ಮಂಗಳೂರು-ಮುಂಬಯಿ ನಡುವೆ 1998 ರ ಮೇ 1 ರಂದು ಮೊದಲ ಬಾರಿಗೆ ಓಡಾಟ ಶುರು ಮಾಡಿದ್ದ ಮತ್ಸ್ಯಗಂಧ ಎಕ್ಸ್ ಪ್ರೆಸ್ ರೈಲು ಮೇ 1, 2023 ರಂದು ತನ್ನ 25ನೇ ವರ್ಷವನ್ನು ಪೂರ್ಣಗೊಳಿಸಿಬೆಳ್ಳಿ ಹಬ್ಬ ಆಚರಿಸಿಕೊಂಡಿದೆ.
ಕೊಂಕಣ ರೈಲು ಮಾರ್ಗಗಳು ನಿರ್ಮಾಣಗೊಳ್ಳುವ ಮೊದಲು ಮುಂಬಾಯಿಗೆ ಹೋಗುವ ಜನರಿಗೆ ಬಸ್ಸುಗಳೆ ಗತಿ. ಇನ್ನೂ ಖಾಸಗಿ ಬಸ್ಸುಗಳ ದರ್ಬಾರು ಹೇಳತೀರದು. ತಾವು ಆಡಿದ್ದೆ ಆಟವಾಗಿತ್ತು. ನಿಗದಿತ ಸಮಯಕ್ಕೆ ಪ್ರಯಾಣವನ್ನು ಬೆಳೆಸದೆ ಸರಿಯಾದ ಸಮಯಕ್ಕೆ ಊರನ್ನು ತಲುಪಲು ಸಾಧ್ಯವಾಗುತ್ತಿರಲ್ಲಿ. ಇತ್ತ ದಾರಿ ಮಧ್ಯೆ ಊಟ ತಿಂಡಿಗಳಿಗೆ ಸರಿಯಾದ ಹೋಟೆಲ್ ವ್ಯವಸ್ಥೆಗಳು ಇಲ್ಲದಂತಹ ಸ್ಥಳಗಳಲ್ಲಿ ಬಸ್ಸುಗಳ ನಿಲುಗಡೆ.
ಹೀಗೆ ಇಷ್ಟೆಲ್ಲಾ ಕಷ್ಟಪಟ್ಟು ಪ್ರಯಾಣಿಸುತ್ತಿದ್ದ ಜನರ ಪಯಾಣ ಮತ್ಸ್ಯ ಗಂಧ ರೈಲು ಓಡಾಟವನ್ನು ಪ್ರಾರಂಭಿಸಿದ ಮೇಲೆ ಸುಗಮ ವಾಗಿತ್ತು. ಮುಂಬಾಯಿಗೆ ಹೋಗುತ್ತಿದ್ದ ಜನರು ಮನೆಯಿಂದಲೇ ತೆಗೆದುಕೊಂಡ ಹೋದ ಊಟ ತಿಂಡಿಯನ್ನು ನಿಶ್ಚಿಂತೆಯಿಂದ ಸೇವಿಸುತ್ತಾ ಯಾವುದೇ ಜಂಜಾಟವಿಲ್ಲದೆ ಸುಖಮಯ ಪ್ರಯಾಣ ಮಾಡುತ್ತಿದ್ದರು.
ಕರಾವಳಿ ಕನ್ನಡಿಗರಿಗೆ ಊರಿಗೆ ಹೊರಟು ನಿಂತರೆ, ಮತ್ಸ್ಯ ಗಂಧ ರೈಲು ಮೊದಲು ನೆನಪಿಗೆ ಬರುವುದು.ಇನ್ನೂ ಕರಾವಳಿಯವರು ಮುಂಬಯಿಯಲ್ಲಿ ಬದುಕು ಕಂಡುಕೊಂಡವರು, ಕೆಲವರು ಅಲ್ಲಿಯೇ ನೆಲೆಸಿರುವವರು, ಉದ್ಯೋಗ,ವ್ಯಾಪಾರ ಇನ್ನೂ ಹಲವು ವಿಷಯಗಳಿಗೆ ಮುಂಬಯಿಯನ್ನು ಅವಲಂಬಿತ ವಾಗಿದ್ದವರೇ ಹೆಚ್ಚಾಗಿ ಇದುದರಿಂದ. ಅಂತವರಿಗೆ ಮತ್ಸ್ಯ ಗಂಧದಿಂದ ಒಡಾಟ ಸರಾಗವಾಯಿತ್ತು.
ಕರಾವಳಿ ಕನ್ನಡಿಗರಿಗೆ ಮುಂಬಯಿ ಯಾನವನ್ನು ಸುಲಭವಾಗಿಸಿದ ಮತ್ಸ್ಯ ಗಂಧ ರೈಲು ಜನರ ಮನಸ್ಸಿನಲ್ಲಿ ಸದಾ ವಿಶಿಷ್ಟವಾದ ಸ್ಥಾನವನ್ನು ಪಡೆದೆಕೊಂಡಿದೆ. ಸ್ವರಾಸ್ಯಕರ ವಿಷಯ ಎಂದರೆ ಅದೆಷ್ಟೋ ಮಂದಿಗೆ ಈ ರೈಲಿನಲ್ಲಿಯೇ ಒಬ್ಬರಿಗೊಬ್ಬರು ಪರಿಚಯವಾಗಿ ವ್ಯವಹಾರ ಕುದುರಿದ ಸಂಗತಿಗಳಿವೆ. ಇನ್ನೂ ಕೆಲವರಿಗೆ ವೈವಾಹಿಕ ಸಂಬಂದಗಳು ಬೆಳೆದಂತಹ ಪ್ರಸಂಗಗಳು ನಡೆದಿದೆ. ಈ ಎಲ್ಲಾ ಕಾರಣಗಳಿಗೂ ಮತ್ಸ್ಯ ಗಂಧ ಎಲ್ಲರಿಗೂ ವಿಶೇಷವಾಗಿದೆ.