ಮನುಷ್ಯನ ಜೀವನದಲ್ಲಿ ಹಲವಾರು ಘಟ್ಟಗಳು ಬರುತ್ತದೆ. ಅದೇ ರೀತಿ ಮರದಲ್ಲೂ ಈ ತರಹದ ಘಟ್ಟಗಳು ಕಂಡು ಬರುತ್ತದೆ. ಮರದ ಜೀವನ ವಾಟೆ ,ಸಸಿ, ಗಿಡ ಮತ್ತು ಮರವೆಂಬ ಜೀವನ ಚಕ್ರವನ್ನು ಅನುಭವಿಸುತ್ತದೆಯೋ ಹಾಗೆ ಮನುಷ್ಯನ ಜೀವನ ಕ್ರಮವಾಗಿ ಬಾಲ್ಯದಿಂದ ಹಿಡಿದು ಮುಪ್ಪಿನವರೆಗೆ ಸಾಗುತ್ತದೆ. ಆದ್ದರಿಂದ ಇಲ್ಲಿ ಲೇಖಕರ ಜೀವನದ ಕ್ರಮವನ್ನು ಮರಕ್ಕೆ ಹೋಲಿಸಿ ತಮ್ಮ ಅತ್ಮಚರಿತ್ರೆಯನ್ನು ಬರೆದಿದ್ದಾರೆ, ಇಲ್ಲಿ ನಾವು ಗಮನಿಸ ಬೇಕಾದ ಒಂದು ಮುಖ್ಯ ಅಂಶವೆಂದರೆ ಮುನುಷ್ಯನ ಜೀವನದಲ್ಲಿ ಹಲವಾರು ಹುಳಿಸಂಗತಿಗಳು ಕಂಡುಬರುತ್ತದೆ. ಆದ್ದರಿಂದ ಲೇಖಕರು ಇದಕ್ಕೆ ಹುಳಿಮಾವಿನ ಮರ ಎಂದು ಹೆಸರಿಸಿದ್ದಾರೆ, ಇಲ್ಲಿ ಕೊನೆಯ ಮೂರು ವರ್ಷದ ಅವಧಿಯಲ್ಲಿ ಅವರ ಕಾಯಿಲೆ ಒತ್ತಡ ಆತಂಕದ ದಿನಗಳಲ್ಲಿ ಬಿಡುವು ದೊರೆತ ಸಮಯದಲ್ಲಿ ನೆನಪಿಸಿಕೊಂಡು ತಮ್ಮ ಬದುಕಿನ ಕ್ಷಣಗಳನ್ನು, ಈ ಪುಸ್ತಕದಲ್ಲಿ ಸರಳವಾಗಿ ಬಿಚ್ಚಿಟ್ಟಿದ್ದಾರೆ.
ಜೀವನದ ವಿವಿಧ ಘಟ್ಟಗಳಲ್ಲಿ ಮೊದಲು ವಾಟೆ ಅಂದರೆ ಬೀಜ ಎಂಬ ಅರ್ಥದಿಂದ ಕಾಣಬಹುದು . ಇದರಲ್ಲಿ ಲೇಖಕರು ತಮ್ಮ ಜೀವನದ ಕೆಲವೊಂದು ಅಂಶಗಳನ್ನು ತೋರುತ್ತಾರೆ ವಾಟೆ’ ಎಂದರೆ ತಾಯಿಯ ಗರ್ಭದಲ್ಲಿ, ಮಗುವೆಂಬ ಬೀಜ ಬೆಳೆಯುವುದು. ಹುಳಿಮಾವಿನ ಮರ ಇದು ಪಿ. ಲಂಕೇಶ ಜೀವಿತದ ಎಲ್ಲ ಆರೋಗ್ಯ ಅನಾರೋಗ್ಯ ಸುಖ ದುಃಖ ಎಂಬ ಭಾವನೆಗಳು ಕಂಡುಬರುತ್ತದೆ. ಇಲ್ಲಿ ನಾವು ಬಡವರ ಮನೆಯಲ್ಲಿ ಹುಟ್ಟಿದ್ದವೋ, ಶ್ರೀಮಂತರ ಮನೆಯಲ್ಲಿ ಹುಟ್ಟಿದ್ದವೋ,ವಿಶಿಷ್ಟ ಜಾಗದಲ್ಲಿ ಜನ್ಮತಾಳಿದ್ದೆವೋ ಎಂಬ ಹೆಮ್ಮೆಯನ್ನು ನಮಗೆ ತಿಳಿಸುತ್ತದೆ. ಈ ವಾಟೆ ಪ್ರಾಚಿನ ಕಾಲದಲ್ಲಿ ನಮ್ಮ ದೇಶದ ಸ್ಥಿತಿ ಯಾವ ರೀತಿಯಲ್ಲಿತ್ತು ಎಂಬುದನ್ನು ನೋಡಬೇಕಾದರೆ ರಕ್ತವನ್ನು ಕಲೆಹಾಕಿ ಅದರಲ್ಲಿ ಕುಂಕುಮ, ಧಾನ್ಯ, ಮುಂತಾದವನ್ನು ಬೇರೆಸಿ ಊರ ಗುಡಿಯಲ್ಲಿ ಚರಗವಾಗಿ ಚೆಲ್ಲಲು ತೆಗೆದುಕೊಂಡು ಹೋಗುತ್ತಿದ್ದರು ಇದನ್ನು ತಿಳಿಸುವುದು ವಾಟೆ.
ವಾಟಿಯು ಒಡೆದು ಅದು ಒಂದು ಸಸಿಯ ರೂಪದಲ್ಲಿ ಪರಿವರ್ತನೆಯಾಗುತ್ತದೆ.ಈ ಸಸಿಯನ್ನು ನಾವು ಒಳ್ಳೆಯ ರೀತಿಯಲ್ಲಿ ನೀರು ರಸ ಗೊಬ್ಬರವನ್ನು ಹಾಕಿ ಮರವನ್ನು ಬೆಳೆಸುವಂತೆ ಅನೇಕ ಸಂಗತಿಗಳನ್ನು ಸರಿಯಾದ ರೀತಿಯಲ್ಲಿ ಒಂದು ಮಗುವಿಗೆ ತಿಳಿಸುವಂತೆ ಸಸಿಯು ಪ್ರಾಯಕ್ಕೆ ಬಂದಾಗ, ಅದಕ್ಕೆ ಕುಟುಂಬ , ಸಾಮಾಜಿಕತೆ ನೈತಿಕತೆ, ವ್ಯವಹಾರ, ಸಂಪ್ರದಾಯ ಮತ್ತು ನೆರೆಹೊರೆಯ ಸಂಬಂಧಗಳ ಬಗ್ಗೆ ತಿಳಿಸಬೇಕಾಗುತ್ತದೆ. ಈ ಆದರ್ಶಕ್ಕೆ ಪೂರ್ವಜರು ನೀಡಿದ ಬಲವಾದ ಮೌಲ್ಯಗಳು ಕಂಡುಬರುತ್ತವೆ. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೆ ? ಎಂಬುದು ಇಲ್ಲಿ ನಿರೂಪಣೆಯಾಗುತ್ತದೆ
