಕ್ಷೇಮಕ್ಕೆ ಸಹಕಾರಿಯಾಗಲಿದೆ. ಅವು ಯಾವುದೆದಂರೆ,
ಬಾಲಾಸನ:
ಬಾಲಾಸನವು ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ನೆಲದ ಮೇಲೆ ಮಂಡಿಯೂರಿ, ನಿಮ್ಮ ದೇಹವನ್ನು ಮುಂದಕ್ಕೆ ಮಡಚಿ, ಮತ್ತು ಹಣೆಯನ್ನು ನೆಲಕ್ಕೆ ನಿಧಾನವಾಗಿ ತಾಗಿಸಿ, ದೇಹ ವಿಶ್ರಾಂತಿ ಪಡೆಯಲು ಬಿಡಬೇಕು. ನೀವು ಭೂಮಿಗೆ ಶರಣಾಗುವಾಗ ನಿಮ್ಮ ಬೆನ್ನಿನ ಕೆಳಭಾಗದಲ್ಲಿ ಮೃದುವಾದ ಹಿಗ್ಗುವಿಕೆಯ ಅನುಭವವಾಗುತ್ತದೆ. ಉದ್ವೇಗ ಮತ್ತು ಒತ್ತಡವನ್ನು ಹೊರಹಾಕಿ, ಆಳವಾಗಿ ಉಸಿರಾಡಬೇಕು. ಶಾಂತ ಮನಸಿಂದ ಚಿಂತೆಗಳನ್ನು ಹೊರಹಾಕಿ. ಈ ಭಂಗಿಯಲ್ಲಿ ನಿಮ್ಮ ಸಮಸ್ಯೆಗಳಿಗೆ ಒಂದು ರೀತಿಯ ಸಾಂತ್ವನ ಅನುಭವಿಸುತ್ತೀರಾ.
ವಿಪರಿತಾ ಕರಣಿ:
ಮನಸ್ಸು ಮತ್ತು ದೇಹಕ್ಕೆ ತಕ್ಷಣದ ಶಾಂತತೆಯನ್ನು ತರುವ ಭಂಗಿಯಾದ ವಿಪರಿತಾ ಕರಣಿಯಿಂದ ದಿನದ ಒತ್ತಡದಿಂದ ಹೊರ ಬರಬಹುದಾಗಿದೆ. ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ಕಾಲುಗಳನ್ನು ಗೋಡೆ ಅಥವಾ ಗಟ್ಟಿ ಮುಟ್ಟಾದ ಹಲಗೆ ಅಥವಾ ಇನ್ನಿತರ ವಸ್ತುಗಳಿಗೆ ತಾಡಿಕೊಳ್ಳಿ. ರಕ್ತದ ಹಿತವಾದ ಸಂವೇದನೆ ನಿಮ್ಮ ಹೃದಯದ ಕಡೆಗೆ ಹರಿಯಲು ಅವಕಾಶ ನೀಡಿ ಮತ್ತು ನಿಮ್ಮ ಇಡೀ ದೇಹವನ್ನು ವಿಶ್ರಾಂತಿಗೊಳಿಸಲು ಅವಕಾಶ ಮಾಡಿಕೊಂಡು ಆ ಬಳಿಕ ನೀವು ನಿಮ್ಮ ಕಣ್ಣುಗಳನ್ನು ಮುಚ್ಚಬೇಕು. ಆಗ ಮನಸ್ಸು ಶಾಂತಿಯಿಂದ ಕೂಡಿರುತ್ತದೆ
ಅಂಜಲಿ ಮುದ್ರೆ:
ಅಂಜಲಿ ಮುದ್ರೆ, ಪ್ರಾರ್ಥನೆಯ ಸನ್ನೆ, ನಮ್ಮನ್ನು ನಮ್ಮ ಆಂತರಿಕ ಆತ್ಮ ಮತ್ತು ಬ್ರಹ್ಮಾಂಡದೊಂದಿಗೆ ಸಂಪರ್ಕಿಸುತ್ತದೆ. ಆರಾಮದಾಯಕವಾಗಿ ಅಡ್ಡ ಕಾಲಿನ ಭಂಗಿಯಲ್ಲಿ ಕುಳಿತುಕೊಳ್ಳಿ, ಅಂದರೆ ಒಂದು ಕಾಲಿನ ಮೇಲೆ ಇನ್ನೊಂದು ಕಾಲು ಹಾಕಿ ಕುಳಿತುಕೊಳ್ಳಿ. ಬಳಿಕ ಹೃದಯದ ಕೇಂದ್ರ ಭಾಗದಲ್ಲಿ ನಿಮ್ಮ ಅಂಗೈಗಳನ್ನು ಒಟ್ಟಿಗೆ ಸೇರಿಸಿ. ನಿಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಿ ಮತ್ತು ಯಾವುದೇ ನಕಾರಾತ್ಮಕ ಭಾವನೆಗಳು ನಿಮ್ಮ ಮುಂದೆ ಬಾರದ ಹಾಗೆ ನೋಡಿಕೊಳ್ಳಬೇಕು ಮತ್ತು ಆಳವಾಗಿ ಉಸಿರಾಡುವಾಗ, ಕೃತಜ್ಞತಾ ಭಾವ ಹೃದಯವನ್ನು ತುಂಬಲು ಅವಕಾಶ ನೀಡಿ, ಶಾಂತ ಮತ್ತು ಸಮತೋಲನದ ಪ್ರಜ್ಞೆಯನ್ನು ತಂದುಕೊಳ್ಳಬೇಕು.
ಶವಾಸನ:
ವಿಶ್ರಾಂತಿ ಭಂಗಿಯಾದ ಶವಾಸನವು ನಿಮ್ಮನ್ನು ಸಂಪೂರ್ಣವಾಗಿ ಎಲ್ಲ ಚಿಂತೆಗಳಿಂದ ಶರಣಾಗಲು ಮತ್ತು ದಿನದ ಒತ್ತಡ, ಆತಂಕ ಎಲ್ಲವನ್ನೂ ಮರೆಸಾಲು ಸಹಾಯ ಮಾಡುತ್ತದೆ. ನೇರವಾಗಿ ಮಲಗಿ, ತೋಳುಗಳನ್ನು ಮಡಚದೆ ನೇರವಾಗಿ ಇಟ್ಟುಕೊಳ್ಳಿ. ಅಂಗೈಯನ್ನು ಮೇಲಕ್ಕೆ ಮುಖ ಮಾಡಿ, ನಿಮ್ಮ ಕಣ್ಣುಗಳನ್ನು ಮುಚ್ಚಿ ದೇಹದಲ್ಲಿರುವ ಯಾವುದೇ ರೀತಿಯ ಉದ್ವೇಗವನ್ನು ಹೊರಹಾಕಿ. ಆಳವಾಗಿ ವಿಶ್ರಾಂತ ಸ್ಥಿತಿಯನ್ನು ಪ್ರವೇಶಿಸುತ್ತಿದ್ದಂತೆ, ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸಿ, ಯಾವುದೇ ನಕಾರಾತ್ಮಕ ಯೋಚನೆ ಇದ್ದರೂ ಹೊರಹಾಕಿ. ಈ ಆನಂದಮಯ ನಿಶ್ಚಲತೆಯಲ್ಲಿ, ಶಾಂತಿಯನ್ನು ಕಂಡುಕೊಳ್ಳಿ ಮತ್ತು ನಿಮ್ಮ ಆಂತರಿಕ ಸಮತೋಲನವನ್ನು ಕಾಪಾಡಿಕೊಳ್ಳಬಹುದು ಆಗಿದೆ.