ರಾಮನಗರ : ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಇಂದು ರಾಮನಗರ ಜಿಲ್ಲೆಯಲ್ಲಿ ತನ್ನ ಪ್ರಮುಖ ಎಬಿಸಿಡಿ (ಎ ಬಿಹೇವಿಯರಲ್ ಚೇಂಜ್ ಡೆಮಾನ್ಸ್ಟ್ರೇಷನ್) ಯೋಜನೆಯನ್ನು ಆರಂಭಿಸಿದೆ. 2015ರಲ್ಲಿ ಆರಂಭವಾದ ಎಬಿಸಿಡಿ ಯೋಜನೆಯು 2019ರ ವೇಳೆಗೆ 58,000 ವಿದ್ಯಾರ್ಥಿಗಳು ಮತ್ತು 400,000 ಜನರಿಗೆ ಸ್ವಚ್ಛತೆ ಪಾಲಿಸುವ ವಿಚಾರದಲ್ಲಿ ಪ್ರಭಾವ ಬೀರುವ ಮಹತ್ತರ ಕೆಲಸ ಮಾಡಿದೆ. ಕೋವಿಡ್ ಬಳಿಕ 2023ರ ಆಗಸ್ಟ್ ನಲ್ಲಿ ಈ ಯೋಜನೆಯನ್ನು ಮರು ಆರಂಭಿಸಿದ್ದು, ಆ ಮೂಲಕ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಪಾಲಿಸುವಂತೆ ಮಾಡಲಾಗುತ್ತಿದೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿರುವ ಭಾರತವು ಸ್ವಚ್ಛತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆ ಹಿನ್ನೆಲೆಯಲ್ಲಿ “ಸ್ವಚ್ಛ ಭಾರತ ಅಭಿಯಾನ”ದಂತಹ ಸರ್ಕಾರದ ಯೋಜನೆಗಳು ಕೂಡ ಪ್ರಮುಖ ಪಾತ್ರವನ್ನು ವಹಿಸಿವೆ. ಈ ರಾಷ್ಟ್ರೀಯ ಆಂದೋಲನಕ್ಕೆ ಬೆಂಬಲವಾಗಿ ಮೂಡಿಬಂದಿರುವ ಟಿಕೆಎಂನ ಎಬಿಸಿಡಿ ಕಾರ್ಯಕ್ರಮವು ನೈರ್ಮಲ್ಯ ಶಿಕ್ಷಣ ಒದಗಿಸುವ ಕೆಲಸ ಮಾಡುತ್ತಿದೆ. ರಾಮನಗರ ಜಿಲ್ಲೆಯ 1,004 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಈ ಯೋಜನೆಯು ಸಕಾರಾತ್ಮಕ ಪರಿಣಾಮ ಬೀರಿದೆ.
