ಶಿವಮೊಗ್ಗ: ದಿನೇ ದಿನೇ ರಾಜ್ಯದಲ್ಲಿ ಚುನಾವಣೆ ಚಟುವಟಿಕೆ ಬಿರುಸುಗೊಂಡಿದ್ದು ರಾಜಕೀಯ ನಾಯಕರು ಪ್ರಚಾರ, ರ್ಯಾಲಿ, ನಾಮಪತ್ರ ಸಲ್ಲಿಕೆಯಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
ಏಪ್ರೀಲ್ 20 ನಾಮಪತ್ರ ಸಲ್ಲಿಕೆಗೆ ಕೊನೆ ದಿನ. ರಾಜ್ಯದ ಎಲ್ಲ ನಾಯಕರು ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಬಿಜೆಪಿಯ ಹಾಟ್ ಬೆಡ್ ಆಗಿರುವ ಶಿವಮೊಗ್ಗದ ಅಭ್ಯರ್ಥಿ ಇನ್ನು ಘೋಷಣೆ ಆಗದಿರುವುದು ಅಚ್ಚರಿಯನ್ನಲ್ಲದೆ ಕುತೂಹಲವನ್ನೂ ಮೂಡಿಸಿದೆ.
ಇದರ ಮಧ್ಯೆ ಇಂದು ಶಿವಮೊಗ್ಗ ಬಿಜೆಪಿಯ ಒಂದು ಪತ್ರಿಕಾ ಪ್ರಕಟಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ. ಅದರಲ್ಲಿ ಅಭ್ಯರ್ಥಿಯ ಹೆಸರು ಘೋಷಿಸದೆ ಕೇವಲ ನಾಳೆ ನಾಮಪತ್ರ ಸಲ್ಲಿಕೆಗೆ ಆಹ್ವಾನ ನೀಡಲಾಗಿದೆ.
ಇದು ವಿಪಕ್ಷಗಳ ನಗೆ ಪಾಟಲಿಗೆ ಗುರಿಯಾಗಿದೆ. ಇನ್ನು ಬಿಜೆಪಿ ಯವರು ಅಭ್ಯರ್ಥಿ ಹೆಸರು ಇಲ್ಲದೆ ನಾಮಪತ್ರದ ಆಮಂತ್ರಣ ನೀಡಿರುವುದು ಬಿಜೆಪಿಯ ತಾಕತ್ತು ಎಂದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಈ ಸಲದ್ದು ಚುನಾವಣೆ ರಾಜ್ಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದು, ಅದರಲ್ಲೂ ಶಿವಮೊಗ್ಗದ ಕಮಲದ ಕೈ ಹಿಡಿಯುವರ್ಯಾರು ಎಂದು ನಾಳೆವರೆಗೂ ಕಾದು ನೋಡಬೇಕಿದೆ.