ರಾಜ್ಯದಲ್ಲಿ ಕರ್ನಾಟಕದ ನಂದಿನಿ ಮತ್ತು ಗುಜರಾತ್ನ ಅಮುಲ್ ಹಾಲಿನ ವಿಚಾರಕ್ಕೆ ಜಟಾಪಟಿ ನಡೆಯುತ್ತಿದೆ. ಕೆಎಂಎಫ್ ಪ್ರಾಬಲ್ಯವನ್ನು ಕುಗ್ಗಿಸಿ ಅಮುಲ್ ಬ್ರಾಂಡ್ಅನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸುವ ಹುನ್ನಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ ಅಂತ ಕನ್ನಡಪರ ಸಂಘಟನೆಗಳು, ಕಾಂಗ್ರೇಸ್, ಜೆಡಿಎಸ್ ಸೇರಿದಂತೆ ವಿಪಕ್ಷಗಳು ಆರೋಪಿಸಿವೆ.
ಕರ್ನಾಟಕ ರಾಜ್ಯ ರೈತರ ಜೀವನೋಪಾಯದ ಒಂದು ಭಾಗವಾಗಿರುವ ಕರ್ನಾಟಕ ಮಿಲ್ಕ್ ಫೆಡರೇಷನ್ ಅಂದರೆ ಕೆಎಂಎಫ್ ನಂದಿನಿ ಹೆಸರಿನಲ್ಲಿ ಹಾಲು, ಮಜ್ಜಿಗೆ, ತುಪ್ಪ, ಬೆಣ್ಣೆ ಮತ್ತು ಪನ್ನೀರ್ ಸೇರಿದಂತೆ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಅಮುಲ್ ಬೆಂಗಳೂರು ನಗರಕ್ಕೆ ಹಾಲು ಮತ್ತು ಮೊಸರಿನ ರೂಪದಲ್ಲಿ ಹೊಸ ತಾಜಾತನವನ್ನು ತರುತ್ತಿದೆ. ಕ್ವಿಕ್ ಕಾಮರ್ಸ್ ಪ್ಲಾಟ್ಫಾಂರ್ಮ್ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದ್ದು, ಅವುಗಳನ್ನು ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಬಹುದು ಎಂದು ಅಮುಲ್ ಕನ್ನಡದಲ್ಲಿ ಏಪ್ರಿಲ್ ೫ರಂದು ಟ್ವೀಟ್ ಮಾಡಿತ್ತು. ಈ ಟ್ವೀಟ್ ಮಾಡಿದ ಬೆನ್ನಲ್ಲೇ ಅಮುಲ್ ಹಾಲಿನ ವಿವಾದ ಹುಟ್ಟಿಕೊಂಡಿದೆ.
ಕರ್ನಾಟಕದಲ್ಲಿ ಕೆಎಂಎಫ್ ಇರುವಂತೆಯೇ ಗುಜರಾತ್ನಲ್ಲಿ ಅಮೂಲ್ ಇದೆ. ಅಮೂಲ್ ತನ್ನ ಮಾರ್ಕೇಟನ್ನ ಕರ್ನಾಟಕದಲ್ಲಿ ವಿಸ್ತರಿಸಲಿದೆ ಎನ್ನುವುದು ಮೊದಲ ಆರೋಪ. ಇನ್ನೂ ಅಮೂಲ್ ಅನ್ನು ಮಾರಾಟ ಮಾಡುವುದಕ್ಕಾಗಿ ನಂದಿನಿ ಹಾಲಿನ ಕೃತಕ ಅಭಾವ ಸೃಷ್ಠಿಸಿದೆ ಎಂದು ಗಂಭೀರವಾದ ಆರೋಪವನ್ನು ಮಾಡಲಾಗಿದೆ.
