ರಾಜ್ಯ ರಾಜಕಾರಣ ಪ್ರಸಕ್ತ ವರ್ಷ ಮಹತ್ವ ಘಟಕ್ಕೆ ಬಂದು ನಿಂತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷದ ಅನೇಕರಿಗೆ ಇದು ಕೊನೆ ಚುನಾವಣೆ. ಇದೇ ಕಾರಣಕ್ಕೆ ಬಿಜೆಪಿ ಹೊಸಬರಿಗೆ ಅವಕಾಶ ನೀಡುವ ಹೆಸರಿನಲ್ಲಿ ತನ್ನ ಹಿರಿಯ ನಾಯಕರಿಗೆ ನಿವೃತ್ತಿ ಪರ್ವ ಸೃಷ್ಟಿಸಿದೆ. ಇದು ರಾಜ್ಯ ರಾಜಕಾರಣದಲ್ಲಿ ಮಹತ್ವ ತಿರುವು ಪಡೆದುಕೊಳ್ಳುತ್ತಾ ಕಾದು ನೋಡಬೇಕು.!!!
ಬಿಜೆಪಿ ದೆಹಲಿ ಹೈಕಮಾಂಡ್ ಮೊಟ್ಟದ ಮೊದಲ ಬಾರಿಗೆ ಹೊಸ ಪ್ರಯೋಗ, ದಾಳ ಉರುಳಿಸಿದೆ. ಕ್ಷೇತ್ರದಲ್ಲಿ, ರಾಜ್ಯದಲ್ಲಿ ಆಕ್ಟಿವ್ ಇಲ್ಲದವರು. ಮುಂದಿನ ಪೀಳಿಗೆ ಜನರಿಗೆ ಹೊಸ ರಾಜಕೀಯ ಮುಖಗಳನ್ನು ಪರಿಚಯಿಸುವ ಉದ್ದೇಶದಿಂದ 6, 7 ಸಾರಿ ಗೆದ್ದು ಬೀಗಿದ್ದ ಬಿಜೆಪಿ ಹಿರಿಯ ನಾಯಕರಿಗೆ ಕೋಕ್ ನೀಡಿದೆ. ಗುಜರಾತ್ ಮಾಡೆಲ್ ರಾಜ್ಯದ ಜನರಿಗೆ ಅಚ್ಚರಿಗೆ ಕಾರಣವಾಗಿದ್ದರೇ, ಕಮಲ ಪಡೆಯಲ್ಲಿ ತಳಮಳ ಸೃಷ್ಟಿ ಮಾಡಿದೆ. ನಿಜಕ್ಕೂ ಇದು ಎಷ್ಟರಮಟ್ಟಿಗೆ ಬದಲಾವಣೆ ಗಾಳಿ ಹಾಡುತ್ತದೆ ಎನ್ನುವುದು ಕೂತುಹಲಕ್ಕೆ ಕಾರಣವಾಗಿದೆ.
ಬಿಎಸ್ವೈ ಕಂಟ್ರೋಲ್ ರೂಮ್..
ಬಿಜೆಪಿ ಈ ಸಾರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಮೂಲಕ ಸಾಕಷ್ಟು ಪರಿವರ್ತನೆ ಮುಂದಾಯಿತು. ಆದರೆ ಬಸವರಾಜ ಬೊಮ್ಮಾಯಿ ಅವರನ್ನು ನಮ್ಮ ನಾಯಕರು ಅಂತ ಸ್ವತಃ ಬಿಜೆಪಿಗರೇ ಒಪ್ಪಿಕೊಳ್ಳಲಿಲ್ಲ. ಅವರ ಹುದ್ದೆ ಅಡ್ಡಿ, ಆತಂಕ ಸೃಷ್ಟಿ ಮಾಡದೇ ಹೋದರು ಸಂಪೂರ್ಣ ಬಿ.ಎಸ್.ಯಡಿಯೂರಪ್ಪ ಕಂಟ್ರೋಲ್ ಅವರಲ್ಲಿ ಆಡಳಿತ ಇತ್ತು ಎನ್ನುವುದು ಬಿಡಿಸಿ ಹೇಳಬೇಕಿಲ್ಲ. ಇದು ಬಿಜೆಪಿ ಹೈಕಮಾಂಡ್ ಅಸಹನೆಗೆ ಕಾರಣವಾಗಿತ್ತು. ಇದಕ್ಕೆ ಇತಿಶ್ರೀ ಹಾಡಬೇಕು, ಅನೇಕ ಹಿರಿಯ ತೆಲೆಗಳಿಗೆ ಬ್ರೇಕ್ ಹಾಕಬೇಕು ಎನ್ನುವ ಕಾರಣಕ್ಕೆ ಚುನಾವಣೆ ಹೊತ್ತಲ್ಲಿ ಟಿಕೆಟ್ ನೆಪದಲ್ಲಿ ಪಕ್ಷ ಕಟ್ಟಿದ ಸರ್ದಾರರಿಗೆ ಅಂತಿಮ ಮೊಳೆ ಹೊಡೆದಿದೆ.
