ತುಳಸಿ, ಶುಂಠಿ ಮತ್ತು ಪುದೀನ ಈ ಮೂರು ಆಹಾರ ಪದಾರ್ಥಗಳು, ಅತ್ಯಂತ ಪರಿಣಾಮಕಾರಿ ಔಷಧಿಗಳೆಂದು ಆಯುರ್ವೇದಲ್ಲೇ ತಿಳಿಸಲಾಗಿದೆ. ಏಕೆಂದರೆ ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಹೇರಳವಾಗಿರುತ್ತದೆ. ಇದರಿಂದ ಸೋಂಕಗಳನ್ನು ತಡೆಗಟ್ಟಬಹುದು. ತುಳಸಿ, ಶುಂಠಿ ಮತ್ತು ಪುದೀನನ್ನು ಅನೇಕ ದೈಹಿಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
ಮೈಗ್ರೇನ್ ತಲೆನೋವು: ಮೈಗ್ರೇನ್ ಸಮಸ್ಯೆ ಕಾಣಿಸಿಕೊಂಡರೆ ಹೇಳತೀರದ ಸಂಕಟ ಅನುಭವಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ನಿಯಮಿತವಾಗಿ ಶುಂಠಿ, ತುಳಸಿ ಮತ್ತು ಪುದೀನ ಕಷಾಯ ಕುಡಿಯುವುದು ಉತ್ತಮ. ಇದಲ್ಲದೆ, ತುಳಸಿಯ 6-7 ಎಲೆಗಳನ್ನು ದಿನಕ್ಕೆ 4 ರಿಂದ 5 ಬಾರಿ ಅಗಿಯುವುದರಿಂದ ಮೈಗ್ರೇನ್ ಸಮಸ್ಯೆಯಲ್ಲಿ ಪರಿಹಾರ ಸಿಗುತ್ತದೆ. ದೇಹದ ಸ್ನಾಯುಗಳನ್ನು ಸಡಿಲಗೊಳಿಸಲು ಶುಂಠಿ, ತುಳಸಿ ಮತ್ತು ಪುದೀನ ಸಹ ಪರಿಣಾಮಕಾರಿ.
ತುಳಸಿ ಚಹಾ ತಯಾರಿಸಲು, ತುಳಸಿ ಎಲೆಗಳು, ಶುಂಠಿ ಮತ್ತು ಕರಿಮೆಣಸು ಬಳಸಿ. ಬಿಸಿ ತುಳಸಿ ಚಹಾ ಕುಡಿಯುವುದರಿಂದ ನರಮಂಡಲಕ್ಕೆ ಪರಿಹಾರ ಸಿಗುತ್ತದೆ. ಇದನ್ನು ದಿನಾಲು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ತುಳಸಿಯನ್ನು ಸೌಂದರ್ಯವರ್ಧಕವಾಗಿಯೂ ಸಹ ಬಳಸಬಹುದು. ಇದಕ್ಕಾಗಿ ನೀವು ತುಳಸಿ ಎಲೆಗಳ ರಸವನ್ನು ತೆಗೆದು, ನಂತರ ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ. ಈ ಮಿಶ್ರಣವನ್ನು ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಂಡರೆ ತುಳಸಿಯಲ್ಲಿರುವ ಆಂಟಿ-ಆಕ್ಸಿಡೆಂಟ್ ನಮ್ಮ ಚರ್ಮದ ಆರೋಗ್ಯವನ್ನು ಸುಧಾರಿಸಿ ಕಾಂತಿಯುತವನ್ನಾಗಿಸುತ್ತದೆ.