ಹೈದರಾಬಾದ್: ನಗರನಲ್ಲಿ ಸಂಭವಿಸಿದ ಭೀಕರ, ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನವಾಗಿದ್ದಾರೆ.
ನಗರದ ಕುಶೈಗುಡದಲ್ಲಿ ಈ ಘಟನೆ ನಡೆದಿದ್ದು, ಟಿಂಬರ್ ಡಿಪೋದಲ್ಲಿ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡು ಪಕ್ಕದ ಮನೆಯನ್ನು ಆವರಿಸಿದೆ.
ಪೊಲೀಸರ ಪ್ರಕಾರ, ಟಿಂಬರ್ ಡಿಪೋದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಇದು ಬೆಂಕಿಯ ತೀವ್ರತೆಯನ್ನು ಹೆಚ್ಚಿಸಿದೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದವು.
ಮೃತರನ್ನು ನರೇಶ್ (35), ಅವರ ಪತ್ನಿ ಸುಮಾ (28) ಮತ್ತು ಅವರ ಮಗ ಜೋಶಿತ್ (5) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಗೆ ಹೋಗಿದ್ದ ದಂಪತಿಯ ಮತ್ತೊಬ್ಬ ಮಗ ಬದುಕುಳಿದಿದ್ದಾನೆ.
ರಾಚಕೊಂಡ ಕಮಿಷನರೇಟ್ ಕುಶೈಗುಡ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ನಗರದಲ್ಲಿ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ನಗರದಲ್ಲಿ ಸಂಭವಿಸಿದ ಮತ್ತೊಂದು ಅಗ್ನಿ ದುರಂತದಲ್ಲಿ, ಲಾರಿ ಮೆಕ್ಯಾನಿಕ್ ಅಂಗಡಿ ಮತ್ತು ಗೋದಾಮು ಸುಟ್ಟುಹೋಗಿದೆ. ಬಹದ್ದೂರ್ಪುರದಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.