ಬೆಂಗಳೂರು: ಗೋವನ್ನು ಸಾರ್ವಜನಿಕವಾಗಿ ಕೊಂದವರೊಂದಿಗೆ ಕಾಂಗ್ರೆಸ್ ಸ್ನೇಹ ಹೊಂದಿದೆ ಎಂದು ದೂರುವ ಮೂಲಕ ಬಿಜೆಪಿಯು ಗುರುವಾರ ಕರ್ನಾಟಕದಲ್ಲಿ ಹಿಂದುತ್ವದ ದಾಳ ಉದುರಿಸಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗಾರರೊಂದಿಗೆ ಮಾತನಾಡಿ, ವಯನಾಡ್ ಮಾಜಿ ಸಂಸದ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೋವನ್ನು ರಸ್ತೆಯಲ್ಲಿ ಕೊಂದ ವ್ಯಕ್ತಿಗಳೊಂದಿಗೆ ಭಾರತ್ ಜೋಡೋ ಯಾತ್ರೆಯನ್ನು ಮಾಡಿದ್ದಾರೆ ಎಂದು ದೂರಿದರು.
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಆರೋಪಿಯನ್ನು ತಮ್ಮ ಸಹೋದರನಂತಿದ್ದಾನೆ, ಎಂದು ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೇಳಿದ್ದಾರೆ ಹಾಗಾದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಯಾರ ಪರ ಎಂದು ಎಂದು ಪ್ರಶ್ನಿಸಿದ್ದಾರೆ.
ಐಎಸ್ಐಎಸ್ ಸ್ಫೋಟದ ಹೊಣೆಯನ್ನು ಹೊತ್ತುಕೊಂಡಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಕೂಡ ಹಾಕಿದೆ ಆದರೆ ಕಾಂಗ್ರೆಸ್ ಆರೋಪಿಗಳನ್ನು ರಕ್ಷಿಸುತ್ತಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಮಾಡುವ ಆರೋಪಿಗಳನ್ನು ಸಿದ್ದರಾಮಯ್ಯ ಮತ್ತು ಡಿಕೆಶಿ ರಕ್ಷಿಸುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಕರಂದ್ಲಾಜೆಯವರು ಇಂತಹ ವಿಷಯಗಳನ್ನು ಪ್ರಸ್ತಾಪಿಸುವುದರಿಂದ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ಇತರ ಫೈರ್ಬ್ರಾಂಡ್ ನಾಯಕರಿಂದ ಹೈ-ವೋಲ್ಟೇಜ್ ಪ್ರಚಾರಗಳು ಕರ್ನಾಟಕದಲ್ಲಿ ನಡೆಯಲಿದೆ ಎಂಬ ಸೂಚನೆಯನ್ನು ನೀಡಿದ್ದಾರೆ.
ಕರ್ನಾಟಕದಲ್ಲಿ 2021 ರಲ್ಲಿ ಜಾನುವಾರುಗಳ ಸಾಗಣೆ, ಮಾರಾಟ, ವ್ಯಾಪಾರ ಮತ್ತು ಹತ್ಯೆಯನ್ನು ನಿಷೇಧಿಸುವ ಗೋಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲಾಗಿತ್ತು.