ಹಿರಿಯರಿಗೆ ಚುನಾವಣೆ ರಾಜಕೀಯ ನಿವೃತ್ತಿ:
ಬಿಜೆಪಿಯ ಹಿಂದುಳಿದ ನಾಯಕ ಕೆ.ಎಸ್.ಈಶ್ವರಪ್ಪ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಎಂ.ಪಿ.ಕುಮಾರಸ್ವಾಮಿ, ರಘುಪತಿ ಭಟ್, ರಾಮದಾಸ, ನೆಹರು ಓಲೇಕಾರ, ಮಹಾದೇವಪ್ಪ ಯಾದವಾಡ ಸೇರಿದಂತೆ ಅನೇಕ ಜನರಿಗೆ ಟಿಕೆಟ್ ನೀಡಿಲ್ಲ. ಕೆಲವರು ಸ್ವಯಂ ಪ್ರೇರಣೆಯಿಂದ ನಿವೃತ್ತಿ ಘೋಷಣೆ ಮಾಡಿದ್ದರೇ ಹಲವು ಬಂಡಾಯದ ಬಾವುಟ ಹಾರಿಸಿದ್ದಾರೆ. ಇದನ್ನು ಅವರ ಅಭಿಮಾನಿಗಳು, ಹಿಂಬಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಿವೃತ್ತಿಯ ಆಟ ಬಿಜೆಪಿ ಪಕ್ಷದಲ್ಲಿ ಕಂಪನ ಉಂಟು ಮಾಡಿದೆ. ಆದರೆ ಆಯಾ ಸಮುದಾಯದವರು ತಮ್ಮ ನಾಯಕರು ಇಲ್ಲದಿರುವುದು ಸಾಕಷ್ಟು ನೋವು ಉಂಟು ಮಾಡಿದೆ. ಇದಕ್ಕೆ ಒಳಗೊಳಗೆ ಕುದಿಯ ತೊಡಗಿದ್ದಾರೆ.
52 ಹೊಸಮುಖ ಏನಿದು ಲೆಕ್ಕಚಾರ:
ಬಿಜೆಪಿ ಅತೀ ಹೆಚ್ಚಾಗಿ ತನ್ನ ಬಲ, ಬಾಹ್ಯವನ್ನು ಇಟ್ಟುಕೊಂಡಿರುವುದು ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ ಭಾಗದಲ್ಲಿ. ಬಿಜೆಪಿ ಇಲ್ಲಿ ಚಾಣಾಕ್ಷತನ ಆಟವಾಡಿದೆ. 52 ಹೊಸಬರಿಗೆ ಅವಕಾಶ ನೀಡಿದೆ ಎಂದು ಹೇಳುತ್ತಿದೆ ಆದರೆ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜೇಂದ್ರ, ವಿಜಯನಗರದಲ್ಲಿ ಆನಂದ ಸಿಂಗ ಬದಲಿಗೆ ಅವರ ಪುತ್ರ ಸಿದ್ದಾರ್ಥ ಸಿಂಗ್, ಆನಂದ ಮಾಮನಿ ನಿಧನ ಹಿನ್ನಲೆಯಲ್ಲಿ ಅವರ ಪತ್ನಿಗೆ ಹೀಗೆ ಅನೇಕ ಕಡೆ ತನ್ನ ಹಳೇ ನಾಯಕರ ಕುಟುಂಬಸ್ಥರಿಗೆ ಮಣೆ ಹಾಕಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಟಿಕೆಟ್ ಬದಲಾವಣೆಗೆ ಅಷ್ಟೇನೂ ಮಹತ್ವ ನೀಡಿಲ್ಲ. ಕೇವಲ ಸಂಘ ಪರಿವಾರ, ಬಿಜೆಪಿ ಗಟ್ಟಿ ಇರುವ ಕರಾವಳಿ ಭಾಗದಲ್ಲಿ ಹಾಗೂ ಮಧ್ಯ ಕರ್ನಾಟಕ ಭಾಗದ ಹಾವೇರಿ ಜಿಲ್ಲೆಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡಿದೆ. ಇದು ಈ ತಂತ್ರಗಾರಿಕೆ ಅಷ್ಟೇನೂ ಪರಿಣಾಮಕಾರಿ ಬೀರಬಲ್ಲದು ಎನ್ನುವುದು ಖಾತ್ರಿ ಇಲ್ಲ.
