“ ಒಂದಾಗಿದ್ದೇವೆ ನಾವು” ಇದು ಪತ್ರಿಕೆಯ ಮುಖ್ಯ ಪುಟದಲ್ಲಿ ಪ್ರಕಟವಾದ ಜಾಹೀರಾತು. ಇದು ಭಾರತವನ್ನು ವಿಶ್ವ ಗುರುವನ್ನಾಗಲಿ ಅಥವಾ ಭಾರತದಲ್ಲಿನ ಜಾತಿ ವ್ಯವಸ್ಥೆ ಅಥವಾ ಬಡತನವನ್ನು ನಿರ್ಮೂಲನೆ ಮಾಡಲು ಎಂದು ನೀವು ತಿಳಿದಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಇವರೆಲ್ಲರೂ ಒಂದಾಗಿದ್ದು “ ಛಪ್ಪನ ಇಂಚಿನ ಛಾತಿಯನ್ನು ಅಂದರೆ “ 56 ಇಂಚಿನ ಎದೆಯವನನ್ನು ಸೋಲಿಸಲು ಒಂದಾಗಿವೆ ಈ ಪಕ್ಷಗಳು. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಈ ಮಹಾಘಟ ಬಂಧನ ಅಸ್ತಿತ್ವಕ್ಕೆ ಬಂದಿತ್ತು ಆದರೆ ಪ್ರಧಾನಿ ಅಭ್ಯರ್ಥಿ ಯಾರೆಂದು ಸರ್ವಾನುಮತ ದಿಂದ ತೀರ್ಮಾನಕ್ಕೆ ಬರದೆ ಇದ್ದ ಕಾರಣ ಈ ಮೈತ್ರಿಯು ಅಲ್ಲೇ ಅಂತ್ಯಗೊಂಡಿತ್ತು. ( ತಮ್ಮಲ್ಲೇ ಸರ್ವಾನು ಮತದಿಂದ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗದ ಇವರು ದೇಶಕ್ಕೆ ಸೂಕ್ತ ಆಡಳಿತ ನೀಡ ಬಹುದೆ ಎಂಬ ವಿಚಾರ ಬರುವುದು ಸಹಜ) ಆದರೆ ಏನು ಮಾಡಲು ಸಾಧ್ಯವಿಲ್ಲ. ಪಾಂಡವರ ಸೈನ್ಯ ಮತ್ತು ಕೌರವರ ಸೈನ್ಯ ಯುದ್ಧಕ್ಕೆ ಸಜ್ಜಾಗಿ ನಿಂತಿರುವಂತೆ ಲೋಕಸಭಾ ಎಂಬ ಚುನಾವಣಾ ಕುರುಕ್ಷೇತ್ರದಲ್ಲಿ ಮತದಾರ ಎಂಬ ಶ್ರೀಕೃಷ್ಣ ಪರಮಾತ್ಮನ ಆಗಮನವಾಗಬೇಕಿದೆ ಮತ್ತು ದೇಶದಲ್ಲಿ ಶಾಂತಿ, ಸುಭೀಕ್ಷೆ, ಧರ್ಮದೊಂದಿದೆ ದೇಶವನ್ನು ಮುನ್ನಡೆಸುವ ಸಾಮರ್ಥ್ಯವಿರುವ ರಾಜ ಪುನಃ ಅಧಿಕಾರವನ್ನು ಹಿಡಿಯಲು ಮತದಾರ ಪ್ರಭುವಿನ ಬಳಿ ರಾಜಕಾರಣಿಬರಲಿದ್ದಾರೆ.
