ಬೆಂಗಳೂರು : ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಅವರು ಬಿಜೆಪಿ ಹಿರಿಯ ನಾಯಕ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರನ್ನು ಸೋಲಿಸಿದ್ದಾರೆ.
ಸಾಗರ ಖಂಡ್ರೆ (26) ಅವರು ಖೂಬಾ ಅವರನ್ನು 1.28 ಲಕ್ಷ (1,28,875) ಮತಗಳ ಅಂತರದಿಂದ ಸೋಲಿಸಿದ್ದಾರೆ.
ಖೂಬಾ 5.37 ಲಕ್ಷ ಮತಗಳನ್ನು ಪಡೆದರೆ, ಸಾಗರ್ 6.66 ಲಕ್ಷ ಮತಗಳನ್ನು ಪಡೆದರು.
ಬಿಜೆಪಿ ಟಿಕೆಟ್ ಘೋಷಿಸುವ ಮೊದಲು ಖೂಬಾ ತೀವ್ರ ಆಂತರಿಕ ವಿರೋಧವನ್ನು ಎದುರಿಸಬೇಕಾಯಿತು.
ಸಾಗರ ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಪುತ್ರ.