ಮನುಷ್ಯನ ಬೆವರು ಆತನ ಆರೋಗ್ಯದ ರಹಸ್ಯವನ್ನು ಹೇಳುತ್ತದೆ. ಬೆವರಿದರೆ ವ್ಯಕ್ತಿಯು ಉತ್ತಮ ಆರೋಗ್ಯವನ್ನು ಹೊಂದಿದ್ದಾನೆ ಎಂದು ನಂಬಿಕೆ. ಇಷ್ಟಕ್ಕೂ ಬೆವರು ಪರಿಶ್ರಮದ ಲಕ್ಷಣ. ಆದರೆ ಕೆಲವೊಮ್ಮೆ ಇದು ನಮ್ಮನ್ನು ಮುಜುಗರಕ್ಕೆ ಒಳಗಾಗುವಂತೆ ಮಾಡುತ್ತದೆ.
ನಾವು ಸೇವಿಸುವ ಆಹಾರ ಮತ್ತು ಬೆವರಿಗೆ ನಿಕಟ ಸಂಬಂಧವಿದೆ. ಹಾಗಾಗಿ ಇರುಳ್ಳಿ, ಬೆಳ್ಳುಳ್ಳಿ ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸುವಂತಿರ ಬೇಕು. ಯಾಕೆಂದರೆ ನಾವು ಬೆವರಿದಾಗ ಇರುಳ್ಳಿ ಬೆಳ್ಳುಳ್ಳಿ ವಾಸನೆಯು ನಮ್ಮ ದೇಹದಿಂದ ದುರ್ನಾತ ಬೀರುವುದು.
ವಿಪರೀತ ಬೆವರುವವರು ದಿನಕ್ಕೆ ಎರಡು ಬಾರಿ ಸ್ನಾನವನ್ನು ಮಾಡಬೇಕು. ಆದಷ್ಟು ಹತ್ತಿಯ ಬಟ್ಟೆಗಳನ್ನು ಧರಿಸುವುದು ಉತ್ತಮ ಇದು ಬೆವರನ್ನು ಹೀರುತ್ತದೆ ಜೊತೆಗೆ ದೇಹಕ್ಕೆ ತಂಪನ್ನು ನೀಡುತ್ತದೆ. ಸರಿಯಾಗಿ ಒಣಗಿದ ಬಟ್ಟೆಯನ್ನು ಧರಿಸುವುದು ಉತ್ತಮ.
ವೈದ್ಯರು ಹೇಳುವಂತೆ ನೀರು ಬಹಳ ಅಗತ್ಯ. ಹಾಗಾಗಿ ದಿನಕ್ಕೆ ಎಡರಿಂದ ಮೂರು ಲೀಟರ್ ನೀರನ್ನು ಕುಡಿಯಲೇ ಬೇಕು ಮತ್ತು ಜ್ಯೂಸ್ ಕೂಡ ಉತ್ತಮ ಆಯ್ಕೆ.
ಸಾಧ್ಯವಾದಷ್ಟು ಆಹಾರದಲ್ಲಿ ತರಕಾರಿ ಹಣ್ಣುಗಳನ್ನು ಬಳಸುವುದು ಉತ್ತಮ. ಮೈ ಮತ್ತು ದೇಹದ ಸಂದುಗಳಿಗೆ ಪೌಡರ್ ಬಳಸುವುದು ಉತ್ತಮ ಅದರಲ್ಲೂ ಹೊರಗಡೆ ಹೊಗುವಾಗ ತಪ್ಪದೆ ಪೌಡರ್ ಬಳಸುವುದು ಉತ್ತಮ.
ಸ್ನಾನ ಮಾಡುವಾಗ ಅರಶಿನ ಮಿಶ್ರಿತ ಕಡಲೆ ಹಿಟ್ಟುನ್ನ ಬಳಸುವುದರಿಂದ ದೇಹದ ದುರ್ಗಂಧ ಮತ್ತು ಬೆವರು ಮತ್ತು ವಾಸನೆಯನ್ನು ಉಂಟು ಮಾಡುವ ಬ್ಯಾಕ್ಟೀರಿಯವನ್ನು ಕಡಿಮೆಗೊಳಿಸುತ್ತದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಕೂಡ ಸಹಕಾರಿ.
ಹೆಚ್ಚಾಗಿ ಕಂಕುಳಡಿಯಲ್ಲಿ ಬೆವರಿನ ದುರ್ಗಂಧ ಬೀರುವುದರಿಂದ ಮುಜುಗರಕ್ಕೆ ಒಳಗಾಗುತ್ತೇವೆ. ಆದ್ದರಿಂದ ನಮ್ಮಗೆ ಸೂಕ್ತವೆನಿಸುವ ಹಾನಿಕಾರಕವಲ್ಲದ ಫರ್ಫ್ಯೂಮ್, ಡಿಯೋಡರೆಂಟ್ ಬಳಸಬಹದು.