ಈ 2024ರ ಲೋಕಸಭಾ ಚುನಾವಣೆ ಅತ್ಯಂತ ವಿಭಿನ್ನವಾದ ರೀತಿಯಲ್ಲಿ ನಡೆಯಲಿದೆ ಎಂದು ಎಲ್ಲ ರಾಜಕೀಯ ವಿಶ್ಲೇಷಕರ ಅನಿಸಿಕೆಯಾಗಿದೆ. ಕಾರಣ ಇಲ್ಲಿ ಯುಪಿಎ ಒಕ್ಕೂಟದ ಮಿತ್ರ ಪಕ್ಷಗಳು ಅಧಿಕಾರವನ್ನು ಹಿಡಿಯುವ ಮೂಲ ಉದ್ಧೇಶವೇ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಹೊರಗಿಡುವುದಾಗಿದೆ ಎಂದು ಅನೇಕ ಬಾರಿ ವಿವಿಧ ಘಟ ಬಂಧನದ ನಾಯಕರು ತಿಳಿಸಿದ್ದಾರೆ. ಅಧಿಕಾರ ಯಾರಿಗೆ ಇರಲಿ ಆದರೆ ಮೋದಿಗೆ ಮಾತ್ರ ದೊರೆಯದಿರಲಿ ಎಂಬ ಉದ್ದೇಶದಿಂದ ಪ್ರತಿ ಸಾರಿ ಮೂರು ಘಟಕಗಳು ಅಂದರೆ ಯುಪಿಎ, ಎನ್ಡಿಎ, ಹಾಗೂ ತೃತೀಯ ರಂಗಗಳ ಮಧ್ಯೆ ನಡೆಯುತ್ತಿದ್ದ ಚುನಾವಣೆ ಈಗ ತೃತೀಯ ಹಾಗೂ ಯುಪಿಎಗಳು ಒಂದಾಗಿ ಚುನಾವಣಾ ಅಖಾಡಕ್ಕೆ ಇಳಿಯಲಿವೆ. ಇದರಿಂದ ಅವರಿಗಾಗುವ ಮತಗಳ ಶೇಕಡಾವಾರು ಕೊರತೆಯನ್ನು ಅನುಭವಿಸುವುದು ಮಾತ್ರ ಖಂಡಿತ. ಎಕೆಂದರೆ ಮತದಾರ ಪಕ್ಷವನ್ನು ನೋಡದೆ ವ್ಯಕ್ತಿಯನ್ನು ನೋಡಿ ಮತಹಾಕುವಷ್ಟು ಜಾಣನಾಗಿದ್ದಾನೆ. ಉದಾಹರಣೆಗೆ ಕರ್ನಾಟಕದ ಚುಣಾವಣೆಯನ್ನೆನೋಡಿದರೆ ತಿಳಿಯುತ್ತದೆ. ಇಲ್ಲಿ ಮೋದಿಯ ಹವಾ ನಡೆಯುವುದಿಲ್ಲ ಎಂದು ಹಾರಾಡುವ ರಾಜ್ಯದ ರಾಜಕಾರಣಿಗಳು 2019ರ ಚುನಾವಣೆಯಲ್ಲಿ ಇದೇ ಮೋದಿಗೆ ಹಿಂದೆಂದಿಗಿಂತ ಹೆಚ್ಚು ಮತವನ್ನು ನೀಡಿ ಜಯದ ಮಾಲೆಯನ್ನು ಹಾಕಿದ್ದ ಎನ್ನುವುದನ್ನು ಮರೆಯಬಾರದು.
ದೇಶದ ಪರಿಸ್ಥಿತಿ ಹೇಗಿದೆ ಎಂದರೆ ಮಹಾಘಟ ಬಂಧನದ ಮೂಲಕ ವಿರೋಧ ಪಕ್ಷಗಳು ತಾವೇ ಮೋದಿ ಒಬ್ಬ ಸಮರ್ಥ ನಾಯಕ ಅವರನ್ನು ಎದುರಿಸಲು ಎಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲವೆಂದು ತಾವೇ ಒಪ್ಪಿಕೊಂಡು ಈ ಮಹಾ ಘಟ ಬಂಧನವನ್ನು ರಚನೆ ಮಾಡಿದ್ದಾರೆ ಎಂದು ತಿಳಿಯಲು ಜನರಿಗೆ ಬಹಳಷ್ಟು ಸಮಯ ಬೇಕಾಗಿಲ್ಲ. ಆದರೂ ಇವರು ಮಹಾಘಟ ಬಂಧನದ ಮೂಲಕ ಮೋದಿ ಹಾಗೂ ಬಿಜೆಪಿಯನ್ನು ಹಣಿಯಲು ಪ್ರಯತ್ನಿಸುತ್ತಿದ್ದೆವೆ ಎಂಬ ಭ್ರಮೆಯಲ್ಲಿದಾರೆ. ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ ಈ ಎಲ್ಲ ಪಕ್ಷಗಳು ಒಂದಾರೆ ಲಾಭ ಮಾತ್ರ ಬಿಜೆಪಿಗೆ ಎಂಬುದನ್ನು ಮರೆಯಬಾರದು. ಕಾರಣ ಇವರು ನೀಡುತ್ತಿರುವ ಹೇಳಿಕೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಂಡು ಮತವನ್ನು ಸೇಳೆಯುವಲ್ಲಿ ಮೋದಿ ಮತ್ತು ಭಾರತೀಯ ಜನತಾ ಪಾರ್ಟಿ ಎತ್ತಿದ ಕೈ ಎಂಬುದರಲ್ಲಿ ಎರಡು ಮಾತಿಲ್ಲ.