ಮನುಷ್ಯನಲ್ಲಿ ಕ್ರಮೇಣ ಒಂದರಿಂದ ಮತ್ತೊಂದು ಪರಿವರ್ತನೆಗಳು ಕಂಡುಬರುತ್ತದೆ. ಸಸಿ ಜೀವಿತದಿಂದ ಗಿಡದ ಜೀವಿತಕ್ಕೆ ಪರಿವರ್ತನೆ ಉಂಟಾಗುತ್ತದೆ.ಈ ಜೀವಿತದಲ್ಲಿ ವ್ಯಕ್ತಿಯು ತನ್ನ ವಿಧ್ಯಾಭ್ಯಾಸ ವಿವಾಹ, ಕುಟುಂಬ, ಮುಂತಾದವುಗಳನ್ನೂ ಹೊತ್ತುಕೊಂಡು ನಡೆಯುತ್ತಾನೆ.ಈ ಹುಳಿಮಾವಿನ ಮರ ಎಂಬ ಆತ್ಮಕಥನದಲ್ಲಿ ಪಿ. ಲಂಕೇಶರವರು ಕನಸು, ಭ್ರಮೆ ,ಕಾಮ ಆಕರ್ಷಣೆಯೊಂದಿಗೆ ನಡೆಯುತ್ತಾರೆ ಇಲ್ಲಿದ್ದ ತಮ್ಮ ಕುಟುಂಬದ ಸಂಸಾರಿಕ ಭಾವನೆಗಳನ್ನು ಮತ್ತು ಮಕ್ಕಳ ಪ್ರೀತಿಯನ್ನು ಸಾರುತ್ತದೆ .ಕೆಲವೊಂದು ಅಕರ್ಷಕ ಕೃತಿಗಳನ್ನು ರಚಿಸಿ ತಮ್ಮ ಪ್ರತಿಭೆಯ ಪ್ರೀತಿಯನ್ನು ಸಾರಿದ್ದಾರೆ. ಇವರು ಕೆರೆಯ ನೀರನ್ನು ಕೆರೆಗೆ ಚೆಲ್ಲಿ, ವಾಮನ ಎಂಬ ಕೃತಿಗಳಿಂದ ಸಮಾಜದಲ್ಲಿ ತಮಗೆ ಕಂಡುಬರುವ ವೈಷಮ್ಯಗಳು, ಪ್ರೀತಿ ವಾತ್ಸಲ್ಯ ಕರುಣೆ ಎಂಬ ಭಾವನೆಗಳನ್ನು ತಿಳಿಸಿದ್ದಾರೆ. ಈ ಕೃತಿಗಳ ಮೂಲಕ ಸಮಾಜಕ್ಕೆ ತಮ್ಮ ಆದರ್ಶವನ್ನು ತಿಳಿಸಿದ್ದಾರೆ.
ಸಸಿ ಎಂಬ ಪಟ್ಟದಿಂದ ಹೊರಬಂದ ಪಿ.ಲಂಕೇಶ ತಕ್ಷಣ ಮರವೆಂಬ ಮೆಟ್ಟಿಲನ್ನು ಏರಿದರು. ಅವರು ತಮ್ಮ ಎಲ್ಲ ಆದರ್ಶಗಳನ್ನು ಮತ್ತು ಸಮಾಜಕ್ಕೆ ತಾವು ನೀಡಬೇಕಾದ – ಕೊಡುಗೆಗಳನ್ನು ನೀಡಿದ್ದಾರೆ.ಇವರು ಕಳೆದ ಕೆಟ್ಟ ದಿನಗಳನ್ನು ಕುರಿತು, ಪಾಂಚಾಲಿಯ ದಿನಗಳು ಎಂದು ಕರೆಯುತ್ತಿದ್ದರು. ಇದರಿಂದ ಹೊರಬರಲು ಪಾಪದ ಹೂಗಳು ಎಂಬ ಪುಸ್ತಕವನ್ನು ಸಿದ್ಧಪಡಿಸಿದರು, ನಿಜಕ್ಕೂ ಹೇಳಬೇಕಂದರೆ ಪಿ.