ಭಾರತದ ಯಾವುದೇ ರಾಜ್ಯದ ಸಂಸ್ಥೆ ಬೇರೆ ರಾಜ್ಯದಲ್ಲಿ ಮಾರುಕಟ್ಟೆ ಮಾಡುವುದು ಹೊಸದೇನು ಅಲ್ಲ ಹಾಲಿನ ಮಾರುಕಟ್ಟೆ ವಿಚಾರದಲ್ಲಿ ನೋಡುವುದಾದರೆ ಕರ್ನಾಟಕದ ಕೆಎಂಎಫ್ ಉತ್ಪನ್ನಗಳು ಉತ್ತರಪ್ರದೇಶ, ಬಿಹಾರ, ಮಹರಾಷ್ಟ್ರ, ಗೋವಾ ಸೇರಿದಂತೆ ಬೇರೆ ರಾಜ್ಯಗಳಲ್ಲಿ ಮಾರುಕಟ್ಟೆಯನ್ನು ಹೊಂದಿದೆ. ಒಂದು ರಾಜ್ಯದಲ್ಲಿ ಹಾಲಿನ ಅಭಾವ ಉಂಟಾದರೆ ಮಾತ್ರ ಬೇರೆ ರಾಜ್ಯದ ಹಾಲನ್ನು ಪೂರೈಕೆ ಮಾಡಬಹುದು ಇಲ್ಲವಾದರೆ ಆ ರಾಜ್ಯದಲ್ಲಿ ಹಾಲನ್ನು ಮಾರಾಟ ಮಾಡುವಂತಿಲ್ಲ ಎನ್ನುವುದು ಅಲಿಖಿತ ನಿಯಮ. ಆದರಿಂದ ನಂದಿನಿ ಹಾಲಿನ ಕೊರತೆ ಇಲ್ಲದೇ ಇದ್ದರೂ ಕೂಡ ಅಮುಲ್ ಕರ್ನಾಟಕವನ್ನು ಪ್ರವೇಶಿಸುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಸಮಾವೇಶವೊಂದರಲ್ಲಿ ಕೆಎಂಎಫ್ ಹಾಗೂ ಅಮುಲ್ ಮಧ್ಯೆ ಸಹಕಾರ ತರುವ ವಿಚಾರ ಪ್ರಸ್ತಾಪಿಸಿದ್ದರು. ಇದಕ್ಕೆ ಆಗಲೇ ವಿರೋಧ ವ್ಯಕ್ತವಾಗಿತ್ತು. ಕೆಎಂಎಫ್ ಅನ್ನು ಅಮುಲ್ನ ಜೊತೆ ವಿಲೀನಗೊಳಿಸುವ ಹುನ್ನಾರ ನಡೆಯುತ್ತಿದೆ ಎನ್ನಲಾಗುತ್ತಿತ್ತು ಈ ವಿಚಾರ ಇದೀಗ ಮತ್ತಷ್ಟು ವಿವಾದಕ್ಕೆ ಕಾರಣವಾಗಿದೆ.
ಬೇಸಿಗೆಯಲ್ಲಿ ಹಾಲು ಉತ್ವಾದನೆ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಇದಕ್ಕೆ ಕಾರಣ ಮೇವಿನ ಕೊರತೆ, ನೀರಿನ ಅಭಾವ ಮತ್ತು ಬಿಸಿಲಿನ ಬೇಗೆ. ಪ್ರತಿವರ್ಷವು ಬೇಸಿಗೆಯಲ್ಲಿ ಬೇರೆ ಸಮಯಕ್ಕೆ ಹೋಲಿಸಿದರೆ ಹಾಲಿನ ಉತ್ಪಾದನೆ ಕಡಿಮೆ ಇರುತ್ತದೆ. ಈಗ ಬೇಸಿಗೆ ಕಾಲವಾದರಿಂದ ಈ ಭಾರಿಯು ಕೂಡ ಹಾಲಿನ ಪೂರೈಕೆ ಕಡಿಮೆಯಾಗಿದೆ ಇದನ್ನು ಕೆಲವರು ಅಮೂಲ್ ಅನ್ನು ಬೆಳೆಸಲು ಕೃತಕ ಹಾಲಿನ ಅಭಾವ ಸೃಷ್ಠಿಸಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಐಸ್ಕ್ರೀಮ್ ಪನ್ನೀರ್ ಚೀಸ್ ಸೇರಿದಂತೆ ಹಲವು