ಬಿಜೆಪಿಯ ಹಿಂದಿನ ಸೀಟು ಗೆದ್ದಿರುವ ಪ್ರದೇಶಗಳನ್ನು ಅವಲೋಕಿಸಿದರೆ ಅವುಗಳಲ್ಲಿ ಹೆಚ್ಚಿನವು ಹಿಂದಿ ಭಾಷೆಯನ್ನು ಮಾತನಾಡುವ ಪ್ರದೇಶದಿಂದಲೇ 90% ಲೋಕಸಭಾ ಸೀಟಗಳನ್ನು ಗೆದ್ದಿದ್ದಾರೆ ಆದರೆ ಈಗಿನ ಮಹಾಘಟ ಬಂಧನದಲ್ಲಿರುವ ಪಕ್ಷಗಳನ್ನು ನೋಡಿದರೆ ಇವೆಲ್ಲವು ಹಿಂದಿ ಮಾತನಾಡುವ ಪ್ರದೇಶದಿಂದಲೇ ಬಂದಂತಹ ಪಕ್ಷಗಳಾಗಿವೆ ಹೀಗಿರುವಾಗ ಇವು ಭಾರತೀಯ ಜನತಾ ಪಕ್ಷ ಅಥವಾ ಮೋದಿಯವರಿಗೆ ಯಾವ ರೀತಿಯಲ್ಲಿ ಎದುರಾಳಿ ಆಗಲೂ ಸಾಧ್ಯ ? 2014 ಮತ್ತು 2019ರಲ್ಲಿ ಸ್ವತಂತ್ರ್ಯವಾಗಿ ಅಧಿಕಾರವನ್ನು ಹಿಡಿಯುವಷ್ಟು ಸರಳ ಬಹುಮತ ಬಿಜೆಪಿಗೆ ಇದ್ದರೂ ಸಹ ಅದು ತನ್ನ ಮೈತ್ರಿ ಪಕ್ಷಗಳನ್ನು ಕೈ ಬಿಡಲಿಲ್ಲ ಆ ಕಾರಣವೇ ಇಂದು ಬಿಜೆಪಿಗೆ ವರವಾಗಿ ಪರಿಣಮಿಸಿದೆ. ಕಾರಣ ಎಲ್ಲ ರಾಜ್ಯಗಳಲ್ಲಿಯೂ ಬಿಜೆಪಿಯು ತನ್ನ ಮಿತ್ರ ಪಕ್ಷಗಳನ್ನು ಹೊಂದಿದ್ದು ಅದು ಸಹ ಈ ಮಹಾಘಟ ಬಂಧನಕ್ಕೆ ನಷ್ಟವನ್ನು ಉಂಟುಮಾಡುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ.
ಮೋದಿಯ ಜನಪ್ರಿಯತೆ ದೇಶದಲ್ಲಿ ಮಾತ್ರವಲ್ಲದೆ ಸಂಪೂರ್ಣ ವಿಶ್ವದಲ್ಲಿಯೇ ವ್ಯಾಪಿಸಿದೆ ಇದನ್ನು ಅವರ ವಿರೋಧಿಗಳು ಸಹ ನಂಬುತ್ತಾರೆ. ಸಮೀಕ್ಷೆಗಳ ಪ್ರಕಾರ ದೇಶದಲ್ಲಿರುವ ಯುವ ಮತದಾರರ ಸಂಪೂರ್ಣವಾಗಿ ಮೋದಿ ಮಯವಾಗಿದ್ದಾನೆ. ಮತ್ತು ಬಿಜೆಪಿಗೆ ಬೇಕಾಗಿರುವುದು ಅದೇ ಇನ್ನೂ 10 ವರ್ಷಗಳು ಕಳೆದರೂ ಈ ಯುವಕರ ಮನಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲದಷ್ಟು ಈಗಾಗಲೇ ಮೋದಿ ಯುವ ಮತದಾರರ ಮನಸ್ಸನ್ನು ಸೆಳೆದಿದ್ಧಾರೆ. ಇದರಿಂದ ಬಿಜೆಪಿ ಯಾರ ಬೆಂಬಲವಿಲ್ಲದೆಯೂ ಸ್ವತಂತ್ರವಾಗಿ ಅಧಿಕಾರವನ್ನು ಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ ಬಿಜೆಪಿಗೆ ಮೋದಿಯೊಂದೆ ಅಸ್ತ್ರ: ಬಿಜೆಪಿ ಮತ್ತು ಹಿಂದಿನಿಂದಲೂ ಇದನ್ನೇ ಮಾಡುತ್ತ ಬಂದಿದೆ.