ಲಂಕೇಶ ಹೆಂಡತಿ ಇಂದಿರಾ ಕಟ್ಟಿಕೊಂಡ ವ್ಯಕ್ತಿತ್ವ ಅವರನ್ನು ಅನೇಕ ರೀತಿಯಲ್ಲಿ ಮೀರಿಸುವಂತದ್ದು, ಅನೇಕ ವರ್ಷಗಳ ನಂತರ ಅವಳ ವ್ಯಕ್ತಿತ್ವದ ಬಗ್ಗೆ ನನ್ನಲ್ಲಿ ಒಂದು ರೀತಿಯ ಒಳ್ಳೆಯ ಔಪಚಾರಿಕ ಪ್ರಭಾವ ಬೀರಿದೆ ವೈಯಕ್ತಿಕ ಗುಣ ನೋಡುದಾದರೆ ಈಕೆ ನನಗಿಂತ ಧೈರ್ಯಸ್ಥೆ ಒಮ್ಮೆ ಅವಳನ್ನು ಹೆದರಿಸಬೇಕೆಂದು ಅಂಗಡಿಯ ಮುಂದೆ ಬಿಡಿಸಿದ ವೀಳ್ಯದೆಲೆ, ಕುಂಕುಮ ಅಕ್ಷತೆಯನ್ನು ಅಂಗಡಿಯ ಮುಂದೆ ಇಟ್ಟು ಹೋಗಿದ್ದರು ಅದು ಅವರು ಮಾರಿಯನ್ನು ನಮ್ಮ ಮೇಲೆ ಬಿಡುವ ರೀತಿ . ಆದರೆ ಇಂದಿರಾ ಅದನ್ನೆಲ್ಲಾ ಕಾಲಿನಿಂದ ಒದ್ದು ಬೀಗ ತೆಗೆದು ಒಳಗೆ ಹೋದಳು. ಈ ರೀತಿಯಾದ ಅವಳ ಧೈರ್ಯ ನಮಗೆ ಒಂದು ಪ್ರೇರಣೆ ನೀಡುತ್ತದೆ.ಈ ರೀತಿಯಾದ ಮರವಾಗಿ ಬೆಳೆದ ಲಂಕೇಶ ತಮ್ಮ ಜೀವನದ ಎಲ್ಲ ಘಟ್ಟಗಳನ್ನು ಹುಳಿಮಾವಿನ ಮರಕ್ಕೆ ಹೋಲಿಸಿದ್ದಾರೆ.
ಪಿ.ಲಂಕೇಶರವರ ಈ ಹುಳಿಮಾವಿನ’ ಎಂಬ ಕೃತಿಯು ತುಂಬಾ ವಿಶಿಷ್ಟವಾದ ಲೇಖನವಾಗಿದೆ.ಇಲ್ಲಿ ಮನುಷ್ಯ ಜೀವನದಲ್ಲಿ ಆದ ಹಲವಾರು ಘಟ್ಟಗಳ ವಿವರಣೆಯನ್ನು ಒಂದು ಮರದ ಜೀವನಕ್ಕೆ ಹೊಲಿಸಿ ಬರೆದಿದ್ದಾರೆ. ಇಲ್ಲಿ ಒಂದು ನಿಸರ್ಗದತ್ತವಾದ ಮರಕ್ಕೆ ತಮ್ಮ ಜೀವನವನ್ನೇ ಹೋಲಿಸಿ ಬರೆದ ಲೇಖಕರು ಇವರೇ ಮೊದಲು ಎನ್ನಬಹುದಾಗಿದೆ.
ಕೊನೆಯದಾಗಿ ಹೇಳುದಾದರೆ ಈ ಕೃತಿ ಒಂದು ಪ್ರಮುಖವಾದ ಕೃತಿ ಇದು ಆತ್ಮಚರಿತ್ರೆಯಂತೆ ಕಂಡರೂ ಅದು ಒಂದು ವೈಚಾರಿಕ ಲೇಖನದಂತೆ ಕಂಡುಬರುತ್ತವೆ. ಇಲ್ಲಿ ವೈಚಾರಿಕ ಸಮೂಹವೇ ಒಟ್ಟಾಗಿರುವಂತೆ ಕಾಣುತ್ತದೆ. ಒಟ್ಟಾರೆ ಪಿ. ಲಂಕೇಶ ರವರ ಅಪೂರ್ವವಾದ ಲೇಖನಗಳಲ್ಲಿ ಇದು ಒಂದಾಗಿದೆ. ಎಂದು ಹೇಳಬಹುದು.