ಹಾಲಿನ ಉತ್ಪನ್ನಗಳನ್ನು ಅಮುಲ್ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಮರಾಟಮಾಡುತ್ತಿದೆ. ಆದರೆ ಅದು ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಹಾಲು ಮತ್ತು ಮೊಸರನ್ನೂ ಪೂರೈಕೆ ಮಾಡಲು ನಿರ್ಧರಿಸಿದ್ದೂ ಅಮುಲ್ ಉತ್ಪನ್ನ ಕರ್ನಾಟಕಕ್ಕೆ ಹೊಸ ಉತ್ಪನ್ನವಲ್ಲ ಆದರಿಂದ ಇಷ್ಟೂ ಸಮಯ ಅಮುಲ್ ಉತ್ಪನ್ನ ಇದ್ದರೂ ಕೂಡ ನಂದಿನಿಗೆ ಯಾವುದೇ ನಷ್ಟವಾಗಿಲ್ಲ. ನಂದಿನಿ ಕೇವಲ ಕರ್ನಾಟಕದಲ್ಲಿ ಮಾತ್ರ ಹಾಲನ್ನು ಮಾರಾಟ ಮಾಡುತ್ತಿಲ್ಲ ಉಳಿದ ರಾಜ್ಯಗಳಲ್ಲೂ ಹಾಲನ್ನು ಮಾರಾಟ ಮಾಡುತ್ತಿದೆ ಹೀಗಿರುವಾಗ ಅಮೂಲ್ ಬೇಡ ಎಂದು ಹೇಳಲು ಒಕ್ಕೂಟ ವ್ಯವಸ್ಥೆಯಲ್ಲಿ ಯಾವ ಅಧಿಕಾರವಿದೆ. ಗ್ರಾಹಕರಿಗೆ ಯಾವುದು ಬೇಕೋ ಅದನ್ನು ಕರಿದಿಸುತ್ತಾರೆ. ಯಾವುದೇ ಸಂಸ್ಥೆಯಾದರೂ ಸರಿಯಾದ ಸ್ಪರ್ಧೆಯಿಲ್ಲದೇ ಗುಣಮಟ್ಟದ ಉತ್ಪನ್ನ ನೀಡಲು ಸಾಧ್ಯವಿಲ್ಲ ಆದರಿಂದ ಅಮುಲ್ ಕರ್ನಾಟಕ್ಕೆ ಬಂದರೆ ನಂದಿನಿ ಉತ್ಪನ್ನ ಇನ್ನೂ ಉತ್ತಮವಾದ ಗುಣಮಟ್ಟದಲ್ಲಿ ಗ್ರಾಹಕರಿಗೆ ಪೂರೈಕೆಯಾಗುತ್ತದೆ ಎಂಬುದು ಕೆಲವರ ವಾದ.
ಇನ್ನೂ ಅಮುಲ್ ನಮ್ಮ ರಾಜ್ಯದಲ್ಲಿ ಮಾರಾಟವಾದರೂ ಕೂಡ ನಂದಿನಿಗೆ ಯಾವುದೇ ನಷ್ಟವಾಗದು ಕಾರಣ ನಂದಿನಿ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಮಹಾರಾಷ್ಟ್ರ, ಗೋವಾ ಸೇರಿದಂತೆ ಪ್ರಮುಳ ರಾಜ್ಯಗಳಿಗೆ ಪೂರೈಕೆಯಾಗುತ್ತದೆ. ವರ್ಷದಲ್ಲಿ ೧೦೦ಕೋಟಿಯಷ್ಟು ಹಾಲು ಅರಬ ರಾಷ್ಟ್ರ, ಇಂಡೋನೇಷಿಯಾ, ಶ್ರೀಲಂಕಾ, ಆಸ್ಟ್ರೇಲಿಯಾ, ಕೆನಡಾ ಸೇರಿದಂತೆ ಜಗತ್ತಿನ ೫೦ರಾಷ್ಟ್ರಗಳಿಗೆ ರಫ್ತಾಗುತ್ತದೆ. ನಂದಿನಿಯ ಪನ್ನೀರ್, ಚೀಸ್, ಮೈಸೂರ್ಪಾಕ್ ಮತ್ತು ಇತರೆ ನಂದಿನಿ ಉತ್ಪನ್ನಗಳಿಗೆ ಹೊರದೇಶ ಮತ್ತು ಹೊರರಾಜ್ಯಗಳಲ್ಲಿ ಅತಿಹೆಚ್ಚು ಬೇಡಿಕೆ ಇದೆ.