ಹೊಸದಿಲ್ಲಿ: ಆರನೇ ವರ್ಷ ಪೂರೈಸುತ್ತಿರುವ ಭಾರತದ ಅತ್ಯಂತ ಪ್ರತಿಷ್ಠಿತ ಮತ್ತು ಶ್ರೀಮಂತ ಸಾಹಿತ್ಯ ಪ್ರಶಸ್ತಿಗಳಲ್ಲಿ ಒಂದಾದ 25 ಲಕ್ಷ ರೂಪಾಯಿ ಮೌಲ್ಯದ ಜೆಸಿಬಿ ಪ್ರಶಸ್ತಿಯ ಈ ಸಾಲಿನ ಮುಖ್ಯ ತೀರ್ಪುಗಾರರಾಗಿ ಲೇಖಕ ಮತ್ತು ಅನುವಾದಕ ಶ್ರೀನಾಥ್ ಪೆರೂರು ಅವರು ಆಯ್ಕೆಯಾಗಿದ್ದಾರೆ.
ನಾಟಕಕಾರ ಮತ್ತು ರಂಗ ನಿರ್ದೇಶಕ ಮಹೇಶ್ ದತ್ತಾನಿ, ಲೇಖಕ, ವಿರ್ಮಶಕ ಮತ್ತು ಕಲಿಕಾ ವಿನ್ಯಾಸಕ ಸೋಮಕ್ ಘೋಷಾಲ್,ಲೇಖಕ ಮತ್ತು ಶಸ್ತ್ರಚಿಕಿತ್ಸಕ ಕಾವೇರಿ ನಂಬಿದಾಸ್, ಪತ್ರಕರ್ತೆ ಹಾಗೂ ಚಿತ್ರ ನಿರ್ದೇಶಕಿ ಸ್ವಾತಿ ತ್ಯಾಗರಾಜನ್ ಇದರ ಇತರೆ ಸದಸ್ಯರು.
ತೀರ್ಪುಗಾರರು ಸೆಪ್ಟೆಂಬರ್ ತಿಂಗಳಿನಲ್ಲಿ 10 ಕೃತಿಗಳ ಸುದೀರ್ಘ ಹಾಗೂ ಅಕ್ಟೋಬರ್ನಲ್ಲಿ ಐದು ಕೃತಿಗಳ ಕಿರು ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ನಂವೆಬರ್ 2023ರಲ್ಲಿ ವಿಜೇತರ ಹೆಸರನ್ನು ಘೋಷಿಸಲಾಗುತ್ತದೆ.
ವಿಜೇತ ಕೃತಿಯು ಅನುವಾದಿತ ಕೃತಿಯಾಗಿದ್ದರೆ ಅನುವಾದಕರಿಗೆ ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ದೊರೆಯಲಿದೆ. ಅಂತಿಮ ಹಂತಕ್ಕೆ ಆಯ್ಕೆಯಾದ ಐದು ಕೃತಿಗಳ ಲೇಖಕರಿಗೆ ತಲಾ 1 ಲಕ್ಷ ರೂಪಾಯಿ ಹಾಗೂ ಅನುವಾದಿತ ಕೃತಿಯಾಗಿದ್ದರೆ ಅನುವಾದಕನಿಗೆ 50ಸಾವಿರ ರೂಪಾಯಿ ದೊರೆಯಲಿದೆ.
ವಿವಿಧ ಹಿನ್ನೆಲೆ, ಭಾಷೆ ಮತ್ತು ಅಭಿವ್ಯಕ್ತಿ ಮಾಧ್ಯಮಗಳನ್ನು ಹೊಂದಿರುವ ತೀರ್ಪುಗಾರರ ಮಂಡಳಿಯು ದೇಶದ ಪ್ರಸಕ್ತ ವರ್ಷದ ಅತ್ಯುತ್ತಮ ಕೃತಿಯನ್ನು ಆರಿಸುವಲ್ಲಿ ವಿವಿಧ ದೃಷ್ಟಿಕೋನಗಳನ್ನು ಅಳವಡಿಸಿಕೊಳ್ಳುತ್ತದೆ.