2004ರ ಕರ್ನಾಟಕದ ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾವಣೆ ಎರಡು ಒಂದೇ ವರ್ಷದಲ್ಲಿ ನಡೆಯುತ್ತಿತ್ತು ನೆನಪಿಸಿಕೊಳ್ಳಿ Vajpayee Karnataka`s Hero! ಮತ್ತು Please vote for Vajpayee!! ಎಂಬ ಘೋಷಣೆ ಮತ್ತು ಹೊಸ ಹುರುಪಿನೊಂದಿಗೆ ಚುನಾವಣೆಗೆ ಮುನ್ನುಗಿತ್ತು ಆದರೆ ಅಲ್ಲಿ ಆದ್ದದ್ದು ಬೇರೆ ಬಿಜೆಪಿ ಹೀನಾಯವಾಗಿ ಸೋಲನ್ನು ಅನುಭವಿಸಿತು. ಹೀಗೆ ಕರ್ನಾಟಕದಲ್ಲಿ ಬಿಜೆಪಿ ಎಂದಿಗೂ ತನ್ನ ಸ್ವಂತ ಬಲದ ಮೇಲೆ ಮತವನ್ನು ಕೇಳಿಲ್ಲ ಎಂದರೆ ಸುಳ್ಳಾಗಲಾರದು. ಅದರಂತೆ ಈ ಬಾರಿಯು ಸಹ ಕೇವಲ ಮೋದಿ ಮತ್ತು ಅಮಿತ ಷಾ ಮೇಲೆಯೇ ಅವಲಂಬಿತವಾಗಿ ಚುನಾವನೆಯನ್ನು ಎದುರಿಸಿದ್ದರಿಂದ ಸೋಲನ್ನು ಅನುಭವಿಸಬೇಕಾಗಿ ಬಂತು ಆದರೆ ಲೋಕಸಭಾ ಚುನಾವಣೆ ಹಾಗಲ್ಲಇದರಲ್ಲಿ ದೇಶಕ್ಕೆ ದೇಶವೇ ಪಾಲ್ಗೋಂಡು ಮತದಾನ ಮಾಡಲಿದೆ.
ರಾಜ್ಯದ ರಾಜಕಾರಣ ಇದರ ಮೇಲೆ ಯಾವದೇ ಪರಿಣಾಮ ಬೀರದಂತೆ ನೋಡಿಕೋಳ್ಳುವುದು ಕಾಂಗ್ರೆಸ್ಸ ಮತ್ತು ಬಿಜೆಪಿ ಎರಡು ಪಕ್ಷಗಳಿಗೆ ಅದು ಅತ್ಯಂತ ಪ್ರಮುಖವಾದ ಕಾರ್ಯವಾಗಿದೆ. ಇಷ್ಟೇಲ್ಲ ನಡೆದರು INDIA ಎಂಬ ಹೆಸರಿನೊಂದಿಗೆ ಮುನ್ನಡೆಯುತ್ತಿರುವ ಮಹಾಘಟಬಂಧನಕ್ಕೆ ಆರಂಭಿಕ ಆಘಾತಕ್ಕೆ ಎದುರಾಗಿದೆ ಅದೆನೆಂದರೆ ನಮ್ಮ ದೇಶದಲ್ಲಿ The Emblems & Names (Prevention of Improper Use) 1950 ಎಂಬ ಕಾಯಿದೆ ಇದೆ. ಈ ರೀತಿ I N D I A ಎಂದು ಕರೆದುಕೊಳ್ಳುವುದು ಈ ಕಾಯ್ದೆಯ ಸೆಕ್ಷನ್ 2(c) ಮತ್ತು ಶೆಡ್ಯೂಲ್ 1(4) & (7) ಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಈಗಾಗಲೇ ಆಕ್ಷೇಪಣೆಯನ್ನು ಎತ್ತಿದೆ. ಬಿಜೆಪಿಯ ಮುಂದಿನ ನಡೆ ಅತ್ಯಂತ ಸ್ಪಷ್ಟವಾಗಿದೆ ಪ್ರಾದೇಶಿಕ ಪಕ್ಷಗಳನ್ನು ದೂರಮಾಡಿ ದ್ವೀಪಕ್ಷೀಯ ಚುನಾವಣೆಯನ್ನುನಡೆಸುವ ಕಾರ್ಯವನ್ನು ಮಾಡುತ್ತಿದೆ. ಆದರೂ ಸಹಿತ 24 ಪಕ್ಷಗಳು ಮತ್ತು 56 ಇಂಚು ಎದೆಯವನ ಮಧ್ಯದಲ್ಲಿ ನಡೆಯುತ್ತಿರುವ ಈ ಮಹಾ ಸಂಗ್ರಾಮದಲ್ಲಿ ಧರ್ಮವು ಜಯಶಾಲಿಯಾಗಲಿ ಎಂಬುದೇ ನಮ್ಮ ಆಶಯ.