ಕರ್ನಾಟಕ ವಿಧಾನ ಸಭೆ ಚುನಾವಣೆಯ ಫಲಿತಾಂಶ ಇಂದು ಎಲ್ಲರ ಮುಂದೆ ಇದೆ. ಬಿಜೆಪಿಯು 65 ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಸ್ವತಃ ಮಾಜಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಯಿ, ಮಾಜಿ ಶಾಸಕ ಬಿ. ಹರ್ಷವರ್ಧನ ಸೋಲಿನ ಜವಬ್ದಾರಿಯನ್ನು ಒಬ್ಬೊಬ್ಬರಾಗಿ ತಾವೇ ಹೊರುವುದಾಗಿ ಒಪ್ಪಿಕೊಂಡರು.
ಈಗ ಬಿಜೆಪಿ ಪಾಲ್ಯದಲ್ಲಿ ಸೋಲಿಗೆ ಕಾರಣವೇನು ಎಂಬುದರ ಬಗ್ಗೆಗ್ಗಿನ ಚರ್ಚೆಗಳು ಶುರುವಾಗಿದೆ. ಒಂದೆಡೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಕಾರಣ ಎಂದು ಹೇಳಲಾಗುತ್ತಿದೆ.ಅನುಭವಿ ನಾಯಕರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಿದೆ ಲೆಕ್ಕಾಚಾರ ಉಲ್ಟಾ ಹೊಡಿತ್ತು ಎನ್ನಾಲಾಗುತ್ತಿದೆ.
ಮಾಜಿ ಡಿಸಿಎಂ ಈಶ್ವರಪ್ಪ, ಮಾಜಿ ಸಿಎಂ ಜಗದೀಶ್ ಶೇಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷö್ಮಣ ಸವದಿಯಂತಹ ಘಟನುಭವಿಗಳನ್ನು ಟೀಕೇಟ್ ನೀಡದೆ ಕಡೆಗಣಿಸಿದ್ದು ಕಾರ್ಯಕರ್ತರಲ್ಲಿ, ಅಭಿಮಾನಿ ಬಳಗ ಹಾಗೂ ಇವರ ಸಮುದಾಯದ ಜನರಲ್ಲಿ ಅಸಮಾಧನದಕ್ಕೆ ದಾರಿ ಮಾಡಿಕೊಟ್ಟಿತ್ತು.
ಕರಾವಳಿಯಲ್ಲಿ ಕಾರ್ಯಕರ್ತರು ನಳೀನ್ ಕುಮಾರ್ ಕಟೀಲು ಮತ್ತು ಡಿವಿ ಸದಾನಂದ ಗೌಡರನ್ನು ನೇರವಾಗಿ ಗುರಿಯಾಗಿಸಿಕೊಂಡು ಪುತ್ತೂರಿನ ಬಸ್ ನಿಲ್ದಾಣದ ಬಳಿ ಬ್ಯಾನರ್ ಒಂದನ್ನು ಹಾಕಲಾಗಿದೆ. ಬ್ಯಾನರ್ ನಲ್ಲಿ ಬಿಜೆಪಿ ಸೋಲಿಗೆ ಕಾರಣರಾದ ನಳಿಣ್ ಕುಮಾರ್ ಕಟೀಲು ಮತ್ತು ಡಿವಿ ಸದಾನಂದ ಗೌಡರಿಗೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದ ಬ್ಯಾನರ್ಗೆ ಚಪ್ಪಲಿ ಹಾರವನ್ನು ಹಾಕಲಾಗಿದೆ.
ಇಷ್ಟಕ್ಕೆ ಸಮಾಧಾನಗೊಳ್ಳದ ಕೆಲವು ಕಾರ್ಯಕರ್ತರು ಹಾಗೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ನಳೀನ್ ಕುಮಾರ್ ಕಟೀಲುರ ಭಾಷಣದ ತುಣುಕುಗಳ ವಿಡಿಯೋವನ್ನು ಹಿನ್ನಲೆ ಸಂಗೀತದೊAದಿಗೆ ಹರಿಯಬಿಟ್ಟಿದ್ದಾರೆ.
ಸಾಕಷ್ಟು ಸಂದರ್ಭಗಳಲ್ಲಿ ನಳೀನ್ ಕುಮಾರ್ ಕಟೀಲು ಅತೀರೇಕದ ಮಾತುಗಳನ್ನು ಆಡಿರುವ ಮಾತುಗಳನ್ನು ನೆಟ್ಟಿಗರು ಅಪಹಾಸ್ಯಮಾಡಿ, ಟ್ರೋಲ್ ಮಾಡಿರುವ ವಿಡಿಯೊ ತುಣುಕುಗಳು ಹರಿದಾಡುತ್ತಿದೆ.