ಎಲ್ಲಾರಿಗೂ ಸ್ವಾತಂತ್ರ್ಯ ದಿನಾಚರಣಿಯ ಶುಭಾಷಯಗಳು ಎಲ್ಲಾರೂ ಮಸ್ತ ಇವತ್ತೇನ ಸುಟ್ಟಿಇರ್ತದ ಆರಾಮ ಮನ್ಯಾಗ ರೆಸ್ಟ ಮಾಡಿರಿ ಅನ್ಕೋತೇನಿ ಮಾಡ್ರಿ ಮಾಡ್ರಿ ಯಾರೂ ಬ್ಯಾಡಾ ಅಂದಿಲ್ಲ, ಏನ್ ಮಾಡೋದ್ರಿ ಸ್ವಾತಂತ್ರ್ಯ ದಿನಾಚರಣಿ ತೊಗೊಂಡು ಗಪ್ಪ ಒಂದ ದಿನಾ ಸುಟ್ಟಿ ಸಿಗತ್ತದ ಅದರಾಗ ಈ ಸಲಾ ಅಂತು ಸೋಮವಾರ ಒಂದ ದಿನಾ ಸುಟ್ಟಿ ಹಾಕಿದ್ರ ಸಾಕು ನಾಲ್ಕದಿನಾ ಸುಟ್ಟಿ ಸಿಗತದ ಭಾಳ ಮಂದಿ ಹಿಂಗ ವಿಚಾರ ಮಾಡಿ ಯಲ್ಲಾರೆ ಟ್ರಿಪ್ ಪ್ಲಾನ ಮಾಡಿರ್ತಾರ.
ಇದರಾಗ ಅವರದೇನ ತಪ್ಪಿಲ್ಲ ಬಿಡ್ರಿ ಅವರಿಗೇನು ಸ್ವಾತಂತ್ರ್ಯ ಅಂದ್ರ ವಾಟ್ಸಾಪ್ ನ್ಯಾಗ ಯಲ್ಲಿಂದಾರೆ ಯಾರಾರೆ ಸ್ಟೇಟಸ್ ಇಡತಾರ ಅದನ್ನ ತಾವು ಡೋನಲೋಡ್ ಮಾಡಕೊಂಡ ಇಟ್ಟ ಬಿಟ್ಟರ್ ಹೌದ ಪಾ ನಾವು ಈ ದೇಶದಾಗ ಇದ್ದೇವಿ ಅಂತ ನಮ್ಮ ಕರ್ತವ್ಯ ಮುಗಿಸಿದ್ಹಂಗ ಆತು ಅಂತ ತಿಳಕೊಂಡ ಬಿಡತೇವಿ. ಆದ್ರ ಸ್ವಾತಂತ್ರ್ಯ ಅಂದ್ರ ಅದಲ್ಲಾ ಇದರ ಸಲವಾಗಿ ಲಕ್ಷಾಂತರ ಮಂದಿ ತಮ್ಮ ಜೀವಾ ಕೊಟ್ಟಾರ ಎಷ್ಟೋ ಮಂದಿ ಹೆಂಡತಿ ಮಕ್ಕಳು ಗಂಡಾ ಅಂತ ನೋಡಲಾರದ ಜೈಲಿಗೆ ಹೋಗ್ಯಾರ ಅವರು ಯಲ್ಲಾ ನಮ್ಮಹಂಗ ಮೋಬೈಲ್ ನ್ಯಾಗ ಸ್ಟೇಟಸ್ಸ ಇಟಗೋತ ಕುತ್ತಿದ್ರು ಅಂದ್ರ ನಾವೂ ಇನ್ನೂ ತನಾ ಹಂಗೆ ಬ್ಯಾರೆದಾವರ ಮಾರಿ ನೋಡಕೋತನ ಕೂಡುದು ಆಗತಿತ್ತು.
ಏನೋ ನಮ್ಮ ದೊಡ್ಡಾವರು ಆ ಟೈಮ್ ನ್ಯಾಗ ಸ್ವಲ್ಪ ಖಟಪಟಿ ಮಾಡಿದ್ರು ಅಂತ ಇವತ್ತ ನಾವೆಲ್ಲಾ ಇವರೇನ್ ಅಂತಾರಲಾ ವಾಕ್ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ ಅಂತೇನ ಜಿಗದಾಡತಾರಲಾ ಅದು ಸಿಕ್ಕದ ಈಗೇನ ಇವರು ದೇಶದಾಗ ಇದ್ದು ದೇಶದ ಬಗ್ಗೆ ಕೆಟ್ಟ ಕೆಟ್ಟ ಮಾತಾಡತಾರ ನೋಡ್ರಿ ಇದೇನಾರೆ ಆಗ ಮಾತಾಡಬೇಕಿತ್ತು ಚರ್ಮಾ ಕಿತ್ತೋಹಂಗ ಬಿಳತಿತ್ತ ಅಂದ್ರ ಗೊತ್ತ ಆಗತಿತ್ತು ಸ್ವಾತಂತ್ರ್ಯ ಎನ್ ಕಥಿ ಅಂತ.
ನೋಡ್ರಿ ನಾವೆಲ್ಲಾ ಭಾಳ ಪುಣ್ಯಾ ಮಾಡೇವಿ ಅದಕ್ಕ ಹಿಂತಾ ದೇಶದಾಗ ಹುಟ್ಟೇವಿ. ಜಗತ್ತಿನ್ಯಾಗ ಎಷ್ಟೋ ದೇಶ ಅವ ಆದ್ರ ಯಾರೂ ತಮ್ಮ ದೇಶಕ್ಕ ತಾಯಿ ಅಂತ ಕರಿಯೋದಿಲ್ಲ ಆದ್ರ ನಮ್ಮ ದೇಶ ಅಷ್ಟ ಹಿಂಗದಲಾ ನಾವು ಈ ಭೂಮಿಗೆ ತಾಯಿ ಅಂತೇವಿ ಇದು ನಾ ಹೇಳು ಮಾತಲ್ಲಾ ಸ್ವತಃ ಶ್ರೀರಾಮಚಂದ್ರ ಹೇಳ್ಯಾನ “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿಗರೀಯಸಿ” ಅಂದ್ರ ಹೆತ್ತ ತಾಯಿ ಮತ್ತ ಹುಟ್ಟಿದಂತಹ ಭೂಮಿ ಸ್ವರ್ಗಕ್ಕಿಂತಾ ಹೆಚ್ಚು ಅಂತ ಅದಕ್ಕ ನಮ್ಮ ದೇಶ ಭಕ್ತಿಅದುಏನ ಅದಲಾಅದು ಬರೇ ಫೇಸ್ಬುಕ್ ವಾಟ್ಸಾಪ್ ಮತ್ತ ಇನ್ಸ್ಟಾಗ್ರಾಂಗೆ ಲೈಕ ಮತ್ತ ಕಮೇಂಟಗೆ ಅಷ್ಟೇ ಸೀಮಿತ ಇರೋದ ಬ್ಯಾಡಾ ಖರೇನ ಒಂದ ಸ್ವಲ್ಪ ದೇಶದ ಬಗ್ಗೆ ವಿಚಾರ ಮಾಡ್ರಿ ದೇಶ ಮತ್ತ ನಾವು ಇಬ್ಬರೂ ಉದ್ಧಾರ ಆಗತೇವಿ.
ಭಾರತ ಮಾತಾಕೀ ಜೈ
Bharat mataki Jai.