ಬಣಜಿಗ, ಗಾಣಿಗ ಲೀಡರ್ ಗಳಿಗೆ ಹಿನ್ನಡೆ:
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮಾಜದ ಬಣಜಿಗ, ಗಾಣಿಗ, ಪಂಚಮಸಾಲಿ ಸೇರಿದಂತೆ ಇತರೆ ಒಳ ಪಂಗಡಗಳು ಹೆಚ್ಚಾಗಿ ಬಿಜೆಪಿ ಕಡೆ ಒಲವು. ಆದರೇ ಈ ಸಾರಿ ಬಾದಾಮಿಯಲ್ಲಿ 6 ಬಾರಿ ಶಾಸಕರಾಗಿರುವ ಎಂ.ಕೆ.ಪಟ್ಟಣಶೆಟ್ಟಿ, ಅವರ ಅಳಿಯ ಮಹಾಂತೇಶ ಮಮದಾಪುರ, ಹುಬ್ಬಳಿಯಲ್ಲಿ ಜಗದಿಶ ಶೆಟ್ಟರ, ಅಥಣಿಯಲ್ಲಿ ಲಕ್ಷ್ಮಣ ಸವದಿ, ರಾಮದುರ್ಗ ಮಹದೇವಪ್ಪ ಯಾದವಾಡಗೆ ಟಿಕೆಟ್ ನಿರಾಕರಣೆ ಮಾಡುವ ಮೂಲಕ ಬಹುದೊಡ್ಡ ಬದಲಾವಣೆಗೆ ಮುಂದಾಗಿದೆ. ಆದರೇ ಬಣಜಿಗ, ಗಾಣಿಗ ಸಮಾಜಗಳು ಇದನ್ನು ಸಲಿಸಾಗಿ ಒಪ್ಪುವದಿಲ್ಲ. ಗಾಣಿಗ ಸಮಾಜವು ಲಕ್ಷ್ಮಣ ಸವದಿ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಇವರನ್ನು ಅಲ್ಲಗಳೆದಲ್ಲಿ ಬಿಜೆಪಿ ಹಿನ್ನಡೆಯಾಗುವುದು ಗ್ಯಾರಂಟಿ.
ಒಳಗೊಳಗೆ ಕುದಿ:
ಹಿರಿಯ ನಾಯಕರ ಛಾಪು ಪಕ್ಕ ಎರಡು ಮೂರು ಜಿಲ್ಲೆಗಳಿಗೆ ವ್ಯಾಪಿಸಿದೆ. ಜಗದೀಶ ಶೆಟ್ಟರ, ಲಕ್ಷ್ಮಣ ಸವದಿ ವಿಜಯಪುರ, ಬಾಗಲಕೋಟೆ, ಅಖಂಡ ಧಾರವಾಡ ಜಿಲ್ಲೆಯಲ್ಲಿ ತಮ್ಮ ಶಕ್ತಿ ಹೊಂದಿದ್ದಾರೆ. ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೈ ಪಡೆಯಲ್ಲಿ ಹಿತಕರ ಉಂಟಾಗಿದೆ. ಅಲ್ಲದೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ಬಾದಾಮಿ, ಬಾಗಲಕೋಟೆ, ಮುಧೋಳ ವಿಧಾನಸಭಾ ವಿಜಯಪುರ ಜಿಲ್ಲೆಯ ಬಬಲೇಶ್ವರ ಇತರ ಮತಕ್ಷೇತ್ರದಲ್ಲಿ ಗಾಢ ಪರಿಣಾಮ ಉಂಟು ಮಾಡಲಿದೆ. ಜಗದೀಶ ಶೆಟ್ಟರ್ ಅವರ ಪ್ರಭಾವವೂ ಈ ಜಿಲ್ಲೆಗಳಲ್ಲಿ ಇದೆ ಎನ್ನುವುದು ಮರೆಯಲು ಸಾಧ್ಯವಿಲ್ಲ.