ಜೆಸಿಬಿ ಸಾಹಿತ್ಯ ಪ್ರಶಸ್ತಿಗೆ ಭಾರತದ ಪ್ರಖ್ಯಾತ ನೆಲ ಅಗೆಯುವ ಮತ್ತು ನಿರ್ಮಾಣ ಪರಿಕರಗಳನ್ನು ತಯಾರಿಸುವ ಜೆಸಿಬಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯು ಧನಸಹಾಯ ನೀಡುತ್ತಿದ್ದು, ಜೆಸಿಬಿ ಸಾಹಿತ್ಯ ಪ್ರತಿಷ್ಠಾನವು ಇದನ್ನು ನೀಡುತ್ತಿದೆ.
ಈ ವರ್ಷದ ತೀರ್ಪುಗಾರ ಮಂಡಳಿಯ ಕುರಿತು ಪ್ರತಿಕ್ರಿಯಿಸಿದ ಜೆಸಿಬಿ ಸಾಹಿತ್ಯ ಪ್ರಶಸ್ತಿಯ ನಿರ್ದೇಶಕಿ ಕಳೆದ ವರ್ಷ ನಮ್ಮ ಪಾಲಿಗೆ ನಿಜವಾಗಿಯು ಒಂದು ಮೈಲಿಗಲ್ಲಾಗಿತ್ತು. ಮೊಟ್ಟ ಮೊದಲ ಬಾರಿಗೆ ತೀರ್ಪುಗಾರರು ಅನುವಾದಿತ ಕೃತಿಗಳನ್ನೇ ಅಂತಿಮಗೊಳಿಸಿದ್ದರು. ಭಾರತವು ಅನೇಕ ಭಾಷೆಗಳಲ್ಲಿ ಮಾತನಾಡುತ್ತದೆ ಮತ್ತು ಬರೆಯುತ್ತದೆ, ಹಾಗೂ ಜೆಸಿಬಿ ಪ್ರಶಸ್ತಿಗೆ ಸಲ್ಲಿಕೆಯಾದ ಕೃತಿಗಳು ನಮ್ಮೊಳಗಿರುವ ಅನೇಕ ಭಾರತಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
2022ರ ಜೆಸಿಬಿ ಸಾಹಿತ್ಯ ಪ್ರಶಸ್ತಿಯನ್ನು ಜುಗ್ಗರ್ನಾಟ್ ಪ್ರಕಾಶಿಸಿದ ಬರಾನ್ ಫಾರೂಕಿ ಅನುವಾದಿಸಿದ ಖಾಲೀದ್ ಜಾವೇದ್ ಅವರ ಉರ್ದು ಕೃತಿ ’ದ ಪಾರಡೈಸ್ ಆಫ್ ಫುಡ್” ಗೆ ದೊರಕಿತ್ತು. ಈ ಕೃತಿಯು ಸಮಕಾಲೀನ ದೇಹ, ಮನೆ ಮತ್ತು ದೇಶದ ಕ್ರೂರ ಹಾಗೂ ಆಸಕ್ತಿದಾಯಕ ಕತೆಯನ್ನು ಆಹಾರ ಮತ್ತು ಅಡುಗೆಕೋಣೆಯ ಮೂಲಕ ಹೇಳುತ್ತದೆ. ಪ್ರಪಂಚವು ಕೊಳ್ಳಬಾಕ ಸಂಸ್ಕ್ರತಿಯಲ್ಲಿ ಮುಳುಗಿರುವ ಕಾಲಘಟ್ಟದಲ್ಲಿ ಈ ಕೃತಿಯು ಪ್ರತಿರೋಧವನ್ನು ತೋರಿಸುತ್ತದೆ