ನಿಸರ್ಗ ಮನುಷ್ಯನ ಆರೋಗ್ಯವೃದ್ಧಿಗೆ, ಭೂಮಿಯ ಅಂತರಾಳದ ಅಂತರ್ಜಲವನ್ನು ಹೀರಿಕೊಂಡು ನಿಸರ್ಗದ ಮಡಿಲಲ್ಲಿ ಬೆಳೆಯುವ ತೆಂಗಿನ ಮರ ನಮಗಾಗಿ ನೀಡುವ ಒಂದು ಅತ್ಯದ್ಭುತ ರುಚಿಕರವಾದ ನೈಸರ್ಗಿಕ ದ್ರವಾಹಾರ ಎಳನೀರು.
ನೈಸರ್ಗಿಕ ಸಿಹಿ ಅಂಶ ಹೊಂದಿರುವ ಎಳನೀರು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಅಲ್ಲದೆ, ಇದು ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು ಎಂದು ಎಲ್ಲರಿಗೂ ತಿಳಿದಿದೆ. ಆದರೆ ಸಕ್ಕರೆಕಾಯಿಲೆ ಇದ್ದವರು ಎಳನೀರು ಕುಡಿಯ ಬಹುದಾ? ಇದರಿಂದ ಮಧುಮೇಹ ಕಾಯಿಲೆ ನಿಯಂತ್ರಣ ತಪ್ಪುವ ಸಾಧ್ಯತೆ ಇರುತ್ತದೆಯಾ? ಇವೆಲ್ಲಾ ಪ್ರಶ್ನೆಗೆ ಇಲ್ಲಿದೆ ನೋಡಿ ಡೀಟೇಲ್ಸ್.
ರುಚಿಕರವಾದ ಸಿಹಿ ಎಳನೀರಿನಲ್ಲಿ, ಮನುಷ್ಯನ ಆರೋಗ್ಯಕ್ಕೆ ಬೇಕಾಗುವ ಪೌಷ್ಟಿಕ ಸತ್ವಗಳ ಜೊತೆಗೆ, ನೈಸರ್ಗಿ ಕವಾಗಿ ಸಿಗುವ ಸಕ್ಕರೆ ಅಂಶಗಳು ಕೂಡ ಇದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ರಕ್ತದಲ್ಲಿ ಸಕ್ಕರೆಮಟ್ಟ ನಿಯಂತ್ರಣದಲ್ಲಿ ಇರುವವರು, ಖಾಲಿ ಹೊಟ್ಟೆಗೆ ಒಂದು ಲೋಟ ಎಳನೀರು ಮಾತ್ರ ಕುಡಿಯಬಹುದು. ಅದಕ್ಕಿಂತ ಹೆಚ್ಚು ಉತ್ತಮವಲ್ಲ.
ಆರೋಗ್ಯ ತಜ್ಞರು ಹೇಳುವ ಪ್ರಕಾರ ಕೆಂಬಣ್ಣದ ಎಳನೀರು ಮಧುಮೇಹ ರೋಗಿಗಳಿಗೆ ಒಳ್ಳೆಯದು ಎಂದು ಸಲಹೆ ನೀಡುತ್ತಾರೆ. ಆದರೆ ಈಗಾಗಲೇ ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಿಗದಿದ್ದವರು, ಎಳನೀರಿನಿಂದ ದೂರವಿದ್ದರೆ ಒಳ್ಳೆಯದು. ಯಾಕೆಂದ್ರೆ ಇದರಲ್ಲಿ ನೈಸರ್ಗಿಕ ಸಿಹಿ ಅಂಶ ಇರುವುದ ರಿಂದ, ಮಧುಮೇಹ ಕಾಯಿಲೆ ನಿಯಂತ್ರಣ ಮೀರಿ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
ಮಧುಮೇಹ ಇರುವ ರೋಗಿಗಳು ಕಡ್ಡಾಯವಾಗಿ ಪ್ರತಿ ದಿನ ಮುಂಜಾನೆ ಎದ್ದ ಬಳಿಕ ವ್ಯಾಯಾಮ ಮಾಡಿ, ಆ ಬಳಿಕ ಒಂದು ಲೋಟ ಆಗುವಷ್ಟು ಎಳನೀರು ಕುಡಿಯ ಬಹುದು ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ಮಧುಮೇಹಿಗಳು ಪ್ರತಿದಿನ ವ್ಯಾಯಾಮ ಅಥವಾ ಯೋಗಾಭ್ಯಾಸವನ್ನು ಸರಿಯಾಗಿ ಅನುಸರಿಸದೇ ಇದ್ದರೆ, ರಕ್ತದಲ್ಲಿ ಸಕ್ಕರೆಯಂಶದಲ್ಲಿ ಏರುಪೇರು ಸಂಭವಿಸುತ್ತದೆ. ಈ ಸಮಯದಲ್ಲಿ ಎಳನೀರು ಸೇವನೆ ಮಾಡಿದರೆ, ರಕ್ತ ದಲ್ಲಿ ಸಕ್ಕರೆಮಟ್ಟ ಹೆಚ್ಚಾಗಿ ಮಧುಮೇಹ ನಿಯಂತ್ರ ಣಕ್ಕೆ ಬಾರದೆ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಕೆಯನ್ನು ನೀಡುತ್ತಾರೆ. ಅದಕ್ಕಾಗಿ ದಿನ ಎಳೆನೀರನ್ನು ಉಪಯೋಗಿಸದೆ ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೆ ಒಮ್ಮೆ ಮಧುಮೇಹಿಗಳು ಎಳನೀರು ಕುಡಿಯುವುದು ಸೂಕ್ತ.