ಆಧುನಿಕ ಜಗತ್ತಿನಲ್ಲಿ ಬೇರೆ ಬೇರೆ ರೀತಿಯ ಕೃಷಿಯನ್ನು ಬೆಳೆಯಲು ಹೋಗಿ ಕೈ ಸುಟ್ಟುಕೊಂಡು ಇನ್ನು ಏನು ಮಾಡುವುದು ಎಂದು ತಲೆ ಕೆಡಿಸಿಕೊಳ್ಳುವುದು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿರುವಾಗ ಶ್ರೀಗಂಧದ ಬೆಳೆಯನ್ನು ಬೆಳೆದರೆ ಹೇಗಿರಬಹುದು ಎಂಬ ಚಿಕ್ಕದಾದ ಚರ್ಚೆಯನ್ನು ನಿಮ್ಮೊಂದಿಗೆ ನಾನು ಮಾಡಲು ಮುಂದಾಗಿದ್ದೇನೆ.
ಶ್ರೀಗಂಧವನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಬಳಸದೆ ಇರುವ ಮನೆಗಳಿಲ್ಲ, ಶ್ರೀಗಂಧವನ್ನು ಮಗು ಜನನವಾದ ತೊಟ್ಟಿಲು ಶಾಸ್ತ್ರ ಮಾಡುವ ದಿನದಿಂದ ಹಿಡಿದು ಸವಸಂಸ್ಕಾರದವರೆಗೂ ಉಪಯೋಗಿಸುತ್ತಾರೆ. ಭಾರತದಲ್ಲಿ ಇದನ್ನು ಚಂದನ ಎಂದು ಕರೆಯುತ್ತಾರೆ.
ಭಾರತದ ಅನೇಕ ರಾಜ್ಯಗಳಲ್ಲಿ ಶ್ರೀಗಂಧ ಮರವನ್ನು ಬೆಳೆಯಲು ನಿರ್ಬಂಧ ವಿರುವುದರಿಂದ ಮೊದಲು ಯಾರು ಈ ಬೆಳೆಯನ್ನು ಬೆಳೆಯಲು ಇಚ್ಚಿಸುತ್ತಿರಲಿಲ್ಲ ಆದರೆ ಇಂದು ಸರ್ಕಾರವು ಇದಕ್ಕೆ ಅನುಮತಿಯನ್ನು ಸೂಚಿಸಿದ್ದು ಇಂದು ತುಂಬಾ ಜನರು ಎಕರೆಗಟ್ಟಲೆ ಜಾಗವಿದ್ದರೆ ಶ್ರೀಗಂಧವನ್ನು ಬೆಳೆಯಲು ಮುಂದಾಗುತ್ತಿದ್ದಾರೆ. ಶ್ರೀಗಂಧವು ತುಂಬಾ ಬೆಳೆಬಾಳುವಂತದ್ದು. ಈ ಬೆಳೆ ತುಂಬಾ ಲಾಭದಾಯಕವಾಗಿದ್ದು ವರಮಾನವು ಚೆನ್ನಾಗಿ ಸಿಗುತ್ತದೆ.