2023-24ನೇ ಆರ್ಥಿಕ ವರ್ಷದಲ್ಲಿ ಟಿಕೆಎಂ 250 ಸರ್ಕಾರಿ ಶಾಲೆಗಳಲ್ಲಿ ಎಬಿಸಿಡಿ ರಿಫ್ರೆಷರ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮರು ಆರಂಭ ಮಾಡಿತ್ತು. ಸುಮಾರು 12,000 ವಿದ್ಯಾರ್ಥಿಗಳಿಗೆ ನೈರ್ಮಲ್ಯ ಶಿಕ್ಷಣ ಒದಗಿಸಲಾಗಿತ್ತು. ಇದರ ಪರಿಣಾಮವಾಗಿ ನೈರ್ಮಲ್ಯದ ಕುರಿತಾದ ವಿದ್ಯಾರ್ಥಿಗಳ ಅರಿವು ಶೇ.26.8 ರಿಂದ ಶೇ.96.5ರಷ್ಟು ಹೆಚ್ಚಳವಾಗಿದೆ. ವಿಶೇಷವಾಗಿ ಈ ಸಂದರ್ಭದಲ್ಲಿ ನೈರ್ಮಲ್ಯ ಅಭ್ಯಾಸಗಳನ್ನು ಮುಂದೆಯೂ ಪಾಲಿಸಲು ಮತ್ತು ಹೊಸ ವಿದ್ಯಾರ್ಥಿಗಳಿಗೆ ನೈರ್ಮಲ್ಯ ತರಬೇತಿ ನೀಡಲು ಕ್ಲಾಸ್ ರೂಮ್ ಚಾಂಪಿಯನ್ ಎಂಬ ಹೊಸ ಆಲೋಚನೆಯನ್ನು ಪರಿಚಯಿಸಲಾಗಿತ್ತು. ಜೊತೆಗೆ ಟ್ಯಾಪ್ ಬದಲಿಸುವುದು ಮತ್ತು ಸ್ವಚ್ಛಗೊಳಿಸುವುದು ಇತ್ಯಾದಿ ವಾಶ್ ರೂಮ್ ರಿಪೇರಿ ಕಾರ್ಯಗಳನ್ನು ಪೂರ್ಣಗೊಳಿಸಲಾಯಿತು. ಆ ಮೂಲಕ ಶಾಲಾ ಮೂಲಸೌಲಭ್ಯಗಳು ಸಂಪೂರ್ಣವಾಗಿ ಸರಿ ಇರುವಂತೆ ನೋಡಿಕೊಳ್ಳಲಾಯಿತು. ಈ ಕಾರ್ಯಕ್ರಮದ ಯಶಸ್ಸಿನ ಆಧಾರದ ಮೇಲೆ 2024-25ರ ಆರ್ಥಿಕ ವರ್ಷದಲ್ಲಿ ಮತ್ತೆ ಈ ಯೋಜನೆ ಆರಂಭಿಸಲಾಗಿದೆ. ಈ ವೇಳೆ 550 ಹೆಚ್ಚಿನ ಶಾಲೆಗಳ 28,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ.
ಕಾರ್ಯಕ್ರಮವು ಸಮಾಜದ ಮೇಲೆ ಉಂಟುಮಾಡುತ್ತಿರುವ ಸಕಾರಾತ್ಮಕ ಪರಿಣಾಮವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಲಾಗಿದೆ. ಈ ಯೋಜನೆಯ ಕುರಿತು ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂನಲ್ಲಿ ಬರಹ ಪ್ರಕಟವಾಗಿದೆ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಕೇಸ್ ಸ್ಟಡೀಸ್ ನ ಪ್ರತಿಷ್ಠಿತ ಸಂಗ್ರಹದಲ್ಲಿ ಸೇರ್ಪಡೆಗೊಳಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸವನ್ನು ರೂಢಿಸಿಕೊಳ್ಳಲು ಮತ್ತು ಸ್ವಚ್ಛತೆಯ ಕುರಿತು ಅರಿವು ಮೂಡಿಸುವಲ್ಲಿ ಗಮನಾರ್ಹ ಸಾಧನೆ ಮಾಡಿರುವ ಎಬಿಸಿಡಿ ಯೋಜನೆಯು, ಜೊತೆಗೆ ಶಾಲೆಗಳು ಮತ್ತು ಸಮುದಾಯಗಳಲ್ಲಿ ನೈರ್ಮಲ್ಯದ ಅರಿವು ಮೂಡಿಸುವ ಯುವ ರಾಯಭಾರಿಗಳನ್ನು ಸಿದ್ಧಗೊಳಿಸಿದೆ.
