ಆಸ್ತಿಕರಿಗೆ ದೇವರ ಇರುವಿಕೆ ಸಾಬೀತಾಗಲು, ಮಾನವ ನಿತ್ಯ ಜೀವನದಲ್ಲಿ ಹಲವು ಸಂಗತಿಗಳು ನಡೆದು ಹೋಗುತ್ತದೆ. ಚಿಂತಿಸುವವರಿಗೆ ದ್ರಷ್ಟಾoತವಿದೆ ಎನ್ನುವಂತೆ, ಇತ್ತೀಚೆಗೆ ದೇವರ ನಂಬಿದವರ ಕೈ ಬಿಡುವುಬಿದಿಲ್ಲ ಎನ್ನುವುದಕ್ಕೆ, ನಾ ಕೇಳಲ್ಪಟ್ಟ ಘಟನೆಯೊಂದು ಸಾಕ್ಷಿಯಾಯಿತು.
ನನ್ನ ತಾಯಿ ಆತ್ಮೀಯರೊಬ್ಬರು ತನ್ನಲ್ಲಿಗೆ ಕೌನ್ಸ್ಲಿಂಗ್ ಗಾಗಿ ಬಂದಿದ್ದ ಒಬ್ಬ ಮಹಿಳೆಯ ವಿಷಯವನ್ನು ಈ ರೀತಿ ಬನ್ನಿಸಿದ್ದರು. ” ಕರ್ನಾಟಕದಲ್ಲಿ ಜನಿಸಿದ್ದ ಆಕೆ ಚಿಕ್ಕಂದಿನಲ್ಲೇ ತಂದೆ ತಾಯಿ ಯನ್ನು ಕಳಕೊಂಡಿದ್ದಳು. ಪುಟ್ಟ ಹುಡುಗಿಯಗಿದ್ದ ಅವರನ್ನು ಮಾವ ಬೇರೆ ರಾಜ್ಯದ ಒಬ್ಬನಿಗೆ ಮಾರಿ ಬಿಟ್ಟಿದ್ದ. ನಂತರದ ದಿನಗಳಲ್ಲಿ ಅವರಿಬ್ಬರ ಮಾಡುವೆಯೂ ನಡೆದು ಮಕ್ಕಳಿದ್ದವು. ಕಾಲ ಕ್ರಮೇಣ ಗಂಡನಾದವನು ತನ್ನ ವರಸೆಯನ್ನು ಬದಲಾಯಿಸಿದ್ದ. ಹೆಂಡತಿಯ ಮೇಲೆ ದೌರ್ಜನ್ಯ ದೈನಂದಿನ ಪರಿಪಾಟವಾಯಿತು. ಗಂಡನ ಕೃತ್ಯಕ್ಕೆ ಬೇಸತ್ತು, ತನ್ನ ಮಕ್ಕಳನ್ನು ಕರಕೊಂಡು ಆತ್ಮಹತ್ಯೆ ಮಾಡಬೇಕೆಂದು ಆಕೆ ನಿರ್ಧರಿಸಿದ್ದಳು.
ಇಲ್ಲಿ ಊರಿನಲ್ಲಿ ಆಕೆಗೊಬ್ಬ ಸಹೋದರನಿದ್ದ, ವರ್ಷಗಳ ಕಾಲ ತನ್ನ ಸಹೋದರಿಯ ಪತ್ತೆಯೇ ಅರಿಯದಿದ್ದ ಸಹೋದರನಿಗೆ, ಕೆಲವು ದಿನಗಳಿಂದೀಚೆ ಆಕೆಯ ನೆನಪು ಪದೇ ಪದೇ ಕಾಡುತ್ತಿತ್ತು. ಯಾವತ್ತೂ ಇರದ ತಳ -ಮಳ ದುಗುಡ. ಏನು ಮಾಡುವುದೆಂದು ತೋಚದೆ, ಒಮ್ಮೆ ಯೋಚಿಸಿ ತನ್ನ ತಂದೆಯ ಹಳೆಯ ನಂಬರಿಗೆ ರಿಂಗಾಯಿಸುತ್ತಾನೆ. ಆಶ್ಚರ್ಯ! ಅತ್ತ ಕಡೆಯಿಂದ ವರ್ಷಗಳ ಕಾಲ ಕಳೆದುಹೋಗಿದ್ದ ಸಹೋದರಿಯ ಧ್ವನಿ. ಆತ್ಮಹತ್ಯೆಗೆಂದು ಯೋಚಿಸಿದ್ದ ಮನಕ್ಕೆ ಕಳೆದು ಹೋಗಿದ್ದ ಬಂಧವನ್ನು ಆ ಸೃಷ್ಟಿಕರ್ತ ಮತ್ತೇ ಪ್ರಧಾನಿಸಿದ.
ಇಂದೊಮ್ಮೆ ಯೋಚಿಸಿದರೆ ಇವೆಲ್ಲಾ ನಡೆಯುವುದು ನಿಜವೇ ಎಂದೆಸುತ್ತದೆ. ಯಾವುದೋ ಚಲನಚಿತ್ರದ ಕಥೆ ಇರಬಹುದು ಎಂದೂ ಎನಿಸುವುದುoಟು. ಆದರೆ ದೇವರ ಇರುವಿಕೆ ಮತ್ತು ನಂಬಿದ ಜೀವವನ್ನು ಸೃಷ್ಟಿಕರ್ತ ಕೈಬಿಡಲಾರ ಎನ್ನುವುದಕ್ಕೆ ಪೂರಾವೆಯಾಗಿ , ಈ ಘಟನೆಗಿಂತ ಬೇರೆ ಉದಾಹರಣೆ ಬೇಕಿಲ್ಲ.