ಲಕ್ಷ್ಮಿಯೂ ನೀನೆ ದುರ್ಗಿಯೂ ನೀನೆ. ತಾಯಿ, ತಂಗಿ, ಸಂಗತಿಯಾಗಿ ನಮ್ಮ ಜೀವನವನ್ನು ಪೋಷಿಸುವ ಹೆಣ್ಣೆ ನಿನಗೊಂದು ಶತ ಕೋಟಿ ನಮನ ಎಂದು ಹೇಳುವ ಮಾತುಗಳು ಯಾವುದೇ ಕವಿ ವರ್ಣನೆಗಿಂತಲೂ ಕಮ್ಮಿಇಲ್ಲ ಅನಿಸುತ್ತದೆ.
ಆದರೆ ಅದೇ ಹೆಣ್ಣನ್ನು ಬಹಿರಂಗವಾಗಿ ನಗ್ನಗೊಳಿಸಿ ಮೆರವಣಿಗೆ ಮಾಡಿರುವ ಸಂಗತಿಯು ಮನಸ್ಸಿನ ನಗ್ನನತೆಯನ್ನು ಎತ್ತಿತೋರಿಸಿದಂತಿದೆ. ದೇಶದಲ್ಲಿ ವಿಶಿಷ್ಟ ಸ್ಥಾನ ಮಾನವನ್ನು ಮಹಿಳೆಗೆ ನೀಡಿದೆ ಇದೆಲ್ಲವನ್ನೂ ಮೀರಿ ನಗ್ನತೆ ಪ್ರಕರಣ ಇಂದು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಜನರ ಮನಸ್ಸಿನಲ್ಲಿ ಆಶಾಂತಿಯನ್ನು ಮೂಡಿಸಿದೆ.
ಇಲ್ಲಿ ನಗ್ನವಾಗಿರುವುದು ಮಹಿಳೆಯರಲ್ಲ ನಮ್ಮ ಸಮಾಜ. ಧರ್ಮದಲ್ಲಿ ಒಂದು, ಮಾತಿನಲ್ಲಿ ಒಂದು , ಮನಸ್ಸಿನಲ್ಲಿ ಒಂದು , ಕಡೆಗೆ ತಮ್ಮ ಕೃತ್ಯಗಳಲ್ಲಿ ಇನ್ನೊಂದು ಎಂಬಂತೆ ನಡೆದುಕೊಳ್ಳುತ್ತಿದೆ ಸಮಾಜ.
ಮಣಿಪುರದ ಮಹಿಳೆಯರನ್ನು ನಗ್ನಗೊಳಿಸಿ ಮೆರವಣಿಗೆ ಮಾಡಿ ಲೈಗಿಂಕ ದೌರ್ಜನ್ಯ ವೆಸಗಿದ ಪ್ರಕರಣವು ಬೆಳಕಿಗೆ ಬಂದು ದೇಶ ವಿದೇಶವನ್ನೇ ಬೆಚ್ಚಿಬೀಳಿಸಿದೆ. ಇದರ ಹಿಂದೆನೆ ಮತ್ತೊಂದು ಪ್ರಕರಣ ಬೆಳಕಿಗೆ ಬಂದು ಎಲ್ಲರ ಮನಸ್ಸಿಗೆ ಅಪ್ಪಳಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಪೈಶ್ಯಾಚಿಕ ಕೃತ್ಯವೊಂದು ಬೆಳಕಿದೆ ಬಂದಿದೆ. ಬುಡಗಟ್ಟು ಸಮುದಾಯದ ಮಹಿಳೆಯರನ್ನು ಕಳ್ಳತಣದ ಶಂಕೆಯಲ್ಲಿ ಅರೆಬೆತ್ತಲೆಗೋಳಿಸಿ ಮನಬಂದಂತೆ ಥಳಿಸಿದ ಘಟನೆ ನಡೆದಿದೆ.
ಈ ಘಟನೆಯ ವಿಡಿಯೋವನ್ನು ಸ್ವತಃ ಬಿಜೆಪಿಯ ಸಾಮಾಜಿಕ ಜಾಲತಾಣ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ಅಮೀತ್ ಮಾಲವಿಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಜೋತಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಿನದಿಂದ ದಿನಕ್ಕೆ ನಮ್ಮ ಸಂಸ್ಕಾರಗಳು ಮಣ್ಣು ಪಾಲಾಗುತ್ತಿದೆ. ಸಮಾಜೀಕ ಮೌಲ್ಯಗಳು, ಮಾನವೀಯತೆಯು, ನಾಗರೀಕ ಸಮಾಜದ ಕಾನೂನು ವ್ಯವಸ್ಥೆಗಳು ಎಲ್ಲವು ನಾಶವಾದಂತಿದೆ.
ಮಣಿಪುರದಲ್ಲಿ ಮಹಿಳೆಯರ ನಗ್ನ ಮೆರವಣಿಗೆ ಮಾಡಿದ ಆರೋಪಿಯ ಮನೆಗೆ ಮಹಿಳೆಯರ ದಂಡು ಬೆಂಕಿ ಹಚ್ಚಿದಾಯಿತ್ತು. ಆದರೆ ಇಡೀ ರಾಜ್ಯದ ಹಿಂಸಾಚಾರದ ಹಿಂದೆ ಇರುವ ವಿಕೃತ ಮನಸ್ಸನ್ನು, ಮಣಿಪುರದ ಶಾಂತಿಯನ್ನು ಬಯಸದ ಮನಸ್ಸನ್ನು ಕೂಡ ದಮನಮಾಡಲೇ ಬೇಕಾಗಿದೆ. ಇಲ್ಲವಾದಲ್ಲಿ ಮಣಿಪುರ ಭಾರತದ ನಕ್ಷೆಯಿಂದ ದೂರವಾಗಬಹುದು.
ನಿಗೂಢವಾಗಿರುವ ಸಂಗತಿಯೆಂದರೆ ಇಲ್ಲಿನ ಸರ್ಕಾರ, ಕಾನೂನು, ನಿಯೋಜಿತ ಸೇನೆ ಎಲ್ಲವು ಈ ಹಿಂಸಾಚಾರವನ್ನು ಹತ್ತಿಕ್ಕುವ ಪ್ರಯತ್ನದಲ್ಲಿ ವಿಫಲವಾಗಿರುವುದು. ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರವನ್ನು ತಡೆಯಲು ಯಾಕೆ ಇಷ್ಟೊಂದು ಮೀನಮೇಶ. ಈ ಹಿಂಸಾಚಾರದ ಜ್ವಾಲೆ ನೆರೆ ರಾಜ್ಯಗಳಿಗೆ ತಟ್ಟದಿರಲಿ.