ಈ ಮಹತ್ವದ ವಿಸ್ತರಣೆಯು ಹಲವಾರು ಪ್ರಮುಖ ಚಟುವಟಿಕೆಗಳನ್ನು ಅನುಷ್ಠಾನಗೊಳಿಸುವ ಮೂಲಕ
ಎಬಿಸಿಡಿ ಕಾರ್ಯಕ್ರಮದ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಲು ಈ ಯೋಜನೆಯನ್ನು ಪುನರಾರಂಭ ಮಾಡಲಾಗಿದೆ. ಆ ಸರ್ಕಾರಿ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಮುಖ್ಯೋಪಾಧ್ಯಾಯಿನಿಯರು ವಿಶೇಷವಾದ ತರಬೇತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾರೆ. ಸ್ವಚ್ಛತೆ ಮತ್ತು ನೈರ್ಮಲ್ಯತೆಯ ಪ್ರಾಮುಖ್ಯತೆ ಕುರಿತು ಗಮನ ಕೇಂದ್ರೀಕರಿಸಿಕೊಂಡು ಶಾಲೆಯ ನಾಯಕರು ಸ್ವಚ್ಛತೆಯ ಸಂಸ್ಕೃತಿಯನ್ನು ಬೆಳೆಸುವಂತೆ ಮಾಡುತ್ತಾರೆ. ಜೊತೆಗೆ ವಿದ್ಯಾರ್ಥಿಗಳು ಸಮಗ್ರ ತರಬೇತಿಯನ್ನು ಪಡೆಯುತ್ತಾರೆ. ಈ ತರಬೇತಿಯಲ್ಲಿ ಕಾರ್ಯಕ್ರಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ, ನೀರಿನ ನಿರ್ವಹಣೆ, ತ್ಯಾಜ್ಯ ವಿಂಗಡಣೆ ಮತ್ತು ಸುರಕ್ಷಿತ ವಿಲೇವಾರಿ ಇತ್ಯಾದಿ ಕುರಿತು ಪ್ರಾಯೋಗಿಕ ಮತ್ತು ಪಠ್ಯ ತರಬೇತಿ ಇರುತ್ತದೆ. ಈ ಮೂಲಕ ಅವರ ಒಟ್ಟಾರೆ ಯೋಗಕ್ಷೇಮಕ್ಕೆ ಕೊಡುಗೆ ನೀಡುವ ಅಗತ್ಯ ಜೀವನ ಕೌಶಲ್ಯಗಳನ್ನು ಕಲಿಸಲಾಗುತ್ತದೆ.
ಈ ಯೋಜನೆಯು ಶಾಲಾ ಆಡಳಿತ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳನ್ನು (ಎಸ್ ಡಿ ಎಂ ಸಿಗಳು) ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳುವ ಯೋಜನೆ ಹೊಂದಿದ್ದು, ಅವರ ಶಾಲೆಗಳಲ್ಲಿ ನೈರ್ಮಲ್ಯ ಅಭ್ಯಾಸಗಳನ್ನು ಉಳಿಸಿಕೊಳ್ಳುವಲ್ಲಿ ಮೇಲ್ವಿಚಾರಣೆ ನಡೆಸಲು ಪ್ರೋತ್ಸಾಹಿಸಲಾಗುತ್ತದೆ. ಈ ಚಟುವಟಿಕೆಗಳ ಸುಗಮ ಅನುಷ್ಠಾನಕ್ಕೆ ಅನುಕೂಲವಾಗುವಂತೆ ಟಿಕೆಎಂ ಶಾಲೆಗಳಿಗೆ ಅಗತ್ಯವಾದ ಸಂಪನ್ಮೂಲವನ್ನು ಒದಗಿಸುತ್ತದೆ. ಕಾರ್ಯಕ್ರಮದ ಪರಿಣಾಮಕಾರಿತ್ವವನ್ನು ಅಳೆಯಲು ಮತ್ತು ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ವಿದ್ಯಾರ್ಥಿಗಳ ತಿಳುವಳಿಕೆ ಮತ್ತು ಅಭ್ಯಾಸಗಳಲ್ಲಿ ಉಂಟಾಗಿರುವ ಸುಧಾರಣೆಗಳನ್ನು ಅಳೆಯಲು ಶಾಲಾ ಮಟ್ಟದಲ್ಲಿ ಜ್ಞಾನ ಮೌಲ್ಯಮಾಪನಗಳನ್ನು ನಡೆಸಲಾಗುತ್ತದೆ.