ಶ್ರೀಗಂಧ ಕೃಷಿಯ ಲಾಭ ತುಂಬಾ ಹೆಚ್ಚಿದ್ದರೂ ನೈಸರ್ಗಿಕವಾಗಿ ಬೆಳೆದ ಶ್ರೀಗಂಧದ ಮರವು ಕೊಯ್ಲಿಗೆ ಸಿದ್ಧವಾಗಲು 30 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಸಾವಯವ ವಿಧಾನಗಳಲ್ಲಿ ತೀವ್ರವಾದ ಕೃಷಿಯು 10 – 15 ವರ್ಷಗಳಲ್ಲಿ ತ್ವರಿತ ಫಲಿತಾಂಶವನ್ನು ನೀಡುತ್ತದೆ. ಭಾರತದಲ್ಲಿ ಬೆಳೆಯುವ ಶ್ರೀಗಂಧದ ಮರವು ಬಿಳಿ ಮತ್ತು ಕೆಂಪು ಎಂಬ ಎರಡು ಬಣ್ಣಗಳನ್ನು ಹೊಂದಿದೆ. ಶ್ರೀಗಂಧದ ಮರದ ಬೆಳವಣಿಗೆಗೆ ಸೂಕ್ತವಾದ ತಾಪಮಾನ 12 ಮತ್ತು 35 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಶ್ರೀಗಂಧ ಬೆಳೆಯಲು ಕೆಂಪು ಮರಳು ಮಿಶ್ರಿತ ಲೋಮ್ ಮಣ್ಣು, ಬೆಳವಣಿಗೆ ಮತ್ತು ಇಳುವರಿಗೆ ಉತ್ತಮವಾಗಿರುತ್ತದೆ. ಶ್ರೀಗಂಧ ಬೆಳೆಯಲು ಮಣ್ಣನ್ನು ಉತ್ತಮವಾದ ಕಳೆ ಹಂತಕ್ಕೆ ಮತ್ತು ಕಳೆ ಮುಕ್ತಗೊಳಿಸಲು ಒಂದೆರಡು ಉಳಿಮೆಗಳನ್ನು ನೀಡಿ ಭಾರಿ ಮಳೆ ಅಥವಾ ಪ್ರವಾಹ ಸಂದರ್ಭದಲ್ಲಿ ಹೆಚ್ಚುವರಿ ನೀರು ತ್ವರಿತವಾಗಿ ಹೊರ ಹೋಗುವ ರೀತಿಯಲ್ಲಿ ಮಣ್ಣು ಅಥವಾ ಹಾಸಿಗೆಯನ್ನು ತಯಾರಿಸಿಕೊಳ್ಳಬೇಕು. ಶ್ರೀಗಂಧ ಬೆಳೆಯಲು ಹನಿ ನೀರಾವರಿ ಪದ್ಧತಿ ಉತ್ತಮವಾಗಿರುತ್ತದೆ. ಇದಕ್ಕೆ ತುಂಬಾ ನೀರಿನ ಅವಶ್ಯಕತೆ ಕೂಡ ಇರುವುದಿಲ್ಲ. ಶ್ರೀಗಂಧವು ಬೆಳೆಯಲು ಇತರ ಮರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಅದರ ಇಳುವರಿ ಮತ್ತು ಲಾಭಕ್ಕಾಗಿ ಕಾಯುವ ತಾಳ್ಮೆಯನ್ನು ಹೊಂದಿರಬೇಕು.
ಭಾರತದಲ್ಲಿ ಶ್ರೀಗಂಧವನ್ನು ಬೆಳೆಯಲು ಬಯಸುವ ರೈತರಿಗೆ ಸಬ್ಸಿಡಿ ಮತ್ತು ಸಾಲ ಸೌಲಭ್ಯವಿದೆ ಶ್ರೀಗಂಧ ಯೋಜನೆಗಳ ವಾಣಿಜ್ಯ ಕೃಷಿಗೆ ನಬಾರ್ಡ್ ಸೇರಿದಂತೆ ಹಲವು ಬ್ಯಾಂಕುಗಳು ಹಣಕಾಸು ಒದಗಿಸುತ್ತದೆ.
ಶ್ರೀಗಂಧ ಬೆಳೆಯು ದೀರ್ಘಾವಧಿಯ ಮತ್ತು ಹೆಚ್ಚು ಲಾಭದಾಯಕ ಬೆಳೆಯಾಗಿದೆ ಈಗಿನ ಕಾಲದಲ್ಲಿ ಕೆಲಸಕ್ಕೆ ಜನ ಸಿಗದೇ ಕಷ್ಟಪಟ್ಟು ಬೇರೆ ಬೇರೆ ಬೆಳೆಗಳನ್ನು ಬೆಳೆಯುವುದಕ್ಕಿಂತ ತುಂಬಾ ಜಾಗವಿದ್ದರೆ ಅದರಲ್ಲಿ ಒಮ್ಮೆ ಶ್ರೀಗಂಧವನ್ನು ಹಾಕಿ ಆರಾಮಾಗಿ ಇರುವುದು ಉತ್ತಮ ಎನಿಸುತ್ತದೆ.
ಶ್ರೀಗಂಧವನ್ನು ಕಳ್ಳರಿಂದ ರಕ್ಷಿಸಲು, ಗಿಡಗಳಿಗೆ ಜಿಪಿಎಸ್ ಅನ್ನು ಅಳವಡಿಸಲಾಗುತ್ತದೆ.