ಸೀತಾ ಫಲ ಮತ್ತು ರಾಮಫಲ ಎಲ್ಲರಿಗೂ ಚಿರ ಪರಿಚಿತ. ತರಕಾರಿ ಹಣ್ಣುಗಳ ಅಂಗಡಿಯಲ್ಲಿ ಸದಾ ಲಭ್ಯವಿರುವ ಹಣ್ಣು. ಬಲೂ ವಿರಳವಾಗಿ ಸಿಗುವ ಲಕ್ಷಮಣ ಫಲದ ಬಗ್ಗೆ ಮಾಹಿತಿ ಎಲ್ಲರೂ ತಿಳಿದಿರುವ ಸಾಧ್ಯತೆಗಳು ಕಮ್ಮಿ
ಕಡು ಹಸಿರಿನ ಹಣ್ಣು, ಸಿಪ್ಪೆಯ ಮೇಲೆ ಹಲಸಿನ ಹಣ್ಣಿನ ಮೇಲೆರಿರುವಂತೆ ಸಣ್ಣ ಸಣ್ಣದಾದ ಮುಳ್ಳುಗಳಿರುತ್ತವೆ.ಇದರ ಒಳ ಭಾಗ ಬಿಳಿಯ ಬಣ್ಣದಿಂದ ಕೂಡಿದ್ದು, ಬೀಜವು ಕಪ್ಪು ಬಣ್ಣದಿಂದ ಕೂಡಿದ್ದು ರಾಮಫಲ, ಸೀತಾಫಲದಂತೆ ಇರುತ್ತದೆ.ರುಚಿಯ ಬಗ್ಗೆ ಹೇಳುವುದಾದರೆ ಸಿಹಿಮಿಶ್ರಿತ ಹುಳಿಯು ರುಚಿಸುತ್ತದೆ.
ಇದನ್ನು ಬಾಕಿ ಹಣ್ಣಿನಂತೆ ಕಚ್ಚಾವಾಗಿ ತಿನ್ನಬಹುದು. ಈ ಹಣ್ಣಿನಿಂದ ಸ್ಮೂಥಿಗಳು, ಐಸ್ ಕ್ರೀಮ್ ಹಾಗೂ ಜ್ಯೂಸ್ನ್ನು ಮಾಡಬಹುದು.ಲಕ್ಷ್ಮಣ ಫಲದ ಸೇವನೆ ಆರೋಗ್ಯಕ್ಕೆ ಉತ್ತಮ. ಇದರಲ್ಲಿ ದೇಹ ಪೋಷಣೆಗೆ ಬೇಕಾದಂತಹ ಪ್ರೊಟೀನ್,ವಿಟಮಿನ್ಗಳು ಲಭ್ಯವಿರುವುದರಿಂದ, ಊಟದ ನಂತರ ಈ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಉತ್ತಮ.
ಇದರಲ್ಲಿ ಕ್ಯಾಲ್ಸಿಯಂ, ಮೆಗ್ನಿಷಿಯಂ, ವಿಟಮಿನ್ ಸಿ, ವಿಟಮಿನ್ ಡಿ ಯು ದೇಹಕ್ಕೆ ಬೇಕಾಗಿರುವ ಅವಶ್ಯಕ ಪೋಷಾಕಾಂಶಗಳು ಇವೆ. ಇದರಲ್ಲಿನ ಆಂಟಿ ಅಕ್ಸಿಡೆಂಟ್ ಅಂಶವು ಕ್ಯಾನ್ಸರ್ ಕಾಯಿಲೆಯಿಂದ ರಕ್ಷಿಸುತ್ತದೆ. ಅಧ್ಯಯನದ ಪ್ರಕಾರ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಅದರಲ್ಲೂ ಸ್ತನ ಕ್ಯಾನ್ಸರ್ ಪರಿಣಾಮಕಾರಿ ಎಂದು ಎನ್ನಲಾಗಿದೆ. ಬಿಪಿ ಸಮಸ್ಯೆ ಇರುವವರು ಇದನ್ನು ತಿನ್ನದಿರುವುದು ಒಳಿತು.
ಬೇಡಿಗೆ ಹೆಚ್ಚಾಗಿರುವ ಹಣ್ಣಿನ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ. ಯಾಕೆಂದರೆ ಒಂದು ಹಣ್ಣಿನ ಬೆಲೆ ೫೦೦ರೂ ಗಿಂತ ೭೦೦ ರೂ ಆಗಿರುತ್ತದೆ. ಮಾರುಕಟ್ಟೆಯಲ್ಲಿ ಅಪರೂಪಕ್ಕೆ ಕಾಣಸಿಗುವ ಈ ಹಣ್ಣಿನ ಮಹತ್ವ ಸಾಕಷ್ಟು ಮಂದಿಗೆ ತಿಳಿಯದಿರುವುದು ವಿಪರ್ಯಾಸ. ಜೋತಗೆ ರೈತರಿಗೂ ಇದರ ಬಗ್ಗೆ ಸರಿಯಾದ ಮಾಹಿತಿಯು ಇಲ್ಲದಿರುವುದರಿಂದ ಅಧಿಕ ಪ್ರಮಾಣದಲ್ಲಿ ಬೆಳೆಯಾಲಾಗುತ್ತಿಲ್ಲ.