ಈ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಕಾರ್ಪೊರೇಟ್ ವ್ಯವಹಾರಗಳು ಮತ್ತು ಆಡಳಿತ ವಿಭಾಗದ ದೇಶದ ಮುಖ್ಯಸ್ಥ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಶ್ರೀ ವಿಕ್ರಮ್ ಗುಲಾಟಿ ಅವರು, “ಎಬಿಸಿಡಿ ನೈರ್ಮಲ್ಯ ಕಾರ್ಯಕ್ರಮವು ಸಮುದಾಯದ ಮೇಲೆ ಬೀರಿದ ಪರಿಣಾಮ ಮತ್ತು ವಿದ್ಯಾರ್ಥಿಗಳ ಅರಿವು ಬೆಳೆಸುವಲ್ಲಿನ ಯೋಜನೆಯ ಪರಿಣಾಮ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. ರಾಮನಗರ ಜಿಲ್ಲೆಯಲ್ಲಿ ಎಬಿಸಿಡಿ ಕಾರ್ಯಕ್ರಮ ಮರು ಆರಂಭಿಸಲಾಗುತ್ತಿದ್ದು, ಯುವ ಮನಸ್ಸುಗಳನ್ನು ಬೆಳೆಸುವ ಮತ್ತು ಸ್ವಚ್ಛತೆ ಹಾಗೂ ನೈರ್ಮಲ್ಯ ವಿಚಾರದಲ್ಲಿ ಅವರಿಗೆ ಜೀವನ ಕೌಶಲ್ಯಗಳನ್ನು ಒದಗಿಸುವ ನಮ್ಮ ಬದ್ಧತೆಗೆ ಇದು ಪುರಾವೆಯಾಗಿದೆ. ಶಾಲಾ ನಾಯಕರು, ವಿದ್ಯಾರ್ಥಿಗಳು ಮತ್ತು ಜನ ಸಮುದಾಯಗಳನ್ನು ಸಬಲೀಕರಣಗೊಳಿಸುವ ಮೂಲಕ ತರಗತಿಗಳ ಆಚೆಗೂ ಶಾಶ್ವತ ಪರಿಣಾಮವನ್ನು ಉಂಟು ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರ್ಯಕ್ರಮದಿಂದ ಈಗಾಗಲೇ ಉಂಟಾಗಿರುವ ಸಕಾರಾತ್ಮಕ ಬದಲಾವಣೆಗಳನ್ನು ನೋಡಲು ನಾವು ಹೆಮ್ಮೆಪಡುತ್ತೇವೆ ಮತ್ತು ಮುಂಬರುವ ವರ್ಷಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳಿಗೆ ಅದರ ವ್ಯಾಪ್ತಿಯನ್ನು ವಿಸ್ತರಿಸಲು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಮತ್ತು ಸಮುದಾಯದ ಅಭಿವೃದ್ಧಿ ಮಾಡುವ ವಿಚಾರದಲ್ಲಿ ಟಿಕೆಎಂನ ಬದ್ಧತೆ ಅಚಲವಾಗಿದೆ, ಅಸಾಧಾರಣವಾಗಿದೆ. ಕಂಪನಿಯು ಶಿಕ್ಷಣ ಇಲಾಖೆ, ಸ್ಥಳೀಯ ಅಧಿಕಾರಿಗಳು ಮತ್ತು ಪಾಲುದಾರರೊಂದಿಗೆ ಸುಸ್ಥಿರ ಪರಿಣಾಮ ಉಂಟು ಮಾಡಲು ಮತ್ತು ಜಿಲ್ಲೆಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟು ಮಾಡಲು ಕಾರ್ಯಪ್ರವೃತ್ತವಾಗಿದೆ.